ಸಚಿವ ಅಶೋಕ ಪುತ್ರನ ಅಪಘಾತಕ್ಕೆ ದಿನಕ್ಕೊಂದು ತಿರುವು!


Team Udayavani, Feb 16, 2020, 3:07 AM IST

sachiva

ಬಳ್ಳಾರಿ: ಕಂದಾಯ ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಹೆಸರು ತಳಕು ಹಾಕಿಕೊಂಡಿರುವ ಜಿಲ್ಲೆಯ ಮರಿಯಮ್ಮನಹಳ್ಳಿ ರಸ್ತೆ ಅಪಘಾತ ಪ್ರಕರಣ ದಿನ ಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಘಟನೆಗೆ ತನಿಖಾಧಿಕಾರಿಯನ್ನು ನೇಮಿಸಿರುವ ಸಿಪಿಐ ಶೇಖರಪ್ಪ ಮೇಲೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದರೆ, ಖಾಸಗಿ ಆಸ್ಪತ್ರೆ ಸಿಸಿ ಕ್ಯಾಮೆರಾದಲ್ಲೂ ಸಚಿವರ ಪುತ್ರ ಇರುವ ಬಗ್ಗೆ ಖಚಿತತೆ ಇಲ್ಲ ಎನ್ನಲಾಗುತ್ತಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಫೆ.10ರಂದು ಮಧ್ಯಾಹ್ನ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತವಾಗಿದೆ. ಘಟನೆಯಲ್ಲಿ ಮೃತಪಟ್ಟಿದ್ದ ಸಚಿನ್‌ ಸೇರಿ ಗಾಯಗೊಂಡಿದ್ದ ನಾಲ್ವರು ಮೊದಲು ಹೊಸಪೇಟೆಯ ಮೈತ್ರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ನೋಡಿದ್ದ ವೈದ್ಯರು, ಅಪಘಾತ ಪ್ರಕರಣವಾದ್ದರಿಂದ ಸರ್ಕಾರಿ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಗಾಯಾಳು ಗಳು ಯಾರ ಕಡೆಯವರು ಎಂಬುದು ಆಗ ಗೊತ್ತಿ ರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾ ದಾಗಲೇ ಪ್ರಕರಣದ ಬಗ್ಗೆ ತಿಳಿಯಿತು ಎಂದು ಆಸ್ಪತ್ರೆ ವೈದ್ಯ ಡಾ|ಪೆರುಮಾಳ್‌ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶೇಖರಪ್ಪ ಮೇಲೆ ಅನುಮಾನ: ತನಿಖಾಧಿಕಾರಿ ಯನ್ನಾಗಿ ನೇಮಿಸಿರುವ ಸಿಪಿಐ ಶೇಖರಪ್ಪ ಮೇಲೆ ಸಾರ್ವ ಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾ ಗುತ್ತಿವೆ. ಕಾರಣ ಸಿಪಿಐ ಶೇಖರಪ್ಪ ಬಳ್ಳಾರಿಯ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಅವರ ಅಳಿಯ. ಘಟನೆಯಲ್ಲಿ ಥಳುಕು ಹಾಕಿಕೊಂಡಿರುವ ಶರತ್‌ ಸಹ ಹಾಲಿ ಬಿಜೆಪಿ ಸರ್ಕಾರದ ಸಚಿವ ಆರ್‌.ಅಶೋಕ್‌ ಮಗ. ಹಾಗಾಗಿ ಘಟನೆ ತನಿಖೆಯನ್ನು ಸಿಪಿಐ ಶೇಖರಪ್ಪ ಪಾರದರ್ಶಕವಾಗಿ ಮಾಡುತ್ತಾರಾ ಅಥವಾ ಬಿಜೆಪಿ ಸಂಸದರು, ಸಚಿವರನ್ನು ಸಂರಕ್ಷಣೆ ಮಾಡು ತ್ತಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸಿಸಿ ಕ್ಯಾಮರಾದಲ್ಲಿ ಸಚಿವರ ಮಗ ಇಲ್ಲ: ಹೊಸ ಪೇಟೆಯ ಮೈತ್ರಿ ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿರುವ ದೃಶ್ಯಗಳು ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಇಲ್ಲ ಎನ್ನಲಾಗುತ್ತಿದೆ. ಪೊಲೀಸರು ಸಹ ಮೊದಲಿಂದಲೂ ಸಚಿವರ ಪುತ್ರ ಇಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಘಟನೆಯಲ್ಲಿ ಸಚಿವರ ಪುತ್ರ ಇದ್ದಾನೆಂಬ ಸುದ್ದಿ ಹರಡಿದ್ದೇಗೆ ಎಂಬುದೇ ದೊಡ್ಡ ಪ್ರಶ್ನೆ. ಘಟನೆ ಯಲ್ಲಿ ಗಾಯಗೊಂಡವರು ಆಸ್ಪತ್ರೆಗೆ ಬಂದಿರುವುದು ರೆಕಾರ್ಡ್‌ ಆಗಿದೆ. ಆದರೆ, ಅದರಲ್ಲಿ ಸಚಿವರ ಪುತ್ರ ಇರುವ ವಿಡಿಯೋ ತುಣುಕು ಇಲ್ಲ. ಹಾಗಾದರೆ, ಅಪಘಾತ ಪ್ರಕರಣ ಇಷ್ಟೊಂದು ಗಂಭೀರವಾಗಲು ಕಾರಣವೇನು?

ನನ್ನ ಅಳಿಯನನ್ನು ಕೊಂದವರ ಗುರುತು ಹಿಡಿಯುವೆ – ಭಾರತಿ: ಇದೇ ವೇಳೆ, ಮೈತ್ರಿ ಆಸ್ಪತ್ರೆಯಲ್ಲಿ ನರ್ಸ್‌ ಕೆಲಸ ಮಾಡುತ್ತಿರುವ ಮೃತ ರವಿ ನಾಯ್ಕ ಅವರ ಅತ್ತೆ ಭಾರತಿ ಮಾತನಾಡಿ, “ಗಾಯಾಳುಗಳನ್ನು ನಾನು ಗುರುತು ಹಿಡಿಯುವೆ. ಮೃತ ಸಚಿನ್‌ ಸೇರಿ ಗಾಯಗೊಂಡ ನಾಲ್ವರು ಆಸ್ಪತ್ರೆಗೆ ಬಂದಾಗ ನಾನೇ ಅವರಿಗೆ ಸ್ಟ್ರೆಚರ್‌ ಕೊಂಡೊಯ್ದಿದ್ದೆ. ಗಾಯಗೊಂಡವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ವೈದ್ಯ ಡಾ|ಪೆರುಮಾಳ್‌ ಸ್ವಾಮಿ ಸೂಚಿಸಿದ್ದಾರೆ. ಪ್ರತಿಯೊಬ್ಬ ಗಾಯಾಳುಗಳನ್ನು ಗುರುತು ಹಿಡಿಯುತ್ತೇನೆ. ಪೊಲೀಸರು ಯಾವಾಗ ಕರೆದರೂ ಮಾಹಿತಿ ನೀಡುತ್ತೇನೆ. ನಮ್ಮ ಅಳಿಯ ಮೃತಪಟ್ಟಿರುವ ಬಗ್ಗೆ ಅಂದು ನನಗೆ ಮಾಹಿತಿ ಇರಲಿಲ್ಲ. ನಂತರವಷ್ಟೇ ತಿಳಿಯಿತು’ ಎಂದಿದ್ದಾರೆ.

ಆರೋಪಿ ರಾಹುಲ್‌ ಬಂಧನ-ಬಿಡುಗಡೆ
ಬಳ್ಳಾರಿ: ಮರಿಯಮ್ಮನಹಳ್ಳಿ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ರಾಹುಲ್‌ನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದು, ಹೊಸಪೇಟೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆಯಲ್ಲಿ ವಾಪಸ್‌ ಬೆಂಗಳೂರಿಗೆ ತೆರಳಿದ್ದಾರೆ. ಘಟನೆಯಲ್ಲಿನ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಸಿಪಿಐ ಶೇಖರಪ್ಪ ನೇತೃತ್ವದ ತಂಡ ಶುಕ್ರವಾರ ಬೆಂಗಳೂರಿಗೆ ತೆರಳಿದ್ದು, ವಾಹನ ಚಾಲಕ, ಪ್ರಮುಖ ಆರೋಪಿ ರಾಹುಲ್‌ನನ್ನು ಶನಿವಾರ ಬಂಧಿಸಿ ಕರೆ ತಂದಿತ್ತು. ಬಳಿಕ, ಹೊಸಪೇಟೆ ನ್ಯಾಯಾಲಯ ರಾಹುಲ್‌ಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪುನ: ವಾಪಸ್‌ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.