ಕುಷ್ಟಗಿ: ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ


Team Udayavani, Mar 9, 2023, 11:38 AM IST

3–kushtagi

ಕುಷ್ಟಗಿ: ತಾಲೂಕಿನ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜರಗುವ ಭಾವೈಕ್ಯತೆ ಬೆಸೆಯುವ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಬುತ್ತಿಯ ನೆಪದಲ್ಲಿ ಹಲವು ಮನಸ್ಸುಗಳು ಸಂಗಮವಾಯಿತು.

ಅನ್ನದಾಸೋಹಿ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವಿಶೇಷತೆಯೇ ಬೆಳದಿಂಗಳ ಬುತ್ತಿ ಜಾತ್ರೆ. ಈ ಜಾತ್ರೆಯಲ್ಲಿ ಬಡವ, ಬಲ್ಲಿದ, ಮೇಲ್ಜಾತಿ, ಕೆಳಜಾತಿ ಅಂತರ ಇಲ್ಲದೇ ಒಂದೆಡೆ ಕುಳಿತು, ಹಂಚಿ ತಿನ್ನುವ ಭೋಜನವೇ ಈ ಬೆಳದಿಂಗಳ ಬುತ್ತಿ ಜಾತ್ರೆಯಾಗಿದೆ.

ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮಾರನೇ ದಿನದ ಬೆಳಕಲ್ಲಿ ನಡೆಯುವ ಈ ಜಾತ್ರೆಗೆ ಗ್ರಾಮದ ಸುತ್ತಮುತ್ತಲಿನ ಜನರು, ತಮ್ಮ ಮನೆಯಲ್ಲಿ ತಯಾರಿಸಿದ ಬಿಳಿಜೋಳ, ಸಜ್ಜೆಯ ಖಡಕ್ ರೊಟ್ಟಿ, ತರಹೇವಾರಿ ಪಲ್ಲೆ, ಮೊಸರು, ಕಡಲೆ, ಗುರೆಳ್ಳು ಒಂದೆ ಎರಡೇ ವಿವಿಧ ಐಟಂಗಳು ರೊಟ್ಟಿ ಕಾಣದಷ್ಟು ತುಂಬಿರುತ್ತವೆ.

ಈ ಬುತ್ತಿ ಜಾತ್ರೆಗೆ ವನಕಾಂಡ, ಬೆಳದಿಂಗಳ ಬುತ್ತಿ ಜಾತ್ರೆ ಎಂದು ಕರೆಯಲಾಗುತ್ತಿದ್ದು, ಈ ಬೆಳದಿಂಗಳ ಬುತ್ತಿ ಜಾತ್ರೆಯ ಐದು ದಿನಗಳಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಸಜ್ಜಾಗುವ ಸಂಬಂಧ ಈ ಬುತ್ತಿ ಜಾತ್ರೆ ಜಾತ್ರೋತ್ಸವ ಬುತ್ತಿ ಜಾತ್ರೆಯಾಗಿದೆ.

ಈ ಬುತ್ತಿ ಜಾತ್ರೆ ಸಂಧರ್ಭದಲ್ಲಿ ತೋಪಲಕಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕೊರಡಕೇರಾ, ಕವಲ ಬೋದೂರು, ವಣಗೇರಾ, ನಿಡಶೇಸಿ, ಚಳಗೇರಾದಿಂದ ಸಾವಿರಾರು ಬುತ್ತಿಯನ್ನು ಎತ್ತಿನ ಬಂಡಿಯಲ್ಲಿ ತಂದು ತಳವಗೇರಾ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಇಡುತ್ತಾರೆ.

ನಂತರ ತಳವಗೇರಾ ಜನರ ಬುತ್ತಿಗಳು ಸೇರಿದಂತೆ ಸಾವಿರಾರು ಬುತ್ತಿಗಳು ಕರಡಿ ಮಜಲು ಮೆರವಣಿಗೆಯೊಂದಿಗೆ ಆದರ್ಶ ಶಾಲೆಯ ಮೈದಾನದಲ್ಲಿ ಕುಳಿತು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆದ್ಮಾತ್ಮಿಕ ಪ್ರವಚನ ನೀಡಿದರು.

ಬಳಿಕ ಬೆಳದಿಂಗ ಬುತ್ತಿ ಜಾತ್ರೆಯಲ್ಲಿ ಪರಸ್ಪರ ಹಂಚಿಕೊಂಡು ಭೋಜನ ಸವಿಯುತ್ತಾರೆ. ಈ ಜಾತ್ರೆಗೆ ಬಂದವರು ಯಾರೂ ಹಾಗೆಯೇ ಹೋಗುವುದಿಲ್ಲ ಇಲ್ಲಿ ಊಟ ಮಾಡಿ ಹೋಗಬೇಕು. ದೇವಸ್ಥಾನ ಸಮಿತಿಯಿಂದ ಬಾನ ಸಂಗಟಿ ಮಾಡಿಸುತ್ತಿದ್ದು ಈ ಬಾನ, ಸಂಗಟಿ ಸಾರು ಕೊರತೆಯಾಗಬಾರದು, ಉಳಿದರೆ ಸಮೃದ್ದಿ ಹೆಚ್ಚಲಿದೆ ಎಂಬ ವಾಡಿಕೆ ಜನಮಾನಸದಲ್ಲಿದೆ.

ಈ ಬಾರಿಯ ಬುತ್ತಿ ಜಾತ್ರೆಗೆ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಅವರಿಗೆ ನಾಮಾಂಜಲಿಯ ಮೂಲಕ ಶ್ರಧ್ಧಾಂಜಲಿ ಸಲ್ಲಿಸಲಾಯಿತು.

ಇದೇ ವೇಳೆ ತಾವರಗೇರಾದ ಯುವ ಕಲಾವಿದ ಆನಂದ ಪತ್ರಿಮಠ ಅವರು, ಸಂತನೆಂದರೆ ಯಾರು.. ಎಂಬ ಹಾಡಿಗೆ, ಕ್ಯಾನವಾಸನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು.

ಈ ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ದೇವೇಂದ್ರಪ್ಪ ಬಳೂಟಗಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿ.ಎಂ. ಹಿರೇಮಠ, ಬೆಂಗಳೂರಿನ ಉದ್ಯಮಿ ಸಂಗಯ್ಯ ಹಿರೇಮಠ. ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮುಖಂಡ ಪ್ರಭಾಕಾರ ಚಿಣಿ ಮತ್ತಿತರರಿದ್ದರು.

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ದೋಣಿಯಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ದೋಣಿಯಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.