ಕೂಲಿ ಮಾಡಿದ ಹಣ ಅನ್ನದಾನಕ್ಕೆ ದೇಣಿಗೆ
Team Udayavani, Apr 28, 2020, 5:50 AM IST
ಉಡುಪಿ: ತಾನು ಕಷ್ಟದಲ್ಲಿದ್ದರೂ ಅದನ್ನು ಲೆಕ್ಕಿಸದೆ ಲಾಕ್ಡೌನ್ ಸಮಯದಲ್ಲಿ ಹಮ್ಮಿಕೊಂಡ ಅನ್ನದಾನ ಯೋಜನೆಗೆ ಕೂಲಿ ಮಾಡಿ ಸಂಗ್ರಹಿಸಿದ ಹಣವನ್ನು ನೀಡಿ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್ ಕಡಿಯಾಳಿ ತೊಂದರೆಗೆ ಸಿಲುಕಿದವರಿಗೆ ಮಾ.25ರಿಂದ ಮಧ್ಯಾಹ್ನದ ಹೊತ್ತು ನಿತ್ಯವೂ ಅನ್ನದಾನದ ಸೇವೆ ನಡೆಸುತ್ತಿದೆ. ಇವರ ಅನ್ನದಾನ ಯೋಜನೆಗೆ ಹಲವು ಮಂದಿ ದಾನಿಗಳು ನೆರವು ನೀಡುತ್ತಿದ್ದಾರೆ.
ಅನ್ನದಾನ ಯೋಜನೆಗೆ ಅಡುಗೆ ಸಿದ್ಧಪಡಿಸುವ ಕಡಿಯಾಳಿ ಶ್ರೀ ಶಾರದಾ ಕಲ್ಯಾಣ ಮಂಟಪಕ್ಕೆ ಶನಿವಾರ ಮಂಜುಳಾ ಕೆರಾಡಿ ಎಂಬ ಬಡ ಮಹಿಳೆಯೊಬ್ಬರು ಆಗಮಿಸಿ 5,000 ರೂ. ನ್ನು ಅನ್ನದಾನ ಸೇವೆಗೆ ದೇಣಿಗೆಯಾಗಿ ನೀಡಿದ್ದಾರೆ. ಅವರು ಜೀವನೋಪಾಯಕ್ಕಾಗಿ ಶ್ರೀಮಂತರ ಮನೆಗಳಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಅದರಿಂದ ಸಂಗ್ರಹವಾಗಿದ್ದ ಹಣ ನೀಡಿ ಮಾದರಿಯಾಗಿದ್ದಾರೆ.
ಪೆನ್ಶನ್ ಹಣ ನೀಡಿದ ನಿವೃತ್ತ ಶಿಕ್ಷಕಿ
ಪೆನ್ಶನ್ ಹಣದಿಂದ ಜೀವನ ನಡೆಸುತ್ತಿರುವಕಡಿಯಾಳಿ ಹಿ. ಪ್ರಾ. ಶಾಲೆಯ ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್ ಅವರು ಕೂಡ ಬಡವರ ಅನ್ನದಾನಕ್ಕೆ ತನ್ನ ಒಂದು ತಿಂಗಳ ಪೆನ್ಶನ್ ಹಣ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ