Ayodhya: ಮಂದಿರ ಮಾತ್ರವಲ್ಲ, ಇಡೀ ಅಯೋಧ್ಯೆಗೆ ಹೊಸ ಸ್ಪರ್ಶ
ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ ಪುರಾತನ ನಗರಿ- 200ರಷ್ಟು ಯೋಜನೆಗಳು ಪ್ರಗತಿಯಲ್ಲಿ
Team Udayavani, Nov 18, 2023, 9:08 PM IST
ಉತ್ತರಪ್ರದೇಶದಲ್ಲಿ ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿರುವಂತೆಯೇ, ಪ್ರಾಚೀನ ಅಯೋಧ್ಯಾ ನಗರಿ ಅತಿದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ವಿಮಾನ ನಿಲ್ದಾಣದಿಂದ ಹಿಡಿದು ಅಯೋಧ್ಯಾ ಜಂಕ್ಷನ್, ಪಥಗಳು, ಪ್ರಾಚೀನ ಕೆರೆಗಳಿಗೆ ಹೊಸ ಸ್ಪರ್ಶ ಸಿಗಲಿದೆ. ಸುಮಾರು 200ರಷ್ಟು ಯೋಜನೆಗಳು 2024ರೊಳಗೆ ಸಾಕಾರಗೊಳ್ಳಲಿವೆ.
ಒಟ್ಟು ಎಷ್ಟು ಯೋಜನೆಗಳು?- 200
ಒಟ್ಟಾರೆ ವೆಚ್ಚ- 30,923 ಕೋಟಿ ರೂ.
ಏರ್ಪೋರ್ಟ್
ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ 821 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ರನ್ವೇ ನಿರ್ಮಾಣ, ರಾತ್ರಿ ಹೊತ್ತು ಲ್ಯಾಂಡಿಂಗ್ ಮತ್ತು ಪ್ರತಿಕೂಲ ಹವಾಮಾನದಲ್ಲಿ ವಿಮಾನ ಇಳಿಯಲು ಬೇಕಾದ ವ್ಯವಸ್ಥೆ, ಎಟಿಸಿ ಟವರ್ ನಿರ್ಮಾಣ ಪೂರ್ಣಗೊಂಡಿದೆ.
ಅಯೋಧ್ಯಾ ಜಂಕ್ಷನ್
620 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯಾ ಜಂಕ್ಷನ್ಗೆ ಹೊಸ ಜೀವಕಳೆ ನೀಡುವ ಕಾರ್ಯ ಭರದಿಂದ ಸಾಗಿದೆ. ಜಂಕ್ಷನ್ನ ವಿಸ್ತರಣೆ, ಪ್ರಯಾಣಿಕರು-ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳು, ರಾಮಮಂದಿರದ ಮಾದರಿಯಲ್ಲೇ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, 3 ಅಂತಸ್ತಿನ ಸ್ಟೇಷನ್ ಬಿಲ್ಡಿಂಗ್, 6 ಮೀ. ಅಗಲದ ಎರಡು ಪಾದಚಾರಿ ಮೇಲ್ಸೇತುವೆಗಳು, ವಸತಿ ಸಂಕೀರ್ಣಗಳು ನಿರ್ಮಾಣಗೊಳ್ಳಲಿವೆ.
ಪಥಗಳು ಮತ್ತು ಕಾರಿಡಾರ್ಗಳು
ರಾಮಮಂದಿರದ ಮಾರ್ಗದಲ್ಲಿ ತೊಂದರೆ ಉಂಟುಮಾಡಬಾರದು ಎಂಬ ಉದ್ದೇಶದಿಂದ 797 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಗಲೀಕರಣ ಕಾಮಗಾರಿ ಆರಂಭಿಸಲಾಗಿದೆ. 2 ಕಿ.ಮೀ. ಉದ್ದದ ರಾಮಜನ್ಮಭೂಮಿ ಪಥ, 850 ಮೀಟರ್ನ ಭಕ್ತಿ ಪಥ, 13 ಕಿ.ಮೀ. ಉದ್ದದ ರಾಮ ಪಥ ನಿರ್ಮಾಣ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಕಾರ್ಮಿಕರು ನಿರತರಾಗಿದ್ದಾರೆ.
ಕೆರೆಗಳು, ಧಾರ್ಮಿಕ ಕೇಂದ್ರಗಳಿಗೆ ನವಸ್ಪರ್ಶ
ಅಯೋಧ್ಯೆಯಲ್ಲಿರುವ ಹಳೆಯ ಆಶ್ರಮಗಳು, ಪ್ರಾಚೀನ ಕೆರೆಗಳು ಮತ್ತು ದೇವಾಲಯಗಳನ್ನು ಅಂದಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ 37 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. 68.80 ಕೋಟಿ ರೂ. ವೆಚ್ಚದಲ್ಲಿ ಅವುಗಳ ಪುನಶ್ಚೇತನ ನಡೆಯಲಿದೆ.
ನಿಖರ ಮಾಹಿತಿ ಒದಗಿಸಲು ಯುವಕರಿಗೆ ಆಮಂತ್ರಣ
ಮಂದಿರ ನಿರ್ಮಾಣದಲ್ಲಿನ ಪ್ರಗತಿ, ಪ್ರಾಣ ಪ್ರತಿಷ್ಠೆಯ ವಿಧಿ ವಿಧಾನಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಜನರಿಗೆ ತಲುಪಿಸಲು ಶ್ರೀ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಈಗ ಜಾಲತಾಣದ ಮೊರೆ ಹೋಗಿದೆ. ಸಂಘಪರಿವಾರದ ವತಿಯಿಂದ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವಕರಿಗೆ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ನೊಂದಿಗೆ ರಾಮಮಂದಿರದ ಆವರಣದೊಳಕ್ಕೆ ಇವರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ದೇಶವಾಸಿಗಳಿಗೆ ಮಂದಿರ ನಿರ್ಮಾಣ, ಉದ್ಘಾಟನೆಗೆ ಸಂಬಂಧಿಸಿದ ನಿಖರ ಮಾಹಿತಿ ಮತ್ತು ಫೋಟೋಗಳು ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಸ್ಟ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!