ಮಧುಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಅಪಾರ ಬೆಳೆ ನಾಶ
Team Udayavani, Feb 13, 2023, 12:57 PM IST
ಮಧುಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರೈತರ ಅಪಾರ ತೆಂಗು ಹಾಗೂ ಅಡಿಕೆ ಬೆಳೆ ನಾಶವಾಗಿದ್ದು, ಪರಿಹಾರಕ್ಕಾಗಿ ರೈತರು ಮೊರೆಯಿಡುತ್ತಿದ್ದಾರೆ.
ತಾಲೂಕಿನ ದೊಡ್ಡೇರಿ ಹೋಬಳಿಯ ಬಿಟ್ಟನಕುರಿಕೆ ಗ್ರಾಮದ ರೈತ ಹನುಂಮತರಾಯಪ್ಪ ಎಂಬವರ ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಜಮೀನಿನೆಲ್ಲೆಡೆ ಹರಡಿಕೊಂಡಿದೆ.
ಇದರ ಪರಿಣಾಮ ಮದ್ಲೇರಹಳ್ಳಿ ಜಮೀನಿನಲ್ಲಿ ಬೆಳೆಯಲಾಗಿದ್ದ 350 ತೆಂಗು ಹಾಗೂ 150 ಅಡಿಕೆ ಮರಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಮಯ ಈ ಅವಘಡ ನಡೆದಿದ್ದು, ಬೆಂಕಿ ಆರಿಸುವಷ್ಟರಲ್ಲಿ ಶೇ.75 ರಷ್ಟು ಮರಗಳು ಸುಟ್ಟು ಹೋಗಿದ್ದವು.
ತೋಟ ಉಳಿಸಿಕೊಳ್ಳಲು ನೀರು ಬೇಕು ಎಂದು ಬಡವನಹಳ್ಳಿ ಬೆಸ್ಕಾಂ ಕಚೇರಿಗೆ ತೆರಳಿದ ರೈತ ಮೋಟಾರ್ ಪಂಪಿಗೆ ವಿದ್ಯುತ್ ಸರಬರಾಜು ನೀಡುವಂತೆ ಮನವಿ ಮಾಡಿದ್ದು, ಬೇಗ ಕ್ರಮ ವಹಿಸುವುದಾಗಿ ಎಸ್ ಓ ಮಾರುತಿ ಖೇಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ