ನಾಗಾಲ್ಯಾಂಡ್: ಕೇಂದ್ರದ ವಿಷಾದ ; ಸಂಸತ್ನಲ್ಲಿ ಹೇಳಿಕೆ ನೀಡಿದ ಸಚಿವ ಅಮಿತ್ ಶಾ
Team Udayavani, Dec 7, 2021, 6:00 AM IST
ಹೊಸದಿಲ್ಲಿ: ನಾಗಾಲ್ಯಾಂಡ್ನಲ್ಲಿ ಸೇನೆಯ ಅಚಾತುರ್ಯಕ್ಕೆ 14 ನಾಗರಿಕರು ಬಲಿಯಾದ ಘಟನೆ ಬಗ್ಗೆ ಸಂಸತ್ನಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಷಾದಿಸಿದ್ದಾರೆ.
ಲೋಕಸಭೆಯಲ್ಲಿ ಈ ವಿಚಾರದ ಕುರಿತು ಹೇಳಿಕೆ ನೀಡಿದ ಶಾ, “ತಪ್ಪಾಗಿ ನಡೆದ ಕೃತ್ಯದಿಂದಾಗಿ ಅಸುನೀಗಿದ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ. ಈ ದುರದೃಷ್ಟಕರ ಘಟನೆಗೆ ಕೇಂದ್ರ ಸರಕಾರವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ಉಗ್ರರ ಚಲನವಲನಗಳ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಮಾಂಡೋಗಳು ಸ್ಥಳಕ್ಕೆ ಧಾವಿಸಿದ್ದರು. ಕಾರ್ಮಿಕರಿದ್ದ ಪಿಕಪ್ ವಾಹನವನ್ನು ನಿಲ್ಲುವಂತೆ ಸೂಚಿಸಿದರೂ, ವಾಹನ ವೇಗವಾಗಿ ಮುಂದಕ್ಕೆ ಚಲಿಸಿತು. ಹೀಗಾಗಿ ಒಳಗೆ ಬಂಡುಕೋರರು ಇದ್ದಾರೆಂದು ಭಾವಿಸಿ ಯೋಧರು ಗುಂಡಿನ ದಾಳಿ ಮಾಡಿದರು’ ಎಂದು ವಿವರಿಸಿದರು.
ಬಳಿಕ, ಬಂಡುಕೋರರ ವಿರುದ್ಧ ಕ್ರಮ ಕೈಗೊಳ್ಳುವಾಗ ಇಂತಹ ಘಟನೆ ನಡೆಯದಂತೆ ಎಲ್ಲ ಏಜೆನ್ಸಿಗಳೂ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಿದ್ದು, ವಿಶೇಷ ತನಿಖಾ ತಂಡದ ತನಿಖೆಯು ಒಂದು ತಿಂಗಳೊಳಗೆ ಪೂರ್ಣಗೊ ಳ್ಳಲಿದೆ ಎಂದಿದ್ದಾರೆ.
ಇದನ್ನೂ ಓದಿ:ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್ ಸಿಂಗ್
ಎಫ್ಐಆರ್ ದಾಖಲು: ಪ್ರಕರಣ ಸಂಬಂಧ ಅರೆಸೇನಾಪಡೆಗಳ ಸಿಬಂದಿ ವಿರುದ್ಧ ನಾಗಾಲ್ಯಾಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾವುದೇ ಪ್ರಚೋದನೆ ಯಿಲ್ಲದೇ ಗ್ರಾಮಸ್ಥರ ಮೇಲೆ ದಾಳಿ ನಡೆಸಲಾ ಗಿದೆ¬. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಕಾರ್ಯಾಚರಣೆ ನಡೆಸ ಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳ ಲಾಗಿದೆ.
ಎಎಫ್ಎಸ್ಪಿಎ ರದ್ದು ಆಗ್ರಹ: ಘಟನೆ ಬೆನ್ನಲ್ಲೇ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ರದ್ದು ಮಾಡಬೇಕೆಂಬ ಕೂಗು ಬಲವಾಗತೊಡಗಿದೆ. ಬಂಡು ಕೋರರನ್ನು ನಿಯಂತ್ರಿಸಲು ಜಾರಿ ಮಾಡಲಾಗಿದ್ದ ಕಾಯ್ದೆ ಅಗತ್ಯ ಈಗಿಲ್ಲ ಎಂದು ಎಂದು ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೋ ಹೇಳಿದ್ದಾರೆ. ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರೂ ಇಂಥ ಆಗ್ರಹ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!