ಅವಸಾನದತ್ತ ಪುರಾತನ ಶಿವನ ದೇಗುಲ

ಮುರಿದಕಂಬಗಳು,ಕುಸಿಯುತ್ತಿರುವ ಚಾವಣಿ; ಸುಮಾರು 860 ವರ್ಷದ ಹಿಂದಿನ ದೇಗುಲ ಜೀರ್ಣೋದ್ಧಾರಕ್ಕೆ ಮನವಿ

Team Udayavani, Aug 20, 2021, 7:19 PM IST

ಅವಸಾನದತ್ತ ಪುರಾತನ ಶಿವನ ದೇಗುಲ

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ತಾವರೆಕೆ ಗ್ರಾಮದ ಕೆರೆ ಏರಿ ಹಿಂಭಾಗದ ಸುಮಾರು 860 ವರ್ಷಗಳ ಹಿಂದಿನ ಶಿವನ ದೇಗುಲವೊಂದು ಅವಸಾನದತ್ತ ತಲುಪಿದೆ.

ತಾಲೂಕಿನಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಮುತುವರ್ಜಿ ತೋರುವಂತೆಯೇ ನೂರಾರು ವರ್ಷಗಳ ಇತಿಹಾಸ ಹೊಂದಿರುವದೇವಾಲಯ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು, ತಹಶೀಲ್ದಾರ್‌, ಜನಪ್ರತಿನಿಧಿಗಳು ಮುಂದಾಗಬೇಕಿದೆ. ದೇವಾಲಯಲ್ಲಿ ಮೂರಕ್ಕೂ ಹೆಚ್ಚು ಶಿಲಾ ಶಾಸನಗಳಿದ್ದು ಗ್ರಾಮದ ಹಾಗೂ ಸ್ಥಳದ ಮಾಹಿತಿ ಇದರಲ್ಲಿದ್ದು ಪುರಾತತ್ವ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.

ಚಾವಣಿ ಕಳಚಿದೆ: ಪುರಾತನ ದೇವಾಲಯ ಸೂಕ್ತ ನಿರ್ವಹಣೆ ಇಲ್ಲದೆ ಇರುವುರಿಂದ ದೇವಾಲಯದ ಕಲ್ಲಿನ ಚಾವಣಿ ಕಳಚಿ ಬಿದ್ದಿದೆ. ಉತ್ತಮ ಕೆತ್ತನೆ ಇರುವ ಕಂಬಗಳು ಕುಸಿದಿವೆ. ದೇವಾಲಯದ ಗೋಡೆಗಳು ಮಳೆ ಗಾಳಿಯಿಂದಾಗಿ ಧರೆಗೆ ಉರುಳಿವೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯ ಹಾಳಾಗುತ್ತಿದ್ದರೂ ಜಾಣ ಕುರುಡರಂತಿದ್ದಾರೆ.

ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ರಾಜ್ಯದ ಜನರಲ್ಲಿ ಸಿಎಂ ಮನವಿ

ಕ್ರಿವಿ ಕೀಟಗಳ ಆವಾಸ ಸ್ಥಾನ: ಭಕ್ತರಿಗೆ ನೆಮ್ಮದಿ ನೀಡಬೇಕಾಗಿದ ಸ್ಥಳವೀಗ ಕ್ರಿಮಿ ಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ದೇವಾಲಯ
ಉತ್ತಮ ರೀತಿಯಲ್ಲಿ ಇದ್ದಿದ್ದರೆ ನೂರಾರು ಮಂದಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನೆಮ್ಮದಿ ಪಡೆದು ಕೊಳ್ಳುತ್ತಿದ್ದರು. ಆದರೆ, ಗ್ರಾಮಸ್ಥರ ನಿರ್ಲಕ್ಷ್ಯ ದಿಂದ ದೇವಾಲಯ ಶಿಥಿಲವಾಗಿದೆ. ಮರಗಿಡಗಳು ಬೆಳೆದು ನಿಂತಿವೆ, ದೇವಾಲಯದ ಒಳಗೆ ಇರುವ ವಿಗ್ರಹಗಳಿಗೆ ಹಾನಿಯಾಗಿದೆ.

ಪೂಜೆ ಕೈಬಿಟ್ಟ ಭಕ್ತರು: ದೇವಾಲಯದ ಸ್ಥಿತಿ ನೋಡಿದರೆ 2-3 ದಶಕದಿಂದ ಪೂಜೆ ಕೈಂಕರ್ಯ ನಡೆಯುತ್ತಿಲ್ಲ ಎನ್ನುವುದು ತಿಳಿಯುತ್ತದೆ.ಗ್ರಾಮದ ಹಿರಿಯರು, ಜನಪ್ರತಿನಿಧಿಗಳ ಗಮನಕ್ಕೆ ತಂದು ಪಾಳು ಬಿದ್ದಿರುವ ದೇವಾಲಯ ಜೀರ್ಣೋದ್ಧಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯುವ ಸಮುದಾಯ ಮನಸ್ಸು ಮಾಡಿದರೆ ಈಗಲೂ ದೇವಾಲಯನ್ನು ಜೀರ್ಣೋದ್ಧಾರ ಮಾಡಬಹುದು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

475 ಹೆಕ್ಟೇರ್‌ ಪ್ರದೇಶವಿದೆ: ತಾವರೆಕೆರೆ ಗ್ರಾಮದಲ್ಲಿ 160ಮನೆಗಳಿದ್ದು1,200ಕ್ಕೂಹೆಚ್ಚುಜನಸಂಖ್ಯೆಯಿದೆ. ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವಿದೆ. ಚಾಕಗವುಡನ ಆಳ್ವಿಕೆ ಕಾಲಘಟ್ಟದಲ್ಲಿ ಕೆರೆ ನಿರ್ಮಾಣ ವಾಗಿದ್ದು 230 ಹೆಕ್ಟೇರ್‌ ವಿಸ್ತೀರ್ಣ ವಿದ್ದು ಸುಮಾರು 475 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ

ವೀರಶಾಸನದಲ್ಲಿ ಗ್ರಾಮದ ಮಾಹಿತಿ
ಕ್ರಿ.ಶ.1226ರ ಕಾಲಘಟ್ಟದ ಮಾಹಿತಿ ಇರುವ ವೀರಶಾಸನವಿದ್ದು ಇದರಲ್ಲಿ ದೇವಾಲಯ ನಿರ್ಮಾಣ, ಇತರೆ ಅಭಿವೃದ್ಧಿ ನಡೆದಿರುವ ಬಗ್ಗೆ ವಿವರ ವಿದೆ. ಗ್ರಾಮಕ್ಕಾಗಿ ಹೋರಾಡಿದ ಹಲವು ವೀರರ ಬಗ್ಗೆಯೂ ಶಾಸನದಲ್ಲಿ ಉಲ್ಲೇಖವಿದೆ. ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಮಾಹಿತಿ ನೀಡುವಕೆಲಸವಾದರೂ ಆಗಬೇಕಿದೆ. ಹಾಗೆಯೇ ಹತ್ತಕ್ಕೂ ಹೆಚ್ಚು ಮಾಸ್ತಿಕಲ್ಲುಗಳಿವೆ. ಇನ್ನು ಈಶ್ವರಲಿಂಗ, ಬಸವಣ್ಣ, ಚನ್ನಕೇಶವ, ಭೈರವೇಶ್ವರ ದೊಡ್ಡಮ್ಮದೇವಿ, ಮರಿಯಮ್ಮ ದೇವಿ, ಉಡುಸಲಮ್ಮ, ಯಲ್ಲಮ್ಮದೇವಿ ವಿಗ್ರಹಗಳುಕೆರ ಏರಿ ಹಿಂಭಾಗದಲ್ಲಿ ಇವೆ. ಇವುಗಳನ್ನೂ ಸಮಗ್ರವಾಗಿ ಬಳಕೆ ಮಾಡಿಕೊಂಡು ಸಾವಿರಾರು ಭಕ್ತರನ್ನು ಆಕರ್ಷಣೆ ಮಾಡುವ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಬಹುದಾಗಿದೆ

ತಾವರೆಕೆರೆ ಗ್ರಾಮದಲ್ಲಿ 860 ವರ್ಷದ ಪುರಾತನ ಈಶ್ವರ ದೇವಾಲಯವಿದ್ದು 2 ದಶಕದಿಂದ ಪೂಜೆ ನಡೆಯುತ್ತಿಲ್ಲ. ಈ ಬಗ್ಗೆ ಮುಜರಾಯಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.ಯುವಕರು ಮನಸ್ಸು ಮಾಡಬೇಕಷ್ಟೇ.
-ಪಾಪಣ್ಣ, ತಾವರೆಕೆರೆ ಗ್ರಾಮಸ್ಥ

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.