Kerala: ವೈದ್ಯೆ ಹತ್ಯೆಗಿಲ್ಲ ಸಿಬಿಐ ತನಿಖೆ: ಹೈಕೋರ್ಟ್
Team Udayavani, Feb 6, 2024, 9:54 PM IST
ಕೊಚ್ಚಿ: ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಮೇನಲ್ಲಿ ರೋಗಿಯೊಬ್ಬನಿಂದ ಡಾ. ವಂದನಾ ದಾಸ್ ಅವರ ಕ್ರೂರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಇದೇ ವೇಳೆ ಆರೋಪಿ ಜಿ.ಸಂದೀಪ್ ಜಾಮೀನು ಅರ್ಜಿಯನ್ನು ಕೂಡ ಹೈಕೋರ್ಟ್ ವಜಾಗೊಳಿಸಿದೆ. ಆತನಿಂದ ಸಮಾಜಕ್ಕೆ ಅಪಾಯ ಉಂಟಾಗಬಹುದು ಎಂದು ಪರಿಗಣಿಸಿ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.