ಕೋವಿಡ್‌ಗೆ ಮಡಗಾಸ್ಕರ್‌ನವರ ಗಿಡಮೂಲಿಕೆ ಕಷಾಯ!


Team Udayavani, May 17, 2020, 2:30 PM IST

ಕೋವಿಡ್‌ಗೆ ಮಡಗಾಸ್ಕರ್‌ನವರ ಗಿಡಮೂಲಿಕೆ ಕಷಾಯ!

ಅಂಟಾನಾನರಿವೊ: ಆಫ್ರಿಕದ ಪುಟ್ಟ ರಾಷ್ಟ್ರ ಮಡಗಾಸ್ಕರ್‌ ಮಹಾಮಾರಿ ಕೋವಿಡ್‌ ಅನ್ನು ಮಣಿಸಲು ಗಿಡಮೂಲಿಕಾ ಔಷಧವೊಂದರ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ರಾಷ್ಟ್ರದ ಹೆಚ್ಚಿನ ಜನರು ತಮ್ಮ ಕಾಯಿಲೆಗಳಿಗೆ
ಗಿಡಮೂಲಿಕಾ ಔಷಧಗಳನ್ನೇ ಬಳಸುತ್ತಾರೆ.

ಕೋವಿಡ್‌ ವಿರುದ್ಧ ಚಿಕಿತ್ಸೆಗೆ ಬಳಸಬಹುದಾದ ಸಾಂಪ್ರದಾಯಿಕ ಔಷಧದ ಉತ್ಪಾದನೆಗೆ ಸಂಬಂಧಿಸಿ ಕೆಲಸ ಮಾಡಲು ಮಡಗಾಸ್ಕರ್‌ ಆಫ್ರಿಕ ಒಕ್ಕೂಟ ಹಾಗೂ ರೋಗ ನಿಯಂತ್ರಣ ಕುರಿತ ಆಫ್ರಿಕ ಕೇಂದ್ರದ ಜತೆ ಒಪ್ಪಂದಕ್ಕೆ ಬಂದಿದೆ.

ಪರೀಕ್ಷೆಗೊಳಪಡದ ಔಷಧವೊಂದರ ಸಂಭಾವ್ಯ ಅಪಾಯ ಹಾಗೂ ಅಪಪ್ರಚಾರ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದ್ದರೂ ಮಡಗಾಸ್ಕರ್‌ ಅಧ್ಯಕ್ಷ ಆ್ಯಂಡಿ ರಜೊಲಿನ ಅವರು ಎ. 20ರಂದು ಈ ಕುರಿತ ಸಮ್ಮೇಳನವೊಂದರಲ್ಲಿ ಭಾಗವಹಿದ್ದರು.

ಈ ಔಷಧವನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗಿಲ್ಲ. ಮಲೇರಿಯಕ್ಕೆ ಪರಿಣಾಮಕಾರಿಯೆಂದು ಸಾಬೀತಾಗಿರುವ ಔಷಧವೊಂದರ ಅಂಶಕ್ಕೆ ಪ್ರತಿರೋಧವನ್ನು ಅದು ಹೆಚ್ಚಿಸಬಹುದು. ಇದು ಮಾರಣಾಂತಿಕ ಸೋಂಕಿಗೆ ಸಂಬಂಧಿಸಿದ ಅಪಾಯವನ್ನು ಇನ್ನಷ್ಟು ಅಧಿಕಗೊಳಿಸಬಹುದು ಎಂದು ಪ್ರಾಯೋಗಿಕ ಔಷಧಗಳ ತಜ್ಞ ಡಾ| ಆರ್ಥರ್‌ ಗ್ರೋಲ್‌ವುನ್‌ ಹೇಳುತ್ತಾರೆ. ಯಾವುದೇ ಔಷಧವನ್ನು ಮಾನವರ ಮೇಲೆ ಪ್ರಯೋಗಿಸುವುದಕ್ಕೆ ಮುಂಚೆ ಕಠಿನ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಅದರ ಪರಿಣಾಮಕಾರತ್ವ ಹಾಗೂ ಸುರಕ್ಷತೆಯನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಹೇಳಿದೆ. ಟಾನಿಕ್‌ ಅನ್ನು ತಯಾರಿಸಲಾಗುವ ಆರ್ಟೆಮೀಸಿಯ ಅನುವಾ ಮುಂತಾದ ಔಷಧೀಯ ಸಸ್ಯಗಳ‌ನ್ನು ಸಂಭಾವ್ಯ ಪರಿಹಾರವೆಂದು ಪರಿಗಣಿಸಲಾಗುತ್ತಿದೆ. ಆದರೆ ಅವುಗಳ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮಗಳ ಕುರಿತು ಅಧ್ಯಯನ ನಡೆಯಬೇಕು ಎಂದು ಅದು ಹೇಳಿದೆ.

ಅಲ್ಲದೆ ಕೆಲವೊಂದು ಔಷಧಗಳ ಪರಿಣಾಮಕಾರಿತ್ವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯುವ ಅಪಪ್ರಚಾರ ಕುರಿತು ಎಚ್ಚರ ವಹಿಸಬೇಕು. ಅನೇಕ ಸಸ್ಯಗಳು ಹಾಗೂ ಉತ್ಪನ್ನಗಳನ್ನು ಕೋವಿಡ್‌ಗೆ ಔಷಧವೆಂದು ಕನಿಷ್ಠ ಅಗತ್ಯಗಳನ್ನು ಪೂರೈಸದೆ ಮತ್ತು ಅವುಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಕುರಿತು ಪುರಾವೆಯಿಲ್ಲದೆ ಹೇಳಲಾಗುತ್ತಿದೆ. ಇವುಗಳ ಕುರಿತು ಸರಿಯಾದ ಅಧ್ಯಯನ ನಡೆಯದೆ ಕೋವಿಡ್‌-19 ರೋಗಿಗಳಿಗೆ ಬಳಸಿದಲ್ಲಿ ಆದು ಅವರ ಪಾಲಿಗೆ ಮಾರಣಾಂತಿಕವಾಗಬಲ್ಲುದು.

ಅಲ್ಲದೆ ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಕೈ ತೊಳೆಯುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರು ಅಸಡ್ಡೆ ತೋರಿಸುವ ಅಪಾಯವಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಡಗಾಸ್ಕರ್‌ ಅಧ್ಯಕ್ಷರು ಕಳೆದ ತಿಂಗಳು ಬಾಟಲಿಯೊಂದರಿಂದ ಬಣ್ಣದ ದ್ರವನ್ನು ಹೀರುತ್ತ ಕೋವಿಡ್‌-19 ಚಿಕಿತ್ಸೆಗೆ ದೇಶದ ಸಂಶೋಧನಾ ಸಂಸ್ಥೆ ಕೋವಿಡ್‌ ಆರ್ಗಾನಿಕ್ಸ್‌ ಅಥವಾ ಸಿವಿಒ ಎನ್ನುವ ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದರು.

ಟಾಪ್ ನ್ಯೂಸ್

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.