Malpe: ಬೋಟಿನಿಂದ ನೀರಿಗೆ ಬಿದ್ದ ಮೀನುಗಾರ ಕಣ್ಮರೆ
Team Udayavani, Sep 8, 2023, 11:12 PM IST
ಮಲ್ಪೆ: ಬಹಿರ್ದೆಸೆಗೆಂದು ಬೋಟಿನಿಂದ ದಕ್ಕೆ ಕಡೆಗೆ ನಡೆದು ಕೊಂಡು ಹೋಗುವಾಗ ಮೀನುಗಾರ ನಾಗಸ್ವಾಮಿ (44) ಅವರು ಆಯತಪ್ಪಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದಾರೆ.
ಅವರು ಮಲ್ಪೆಯ ಜೈಮಾತಾ ಬೋಟಿನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದರು. ಮೀನುಗಾರಿಕೆ ಕೆಲಸ ಮುಗಿಸಿ ಬೋಟನ್ನು ದಕ್ಕೆಯಲ್ಲಿ ನಿಲ್ಲಿಸಿ ರಾತ್ರಿ ಊಟ ಮಾಡಿ ವಾಪಸು ಅದೇ ಬೋಟಿನಲ್ಲಿ ಮಲಗಿದ್ದರು. ರಾತ್ರಿ 10.45ರ ವೇಳೆಗೆ ಬಹಿರ್ದೆಸೆಗೆಂದು ಹೋಗುವಾಗ ನೀರಿಗೆ ಬಿದ್ದಿದ್ದರು.
ನೀರಿಗೆ ಬಿದ್ದ ಶಬ್ದ ಕೇಳಿ ಬೋಟಿನಲ್ಲಿ ಮಲಗಿದ್ದ ಬಾಬುಜಿ ಮತ್ತು ಮುರಗೇಶ ಎಚ್ಚರಗೊಂಡು ನಾಗಸ್ವಾಮಿಯ ರಕ್ಷಣೆಗೆ ಧಾವಿಸಿದ್ದು, ಬೋಟಿನಿಂದ ಹಗ್ಗವನ್ನು ನೀರಿಗೆ ಎಸೆದಿದ್ದಾರೆ. ಆದರೆ, ನಾಗಸ್ವಾಮಿ ಮದ್ಯ ಸೇವನೆ ಮಾಡಿದ್ದರಿಂದ ಹಗ್ಗವನ್ನು ಹಿಡಿಯಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಡೆಯಾಗಿದ್ದರು.
ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಆಗಮಿಸಿ ಹುಡುಕಾಟ ನಡೆಸಿದರೂ, ನಾಪತ್ತೆಯಾಗಿದ್ದ ನಾಗಸ್ವಾಮಿ ಪತ್ತೆಯಾಗಿಲ್ಲ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ