Kannada: ಎಳೆಯೋಣ “ಕನ್ನಡದ ತೇರು”- ವರ್ಷವಿಡೀ “ಸುವರ್ಣ” ಸಂಭ್ರಮ
ಇಂದು ನೀವೇನು ಮಾಡಬೇಕು?
Team Udayavani, Nov 1, 2023, 12:03 AM IST
ಬೆಂಗಳೂರು: “ಕರ್ನಾಟಕ’ ವೆಂದು ನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ವರ್ಷವಿಡೀ ರಾಜ್ಯವ್ಯಾಪಿ ಸಂಭ್ರಮ – ಸಡಗರದಿಂದ ಕನ್ನಡದ ತೇರನ್ನು ಎಳೆಯುವ ಯೋಜನೆಯನ್ನು ಹಮ್ಮಿಕೊಂಡಿದೆ.
ಬುಧವಾರ ಜಿಲ್ಲಾ, ತಾಲೂಕು ಕೇಂದ್ರ, ಶಾಲಾ ಕಾಲೇಜುಗಳಲ್ಲಿ ರಾಷ್ಟ್ರ ಧ್ವಜಾರೋಹಣ, ಕನ್ನಡ ಹಾಡುಗಳ ಗಾಯನ, ರಂಗೋಲಿ, ಕನ್ನಡದ ಜ್ಯೋತಿ ಬೆಳಗಿಸುವುದು, ಕೆಂಪು -ಹಳದಿ ಗಾಳಿಪಟ ಹಾರಾಟ, ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಹೀಗೆ ರಾಜ್ಯವ್ಯಾಪಿ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಲಿದೆ.
ಇಂದು ನೀವೇನು ಮಾಡಬೇಕು?
ಮನೆಗಳ ಮುಂದೆ ಕೆಂಪು-ಹಳದಿ ಕನ್ನಡ ಬಾವುಟವನ್ನು ಹಾರಿಸಿ
ರಾಜ್ಯೋತ್ಸವವನ್ನು ಬಿಂಬಿಸುವ ರಂಗೋಲಿಗಳನ್ನು ಹಾಕಿ
ಎಲ್ಲ ಮನೆಗಳಲ್ಲಿ ಬೆಳಗ್ಗೆ 9 ಗಂಟೆಗೆ ನಾಡಗೀತೆ ಮೊಳಗಲಿ
ಸಂಜೆ 5 ಗಂಟೆಗೆ ನಿಮ್ಮ ಊರಿನ ಮೈದಾನದಲ್ಲಿ ಕೆಂಪು-ಹಳದಿ ಗಾಳಿಪಟ ಹಾರಿಸಿ
ಸಂಜೆ 7ಕ್ಕೆ ಮನೆಗಳಲ್ಲಿ ಹಣತೆ ಹಚ್ಚಿ ಕನ್ನಡ ಜ್ಯೋತಿ ಬೆಳಗಿಸಿ
“ಕರ್ನಾಟಕ ಪಾಕ್” ತಯಾರಿ
ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ, ಮೈಸೂರಿನಲ್ಲಿ ಮಾಜಿ ಸಿಎಂ ದೇವರಾಜ ಅರಸು ಪ್ರತಿಮೆ ನಿರ್ಮಾಣ, ಸಿದ್ಧಾಪುರದ ಭುವನೇಶ್ವರಿ ಪ್ರತಿಮೆ ಜೀರ್ಣೋದ್ಧಾರವನ್ನು ಕೈಗೊಳ್ಳುವುದಾಗಿ ಸರಕಾರ ಭರವಸೆ ನೀಡಿದೆ. 50 ಸಾಧಕ ಮಹಿಳೆಯರಿಗೆ ಸಮ್ಮಾನ, ಕಲೆ, ಸಾಹಿತ್ಯ, ಜಾನಪದ, ಸಂಸ್ಕೃತಿ ಕುರಿತು 50 ಪುಸ್ತಕ ಬಿಡುಗಡೆ, ಮೈಸೂರುಪಾಕ್ 50ರ ನೆನಪಿಗೆ ಕೆಎಂಎಫ್ ಸಹಯೋಗದಲ್ಲಿ “ಕರ್ನಾಟಕಪಾಕ್’ ತಯಾರಿ ಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್