Ram Mandir: ಗರ್ಭಗುಡಿಗೆ ಕಪಿಯ ಪ್ರವೇಶ: ರಾಮ ದರ್ಶನ ಪಡೆದ ಹನುಮ
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಎಕ್ಸ್ ಖಾತೆಯಲ್ಲಿ ಕಪಿಯ ಪ್ರವೇಶದ ಬಗ್ಗೆ ಮಾಹಿತಿ
Team Udayavani, Jan 25, 2024, 1:08 AM IST
ಆಯೋಧ್ಯಾ: ಮಂಗಳವಾರ ಸಾರ್ವಜನಿಕರ ಪ್ರವೇಶಕ್ಕೆ ಮಂದಿರ ತೆರೆದುಕೊಂಡ ದಿನವೇ, ರಾಮನ ಪರಮಭಕ್ತ ಹನುಮಂತ ಕಪಿಯ ರೂಪದಲ್ಲಿ ಬಾಲರಾಮನ ದರ್ಶನ ಪಡೆದನೇ? ಹೌದೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ. ಮಂಗಳವಾರ ಸಂಜೆ 5.50ಕ್ಕೆ ಕಪಿಯೊಂದು ದಕ್ಷಿಣದ್ವಾರದಿಂದ ದೇವಸ್ಥಾನದ ಆವರಣವನ್ನು ಪ್ರವೇಶಿಸಿದೆ. ಅದು ನಂತರ ಉತ್ಸವಮೂರ್ತಿಯ (ಹಿಂದೆ ತಾತ್ಕಾಲಿಕ ಮಂದಿರದಲ್ಲಿ ಇಡಲಾಗಿದ್ದ ರಾಮಲಲ್ಲಾನ ಪುಟ್ಟ ವಿಗ್ರಹ) ಸನಿಹ ತೆರಳಿದೆ.
ಅದರಿಂದ ಗಾಬರಿಗೊಂಡ ಸಿಬ್ಬಂದಿ ಕಪಿಯನ್ನು ಓಡಿಸಲು ನೋಡಿದ್ದಾರೆ. ಆದರೆ ಕಪಿ ಮಾತ್ರ ಶಾಂತವಾಗಿ ಹಿಂದೆ ಸರಿದು, ಉತ್ತರದ ದ್ವಾರದತ್ತ ತೆರಳಿದೆ. ಅಲ್ಲಿ ಬಾಗಿಲು ಹಾಕಿದ್ದರಿಂದ ಪೂರ್ವದ್ವಾರದಿಂದ ಹೊರಹೋಗಿದೆ. ಯಾರಿಗೂ ಏನೂ ತೊಂದರೆ ಮಾಡದೇ ಹೊರಹೋಗಿದ್ದನ್ನು ಭದ್ರತಾ ಸಿಬ್ಬಂದಿ ನೋಡಿದ್ದಾರೆಂದು ಟ್ರಸ್ಟ್ ಹೇಳಿಕೊಂಡಿದೆ.
ಹನುಮಂತ ಶ್ರೀರಾಮನ ಪರಮಭಕ್ತ. ಎಲ್ಲಿ ರಾಮನಾಮ ಸಂಕೀರ್ತನೆಯಿರುತ್ತದೋ, ಅಲ್ಲೆಲ್ಲ ಹನುಮಂತ ಇರುತ್ತಾನೆ. ಈ ಹಿನ್ನೆಲೆಯಲ್ಲಿ ಕಪಿಯ ರೂಪದಲ್ಲಿ ಹನುಮಂತನೇ ದೇಗುಲ ಪ್ರವೇಶಿಸಿದ್ದಾನೆಂದು ಎಲ್ಲರೂ ವರ್ಣಿಸುತ್ತಿದ್ದಾರೆ. ಈ ವಿಚಾರ ಜಾಲತಾಣದಲ್ಲೂ ವೈರಲ್ ಆಗಿದೆ. ಜತೆಗೆ ಘಟನೆ ಬಗ್ಗೆ ಚರ್ಚೆಯೂ ನಡೆಯುತ್ತಿದೆ.
आज श्री रामजन्मभूमि मंदिर में हुई एक सुंदर घटना का वर्णन:
आज सायंकाल लगभग 5:50 बजे एक बंदर दक्षिणी द्वार से गूढ़ मंडप से होते हुए गर्भगृह में प्रवेश करके उत्सव मूर्ति के
पास तक पहुंचा। बाहर तैनात सुरक्षाकर्मियों ने देखा, वे बन्दर की ओर यह सोच कर भागे कि कहीं यह बन्दर उत्सव…— Shri Ram Janmbhoomi Teerth Kshetra (@ShriRamTeerth) January 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು