ಮಡಿಕೇರಿ: ಗುಂಡೇಟು ತಗುಲಿ ಬೇಟೆಗೆ ತೆರಳಿದಾತ ಸಾವು; ಇಬ್ಬರು ಶರಣು
Team Udayavani, Apr 25, 2022, 10:40 AM IST
ಮಡಿಕೇರಿ: ಬೇಟೆಗೆಂದು ಕಾಡಿಗೆ ಹೋದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ಸಂಭವಿಸಿದೆ.
ವೀರಾಜಪೇಟೆಯ ಗುಂಡಿಕೆರೆ ನಿವಾಸಿ ಹಮೀದ್ (35) ಗುಂಡೇಟಿಗೆ ಮೃತಪಟ್ಟಿದ್ದಾರೆ. ಹಮೀದ್ ಸೇರಿದಂತೆ ಮೂವರು ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದು, ಈ ಸಂದರ್ಭ ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗಲಿದೆ ಎನ್ನಲಾಗಿದೆ. ಜತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಟೆಗೆ ಹೋದವರಲ್ಲಿ ಇನ್ನೂ ಹಲವರಿದ್ದರು ಎಂದು ಆರೋಪವಿದ್ದು ತನಿಖೆ ಮುಂದುವರಿದಿದೆ.