ಶೇ. 97ರಷ್ಟು ವಂಶ ವೃದ್ಧಿಸಿಕೊಂಡ ವನರಾಜ
Team Udayavani, Jul 11, 2020, 12:24 PM IST
ಗುಜರಾತ್: ಏಷ್ಯಾ ಸಿಂಹಗಳ ಆಶ್ರಯತಾಣವಾದ ಗುಜರಾತ್ನಲ್ಲಿ ರಕ್ಷಿತಾರಣ್ಯಕ್ಕಿಂತ ಅದರ ಹೊರಗಿನ ವಲಯಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿರುವ ಅಚ್ಚರಿಯ ಬೆಳವಣಿಗೆ ವರದಿಯಾಗಿದೆ. ಗುಜರಾತ್ ಅರಣ್ಯ ಇಲಾಖೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸುವ ಪೂನಂ ಅವಲೋಕನ್ ಎಂಬ ಸಿಂಹಗಳ ಗಣತಿಯನ್ನು ಕಳೆದ ತಿಂಗಳು ನಡೆಸಲಾಗಿದೆ. ಅದರಲ್ಲಿ, ರಕ್ಷಿತಾರಣ್ಯದ ಹೊರವಲಯಗಳಲ್ಲಿ ವನರಾಜನ ಸಂಖ್ಯೆ ಶೇ. 97ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ.
ಸಂರಕ್ಷಿತ ವಲಯದಲ್ಲಿ ಕುಸಿತ
2015ರಲ್ಲಿ ರಕ್ಷಿತಾರಣ್ಯಗಳನ್ನು ಹೊರತುಪಡಿಸಿದ ಪ್ರಾಂತ್ಯಗಳಲ್ಲಿ ನಡೆಸಿದ್ದ ಗಣತಿಯ ವೇಳೆ 167 ಸಿಂಹ ಗಳು ಪತ್ತೆಯಾಗಿದ್ದವು. ಈಗ ಅವುಗಳ ಸಂಖ್ಯೆ 329 ಕ್ಕೇರಿದೆ. ಅಲ್ಲಿಗೆ ಅವುಗಳ ವಂಶಾಭಿವೃದ್ಧಿ ಶೇ. 97ರಷ್ಟು ಹೆಚ್ಚಾ ದಂತಾಗಿದೆ. ಆದರೆ, ರಕ್ಷಿತಾ ವಲಯಗಳಲ್ಲಿ 2015ರ ಹೊತ್ತಿಗೆ 356ರಷ್ಟಿದ್ದ ಸಿಂಹಗಳು, ಈ ವರ್ಷ 345ಕ್ಕೆ ಇಳಿದಿವೆ. ಅಲ್ಲಿಗೆ, ಅವುಗಳ ಸಂಖ್ಯೆ ಶೇ. 3.1ರಷ್ಟು ಕಡಿಮೆಯಾದಂತಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹ!
ಭಾವನಗರ್, ಅಮ್ರೇಲಿ, ಜುನಾಗಢ ಹಾಗೂ ಗಿರ್ ಸೋಮನಾಥ್ – ಈ ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹಗಳ ಲೆಕ್ಕ ಪತ್ತೆಯಾಗಿದೆ. ಆದರೆ, ಈ ಹಿಂದೆಲ್ಲಾ ಅವು ಸಾಮಾನ್ಯವಾಗಿ ಕಾಣಸಿಗುತ್ತಿದ್ದ ಬೋಟಾಡ್, ಸುರೇಂದ್ರ ನಗರ್, ರಾಜಕೋಟ್ಗಳಲ್ಲಿ ಈ ಬಾರಿ ಒಂದೇ ಒಂದು ಸಿಂಹವೂ ಕಾಣಸಿಕ್ಕಿಲ್ಲ. ಅವುಗಳೆಲ್ಲಾ ದೇಶದ ಆಗ್ನೇಯ ದಿಕ್ಕಿನತ್ತ ಪ್ರಯಾಣ ಬೆಳೆಸಿರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ