Navarathri: ಮಹಾವಿಘ್ನಗಳ ನಿವಾರಿಸುವ ನವದುರ್ಗೆಯರು


Team Udayavani, Oct 14, 2023, 11:22 PM IST

navavdurge

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ||
ಯಾರು ಎಲ್ಲ ಜೀವಿಗಳಲ್ಲೂ ತಾಯಿಯಾಗಿ ನೆಲಸಿ­ದ್ದಾಳ್ಳೋ, ಅವಳಿಗೆ ಮತ್ತೆ ಮತ್ತೆ ನನ್ನ ನನ್ನ ನಮಸ್ಕಾರಗಳು.

ತಾಯಿಯ ಗರ್ಭದಿಂದ ಹೊರಬಂದಂದಿನಿಂದ ಮಾತೃ ಪ್ರೇಮದ ಅಮೃತವನ್ನು ನಾವು ಸವಿಯುತ್ತಾ ಬೆಳೆಯು­ತ್ತೇವೆ. ನಾವು ಬೆಳೆಯುತ್ತಾ ಆ ಮಾತೃ ಪ್ರೇಮವೂ ಬೆಳೆಯುತ್ತಾ, ವಿಸ್ತಾರವಾಗು­ತ್ತದೆ. ನಾವು ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ನಮ್ಮ ದೇಶ ಭರತ ಮಾತೆಯಾಗಿ ಪೂಜಿತಳಾಗುತ್ತಾಳೆ. ನಮ್ಮ ಜೀವನದಲ್ಲಿ ನೆರವಾಗುವ ಅನೇಕ ಸ್ತ್ರೀಯರನ್ನು ನಾವು ತಾಯಿಯಂತಲೇ ಆರಾಧಿಸುತ್ತೇವೆ. ಇನ್ನು ಪರಬ್ರಹ್ಮ ಶಕ್ತಿಯು ನಮಗೆ ಜ್ಞಾನ ನೀಡಿದಾಗ ಸರಸ್ವತಿ, ಸಂಪತ್ತನ್ನು ನೀಡಿದಾಗ ಲಕ್ಷ್ಮಿ, ಶಕ್ತಿಯನ್ನು ನೀಡಿದಾಗ ಪಾರ್ವತಿ, ದುರ್ಗೆ ಹೆಸರುಗಳಿಂದ ಕರೆದು, ಅರ್ಚಿಸುತ್ತೇವೆ. ಅನಾದಿ ಕಾಲದಿಂದಲೂ ನಮ್ಮ ಭರತ ಭೂಮಿಯಲ್ಲಿ, ಸನಾತನ ಧರ್ಮದಲ್ಲಿ ಮಾತೃ ಪೂಜೆ, ದೇವಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ.

ನಾಲ್ಕು ರೀತಿಯ ನವರಾತ್ರಿಗಳು
ಭಗವಾನ್‌ ಶ್ರೀರಾಮನು ರಾವಣನನ್ನು ಸಂಹಾರ ಮಾಡುವ ಮುನ್ನ ದೇವಿಯನ್ನು ವಿಶೇಷವಾಗಿ ಪೂಜಿಸಿ, ಅವಳ ಕೃಪೆಗೆ ಪಾತ್ರನಾಗಿ ರಾವಣನ ಸಂಹಾರ ಮಾಡು­ತ್ತಾನೆ. ಶರದೃತುವಿನಲ್ಲಿ ಬರುವ ಈ ನವರಾತ್ರಿಯು ಪ್ರಸಿದ್ಧವಾಯಿತು. ಆದ್ದರಿಂದಲೇ ಈ ನವರಾತ್ರಿಯನ್ನು ಶರನ್ನವರಾತ್ರಿ ಎಂದು ಕರೆಯುವುದು. ಅದಕ್ಕೆ ಮುನ್ನ ವಸಂತ ಋತು, ಚೈತ್ರ ಮಾಸದಲ್ಲಿ ಬರುವ ನವರಾತ್ರಿಯಲ್ಲಿ ದೇವಿ ಪೂಜೆಯನ್ನು ಮಾಡಲಾಗುತ್ತಿತ್ತು. ಅದನ್ನು ವಸಂತ ನವರಾತ್ರಿ ಎಂದು ಕರೆಯುತ್ತೇವೆ. ಇದಲ್ಲದೆ ಆಷಾಢ ಮಾಸದಲ್ಲಿ ಆಷಾಢ ನವರಾತ್ರಿಯನ್ನು ಮತ್ತು ಮಾಘ ಮಾಸದಲ್ಲಿ ಮಾಘ ನವರಾತ್ರಿಯನ್ನು ಆಚರಿಸಲಾಗುತ್ತದೆ. ಒಟ್ಟು 4 ನವರಾತ್ರಿಗಳು ಇದ್ದರೂ, ಶರನ್ನವರಾತ್ರಿಯೂ ಪ್ರಸಿದ್ಧಿಯನ್ನು ಪಡೆದು, ಅದನ್ನು ಮಾತ್ರ ಎಲ್ಲರೂ ಆಚರಿಸುತ್ತಾರೆ.

ಈ ವಿಶಿಷ್ಟ ಹಬ್ಬವನ್ನು ನವರಾತ್ರಿ, ದುರ್ಗಾ ಪೂಜೆ, ದಸರಾ, ದಶ­ಹರ, ಶರನ್ನವರಾತ್ರಿ, ಮುಂತಾದ ಹೆಸರು­ಗಳಿಂದ ಕರೆಯುತ್ತಾರೆ. ಈ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ ಮಾಡಿ ಅವಳ ಕೃಪೆಗೆ ಪಾತ್ರರಾಗುವುದೇ ಮುಖ್ಯ ಗುರಿ. ಅವಳ ಕೃಪೆಯಿಂದ ಮಾಯಾ ಬಂಧನ­ದಿಂದ ಮುಕ್ತರಾಗಲು, ಸಚ್ಚಿದಾನಂದನ ದರ್ಶನವನ್ನು ಪಡೆಯಲು ಅಥವಾ ವಿಶೇಷ ಶಕ್ತಿಗಳನ್ನು ಪಡೆಯಲು ಭಕ್ತರು ಅವಳನ್ನು ಪೂಜಿಸುತ್ತಾರೆ. ಉಪಾಸಿಕಾನಾಂ ಕಾರ್ಯಾರ್ಥೇ ಬ್ರಹ್ಮಣೋ ರೂಪ ಕಲ್ಪತೇ | ಪರಬ್ರಹ್ಮನನ್ನು ಉಪಾಸಿಸುವ, ಆರಾಧಿಸುವ ಭಕ್ತರ ಉಪಯೋಗ­ಕ್ಕಾಗಿ, ಪ್ರಯೋಜನಕ್ಕಾಗಿ ಭಗವಂತನು ವಿವಿಧ ರೂಪಗಳನ್ನು ತಾಳುತ್ತಾನೆ. ಅದೇ ರೀತಿ ಭಕ್ತರ ಉಪಯೋಗಕ್ಕಾಗಿ, ರಕ್ಷಣೆಗಾಗಿ ಭಗವತಿಯೂ ಸರಸ್ವತಿ, ಲಕ್ಷಿ¾à, ಪಾರ್ವತಿ, ಚಾಮುಂಡಿ, ಭವಾನಿ, ಮುಂತಾದ ಅನೇಕ ರೂಪಗಳನ್ನು ತಾಳಿದ್ದಾಳೆ. ಅವಳ ಮೂಲ ಉದ್ದೇಶ ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆ. ಆ ಎಲ್ಲ ಅವತಾರ ತತ್ತ್ವಗಳೂ ಪರಬ್ರಹ್ಮವನ್ನೇ ಬಿಂಬಿಸುತ್ತವೆ. ಆ ಪರತತ್ತ್ವದ ಒಂದು ಸಾಕಾರ ರೂಪವನ್ನು ನಾವು ದುರ್ಗಾ ಎಂದು ಕರೆಯುತ್ತೇವೆ.

ದೈತ್ಯನಾಶಾರ್ಥವಚನೋ “ದಕಾರಃ ಪರಿಕೀರ್ತಿತಃ |
“ಉಕಾರೋ ವಿಘ್ನನಾಶಸ್ಯ ವಾಚಕೋ ವೇದಸಂಮತಃ ||
“ರೇಫೋ ರೋಗಘ್ನವಚನೋ “ಗಶ್ಚ ಪಾಪಘ್ನವಾಚಕಃ |
ಭಯಶತ್ರುಘ್ನ “ಶ್ಚಾಕಾರಃ ಪರಿಕೀರ್ತಿತಃ ||
ಸ್ಮತ್ಯುಕ್ತಿಶ್ರವಣಂದ್ಯಸ್ಯಾ ಏತೇ ನಶ್ಯಂತಿ ನಿಶ್ಚಿತಮ್‌ |
ತತೋ ದುರ್ಗಾ ಹರೇಃ ಶಕ್ತಿರ್ಹರಿಣಾ ಪರಿಕೀರ್ತಿತಾ ||

ದ್‌ + ಉ + ೯ + ಗ್‌ + ಆ = ದುರ್ಗಾ. ಇದರಲ್ಲಿ “ದ’ಕಾರವು ತೊಂದರೆ­ಗಳನ್ನುಂಟು ಮಾಡುವ ದುಷ್ಟ ಶಕ್ತಿಗಳನ್ನು ನಾಶ ಮಾಡು ವುದು. “ಉ’ಕಾರವು ಬಂದೊದಗುವ ಎಲ್ಲ ವಿಘ್ನ­ಗಳನ್ನೂ ಪರಿ ಹರಿಸುವುದು ಎಂದು ವೇದಗಳು ಸಾರುತ್ತವೆ. “೯” ಅಕ್ಷರವು ರೋಗಗಳನ್ನು ನಿವಾರಿಸುವುದು. “ಗ’ಕಾರವು ಪಾಪಗಳನ್ನು ತೊಡೆದು ಹಾಕುವುದು. “ಆ’ಕಾರವು ಭಯ­ಗಳನ್ನು, ಶತ್ರುಗಳನ್ನು ಹೋಗಲಾಡಿಸು­ವುದು. “ದುರ್ಗಾ’ ಎಂಬ ಹೆಸರನ್ನು ನೆನಪಿಸಿಕೊಂಡರೇ ಸಾಕು, ಅಷ್ಟರಿಂದಲೇ ಎಲ್ಲ ಮಹಾವಿಘ್ನಗಳು, ರೋಗ­ಗಳು, ಇತ್ಯಾದಿ ನಾಶವಾಗುವುದೆಂದು ಹರಿಯ ಶಕ್ತಿಯಾದ ದುರ್ಗೆಯ ಕುರಿತು ಸ್ವತಃ ಹರಿಯೇ ಹೇಳಿರುವುನು.

ತತ್ರೈವ ಚ ವಧಿಷ್ಯಾಮಿ ದುರ್ಗಮಾಖ್ಯಂ ಮಹಾಸುರಮ್‌||
ದುರ್ಗಾ ದೇವೀತಿ ವಿಖ್ಯಾತಂ ತನ್ಮೈ ನಾಮ ಭವಿಷ್ಯತಿ ||

ಅಲ್ಲಿ ದುರ್ಗನೆಂಬ ಮಹಾರಾಕ್ಷಸನನ್ನು ಸಂಹಾರ ಮಾಡು­­ತ್ತೇನೆ. ಆದ್ದರಿಂದ ನಾನು ದುರ್ಗಾ ಎಂಬ ಹೆಸರಿ­ನಿಂದ ಪ್ರಸಿದ್ಧಳಾಗುತ್ತೇನೆ ಎಂದು ಸ್ವಯಂ ಜಗನ್ಮಾತೆಯೇ ಹೇಳಿದ್ದಾಳೆ. ನವರಾತ್ರಿಯಲ್ಲಿ ಪ್ರತೀ ದಿವಸ ದುರ್ಗಾಮಾತೆಯ ಒಂದು ಒಂದು ರೂಪವನ್ನು ಪೂಜಿಸುವುದು ನಮಗೆಲ್ಲ ತಿಳಿದಿರುವ ವಿಷಯ. ಇದರ ಉಲ್ಲೇಖವನ್ನು ನಾವು ಬ್ರಹ್ಮವೈವರ್ತ ಪುರಾಣದಲ್ಲಿ ಕಾಣಬಹುದು. ಅದರಲ್ಲಿ ಸ್ವಯಂ ಬ್ರಹ್ಮನೇ ಈ ಒಂಬತ್ತು ದುರ್ಗೆಯರ ಹೆಸರುಗಳನ್ನು ತಿಳಿಸಿದ್ದಾನೆ.

ಪ್ರಥಮಂ ಶೈಲಪ‌ುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್‌||
ಪಂಚಮಂ ಸ್ಕಂದಮಾತೇತಿ ಷಷ್ಟಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಕಮ್‌ ||
ನವಮಂ ಸಿದ್ಧದಾ ಪ್ರೋಕ್ತಾ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನ್ಮೈತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ||

 ಸ್ವಾಮಿ ಶಾಂತಿವ್ರತಾನಂದಜೀ

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.