Kundapur: ಚಿನ್ನ, ಒಡವೆ ನೀಡದೇ ವಂಚನೆ
Team Udayavani, Feb 7, 2024, 11:29 PM IST
ಕುಂದಾಪುರ: ಹಂಗಳೂರಿನ ಪೂಜಾ (22) ಅವರಿಗೆ ಚಿನ್ನ ಹಾಗೂ ಒಡವೆ ನೀಡದೇ ವಂಚಿಸಿದ ಕುರಿತು ಚಿಕ್ಕಮ್ಮನ ಮೇಲೆ ದೂರು ನೀಡಲಾಗಿದೆ.
ಪೂಜಾ ಅವರಿಗೆ 2 ವರ್ಷವಿದ್ದಾಗ ಅವರ ತಾಯಿ ಗೀತಾ ಮೃತಪಟ್ಟಿದ್ದು, ಗೀತಾ ಅವರ 10 ಲಕ್ಷ ರೂ. ಹಣ ಮತ್ತು 400 ಗ್ರಾಂನಷ್ಟು ಚಿನ್ನಾಭರಣಗಳನ್ನು ಪೂಜಾ ಅವರ ಅಜ್ಜಿ ಸಾಧು ಯಾನೆ ಶಾರದಾ ಮತ್ತು ಚಿಕ್ಕಮ್ಮಂದಿರಾದ ಸವಿತಾ ಹಾಗೂ ಸುನೀತಾರವರು ಸ್ವಾಧೀನದಲ್ಲಿಟ್ಟು ಕೊಂಡಿದ್ದರು. ಸಾಧು ಅವರು ಆರೋಪಿ ಸುನೀತಾ ಅವರಲ್ಲಿ 10 ಲಕ್ಷ ರೂ. ಪೂಜಾ ಹೆಸರಿಗೆ ಡಿಪಾಸಿಟ್ ಇಡುವಂತೆ ಹೇಳಿದ್ದು ಆರೋಪಿ ಸ್ವಂತ ಹೆಸರಿನಲ್ಲಿ ಡಿಪಾಸಿಟ್ ಇಟ್ಟು ಪೂಜಾಗೆ 6 ಲಕ್ಷ ರೂ. ರಸೀದಿ ಮಾತ್ರ ನೀಡಿದ್ದರು. ಪ್ರೌಢಶಾಲೆಗೆ ಹೋಗುವಾಗ ಹೊಡೆದು, ಬೈದು, ವಿಷ ಆಹಾರ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು. ಅಜ್ಜಿ ಸಾಧು ಮರಣದ ಅನಂತರ ಚಿನ್ನಾಭರಣ ಹಾಗೂ ಹಣ ವಾಪಸ್ ನೀಡದೇ ಮೋಸ ಮಾಡಿದ್ದಾಗಿ ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ