Terrorism: ಉಗ್ರರಿಗೆ ದಯೆ ಬೇಡ- ತನಿಖಾ ಸಂಸ್ಥೆಗಳಿಗೆ ಗೃಹ ಸಚಿವ ಶಾ ಸೂಚನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ತಗ್ಗಿದ ಉಗ್ರ ಕೃತ್ಯ ಪ್ರಮಾಣ
Team Udayavani, Oct 5, 2023, 11:32 PM IST
ಹೊಸದಿಲ್ಲಿ: “ಭಯೋತ್ಪಾದಕರ ವಿರುದ್ಧ ನಾವು ಅನುಸರಿಸುವ ನಿರ್ದಯ ನೀತಿ ಹೇಗಿರಬೇಕೆಂದರೆ, ದೇಶದಲ್ಲಿ ಮತ್ತೆ ಯಾವುದೇ ಹೊಸ ಉಗ್ರ ಸಂಘಟನೆಗಳು ತಲೆ ಎತ್ತಲು ಸಾಧ್ಯವೇ ಆಗ ಬಾರದಂತಿ ರಬೇಕು’ ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವತಿಯಿಂದ ಆಯೋಜಿಸಲಾಗಿದ್ದ ಭಯೋತ್ಪಾದನೆ ವಿರೋಧಿ ಸಮ್ಮೇಳನದಲ್ಲಿ ಭಾಗಿಯಾಗಿ ಮಾತ ನಾಡಿದ ಅವರು. ಉಗ್ರ ನಿಗ್ರಹಕ್ಕೆ ನಿಂತಿರುವ ಪಡೆಗಳು ನಿರ್ದಯಿಯಾಗಿರಬೇಕು !ಆ ನಿರ್ದಯತೆ ಬರೀ ಉಗ್ರರನ್ನು ಸೆದೆಬಡಿಯುವುದು ಮಾತ್ರವಲ್ಲ, ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನೇ ನಾಶಪಡಿಸಬೇಕು ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಕ್ರಿಪ್ಟೋಕರೆನ್ಸಿ, ಹವಾಲಾ, ಭಯೋತ್ಪಾದಕ ಹಣಕಾಸು ಸಹಾಯ, ಮಾದಕವಸ್ತು ಜಾಲಗಳಿಗೆ ಮೋದಿ ಸರಕಾರ ಬಹುತೇಕ ಕಡಿವಾಣ ಹಾಕಿದೆ, ಮುಂದೆ ಭಯೋತ್ಪಾದನೆಯನ್ನೂ ಕಿತ್ತೂಗೆಯಲಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.70ರಷ್ಟು ಭಯೋತ್ಪಾದಕ ಕೃತ್ಯಗಳು ಕಡಿಮೆಯಾಗಿದ್ದು, ಕಳೆದ 9 ವರ್ಷದಲ್ಲಿ ಮೋದಿ ಸರಕಾರ ಬಹುತೇಕ ಶಾಂತಿ ಸ್ಥಾಪ® ೆಯನ್ನು ಖಾತರಿ ಪಡಿಸಿಕೊಂಡಿದೆ. ಜತಗೆ ಕಣಿವೆ ನಾಗರಿಕರ ಹತ್ಯೆಗಳು ಶೇ.81ರಷ್ಟು ಕಡಿಮೆಯಾಗಿದ್ದು, ಭದ್ರತಾ ಸಿಬ್ಬಂದಿಯ ಸಾವು ಕೂಡ ಶೇ.48ರಷ್ಟು ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.