Jharkhand: ನಕ್ಸಲನ ಹೊತ್ತು 5.ಕಿ.ಮೀ ನಡೆದರು!
Team Udayavani, Oct 15, 2023, 10:53 PM IST
ರಾಂಚಿ: ಗಾಯಗೊಂಡ ನಕ್ಸಲ್ ಒಬ್ಬನನ್ನ ಭುಜದ ಮೇಲೆ ಹೊತ್ತುಕೊಂಡು 5 ಕಿ.ಮೀ ನಡೆದು, ಆತನ ಜೀವ ಉಳಿಸಲು ಭದ್ರತಾ ಸಿಬ್ಬಂದಿ ಹೆಣಗಾಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ನಕ್ಸಲರ ಅಟ್ಟಹಾಸ ಮಟ್ಟಹಾಕುವ ಭದ್ರತಾ ಸಿಬ್ಬಂದಿ, ಅದೇ ನಕ್ಸಲರ ಜೀವ ಉಳಿಸಿ, ಮನಪರಿವರ್ತನೆಗೆ ಅವಕಾಶವನ್ನೂ ನೀಡುತ್ತಾರೆಂಬುದಕ್ಕೆ ಇದೊಂದು ನಿದರ್ಶನ.
ಸಿಂಗಭೂಮ್ ಜಿಲ್ಲೆಯ ಹುಸ್ಸಿಪ್ಪಿ ಅರಣ್ಯದಲ್ಲಿ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಕ್ಸಲನೊಬ್ಬನಿಗೆ ಗುಂಡು ತಾಗಿ, ಆತ ಗಾಯಗೊಂಡಿದ್ದಾನೆ. ಉಳಿದವರು ಆತನನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ನೋವಿನಿಂದ ನರಳುತ್ತಿದ್ದ ಆತನನ್ನು ಭದ್ರತಾ ಸಿಬ್ಬಂದಿಯೇ ಭುಜದ ಮೇಲೆ ಹೊತ್ತು ನಡೆದಿದ್ದಾರೆ. ಐಇಡಿಗಳನ್ನು ಹೂತಿಟ್ಟಿರಬಹುದಾದ ಕಾಡಿನ ಮಧ್ಯೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಗಾಯಗೊಂಡ ನಕ್ಸಲನನ್ನು ಕ್ಯಾಂಪ್ಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ.