ಶೇ. 97ರಷ್ಟು ವಂಶ ವೃದ್ಧಿಸಿಕೊಂಡ ವನರಾಜ
Team Udayavani, Jul 11, 2020, 12:24 PM IST
ಗುಜರಾತ್: ಏಷ್ಯಾ ಸಿಂಹಗಳ ಆಶ್ರಯತಾಣವಾದ ಗುಜರಾತ್ನಲ್ಲಿ ರಕ್ಷಿತಾರಣ್ಯಕ್ಕಿಂತ ಅದರ ಹೊರಗಿನ ವಲಯಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿರುವ ಅಚ್ಚರಿಯ ಬೆಳವಣಿಗೆ ವರದಿಯಾಗಿದೆ. ಗುಜರಾತ್ ಅರಣ್ಯ ಇಲಾಖೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸುವ ಪೂನಂ ಅವಲೋಕನ್ ಎಂಬ ಸಿಂಹಗಳ ಗಣತಿಯನ್ನು ಕಳೆದ ತಿಂಗಳು ನಡೆಸಲಾಗಿದೆ. ಅದರಲ್ಲಿ, ರಕ್ಷಿತಾರಣ್ಯದ ಹೊರವಲಯಗಳಲ್ಲಿ ವನರಾಜನ ಸಂಖ್ಯೆ ಶೇ. 97ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ.
ಸಂರಕ್ಷಿತ ವಲಯದಲ್ಲಿ ಕುಸಿತ
2015ರಲ್ಲಿ ರಕ್ಷಿತಾರಣ್ಯಗಳನ್ನು ಹೊರತುಪಡಿಸಿದ ಪ್ರಾಂತ್ಯಗಳಲ್ಲಿ ನಡೆಸಿದ್ದ ಗಣತಿಯ ವೇಳೆ 167 ಸಿಂಹ ಗಳು ಪತ್ತೆಯಾಗಿದ್ದವು. ಈಗ ಅವುಗಳ ಸಂಖ್ಯೆ 329 ಕ್ಕೇರಿದೆ. ಅಲ್ಲಿಗೆ ಅವುಗಳ ವಂಶಾಭಿವೃದ್ಧಿ ಶೇ. 97ರಷ್ಟು ಹೆಚ್ಚಾ ದಂತಾಗಿದೆ. ಆದರೆ, ರಕ್ಷಿತಾ ವಲಯಗಳಲ್ಲಿ 2015ರ ಹೊತ್ತಿಗೆ 356ರಷ್ಟಿದ್ದ ಸಿಂಹಗಳು, ಈ ವರ್ಷ 345ಕ್ಕೆ ಇಳಿದಿವೆ. ಅಲ್ಲಿಗೆ, ಅವುಗಳ ಸಂಖ್ಯೆ ಶೇ. 3.1ರಷ್ಟು ಕಡಿಮೆಯಾದಂತಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹ!
ಭಾವನಗರ್, ಅಮ್ರೇಲಿ, ಜುನಾಗಢ ಹಾಗೂ ಗಿರ್ ಸೋಮನಾಥ್ – ಈ ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹಗಳ ಲೆಕ್ಕ ಪತ್ತೆಯಾಗಿದೆ. ಆದರೆ, ಈ ಹಿಂದೆಲ್ಲಾ ಅವು ಸಾಮಾನ್ಯವಾಗಿ ಕಾಣಸಿಗುತ್ತಿದ್ದ ಬೋಟಾಡ್, ಸುರೇಂದ್ರ ನಗರ್, ರಾಜಕೋಟ್ಗಳಲ್ಲಿ ಈ ಬಾರಿ ಒಂದೇ ಒಂದು ಸಿಂಹವೂ ಕಾಣಸಿಕ್ಕಿಲ್ಲ. ಅವುಗಳೆಲ್ಲಾ ದೇಶದ ಆಗ್ನೇಯ ದಿಕ್ಕಿನತ್ತ ಪ್ರಯಾಣ ಬೆಳೆಸಿರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ