Politics: ಮರು ಮೈತ್ರಿಯ ಹಾದಿಯಲ್ಲಿ ನಿತೀಶ್ ಕುಮಾರ್- ಎನ್ಡಿಎ?
ಆರ್ಜೆಡಿ ಜತೆಗೆ ಸ್ಥಾನ ಹೊಂದಾಣಿಕೆ, ಸಂಚಾಲಕ ಹುದ್ದೆ ವಿಚಾರಕ್ಕೆ ಮುನಿಸು
Team Udayavani, Jan 20, 2024, 9:28 PM IST
ಪಾಟ್ನಾ: ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವರೇ? ಬಿಹಾರ ರಾಜಕೀಯ ಪಡಸಾಲೆಯಲ್ಲಿ ಇಂಥದ್ದೊಂದು ಗುಸು ಗುಸು ಆರಂಭವಾಗಿದೆ. ಆರ್ಜೆಡಿ ನಾಯಕರಾದ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಜತೆಗೆ ನಿತೀಶ್ ಕುಮಾರ್ಗೆ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ತೇಜಸ್ವಿ ಮತ್ತು ನಿತೀಶ್ ನಡುವೆ ಶುಕ್ರವಾರ ರಾತ್ರಿ ರಹಸ್ಯ ಮಾತುಕತೆಗಳು ನಡೆದಿವೆ. ಮತ್ತೂಂದೆಡೆ, ಬಿಹಾರ ಬಿಜೆಪಿ ಘಟಕದ ಹಿರಿಯ ನಾಯಕ ವಿಜಯ ಕುಮಾರ್ ಸಿನ್ಹಾ ನಿವಾಸದಲ್ಲಿಯೂ ಸರಣಿ ಸಭೆಗಳು ನಡೆದಿವೆ. ಇದೇ ವೇಳೆ, ಎನ್ಡಿಎಗೆ ನಿತೀಶ್ರನ್ನು ಮತ್ತೆ ಸೇರ್ಪಡೆಗೊಳಿಸಲು ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ.
ಪ್ರತಿಪಕ್ಷಗಳ ಒಕ್ಕೂಟ “ಇಂಡಿಯಾ’ದ ಸಂಚಾಲಕ ಹುದ್ದೆಗೆ ಆರ್ಜೆಡಿ ತಮ್ಮನ್ನು ಬೆಂಬಲಿಸಲಿಲ್ಲ ಎಂಬ ಸಿಟ್ಟು ನಿತೀಶ್ಗಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆರ್ಜೆಡಿ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿದೆ ಎಂಬ ವಿಚಾರವೂ ನಿತೀಶ್ರನ್ನು ಕಂಗೆಡಿಸಿದೆ. ಕಳೆದ ಚುನಾವಣೆಯಲ್ಲಿ ಆರ್ಜೆಡಿ ಒಂದೇ ಒಂದು ಕ್ಷೇತ್ರಗಳಲ್ಲಿ ಗೆಲ್ಲದಿದ್ದರೂ, ಹೆಚ್ಚಿನ ಸೀಟುಗಳನ್ನು ಕೇಳುತ್ತಿರುವುದು ಈ ಮುಸುಕಿನ ಗುದ್ದಾಟಕ್ಕೆ ಕಾರಣ ಎನ್ನಲಾಗಿದೆ.
ಜಾಹೀರಾತಿನಲ್ಲಿ ತೇಜಸ್ವಿ ಮಾಯ:
ಈ ನಡುವೆ, ಬಿಹಾರ ಸರ್ಕಾರದ ಹೊಸ ವಿಡಿಯೋ ಮತ್ತು ಮುದ್ರಿತ ಜಾಹೀರಾತೀನಲ್ಲಿ ಡಿಸಿಎಂ ತೇಜಸ್ವಿ ಯಾದವ್ ಫೋಟೋ ಮಾಯವಾಗಿದೆ. ಜೆಡಿಯು ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿರುವ 1 ನಿಮಿಷ 29 ಸೆಕೆಂಡ್ಗಳ ಆರೋಗ್ಯ ಖಾತೆಯ ವಿಡಿಯೋದಲ್ಲಿ ತೇಜಸ್ವಿ ಹೆಸರೇ ಇಲ್ಲ. ಮುದ್ರಿತ ಜಾಹೀರಾತಿನಲ್ಲೂ ಅವರ ವಿವರಗಳಿಲ್ಲ. ಹೀಗಾಗಿ, ಕಾಂಗ್ರೆಸ್-ಆರ್ಜೆಡಿ-ಜೆಡಿಯು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಬಿಹಾರದ ಇಂಡಿಯಾ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದಾದರೆ ಎನ್ಡಿಎಗೆ ಅದರಿಂದ ಶೇ.100 ಒಳ್ಳೆಯದಾಗಲಿದೆ. ನಿಶ್ಚಿತವಾಗಿಯೂ ಮಹಾಮೈತ್ರಿಕೂಟ ರಾಜ್ಯದಲ್ಲಿ ಮುರಿದು ಹೋಗಲಿದೆ.
ಪಶುಪತಿ ಕುಮಾರ್ ಪರಸ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ