ಪ್ರಸ್ತುತ ರಾಜ್ಯ ರಾಜಕೀಯದ ಪರಿಸ್ಥಿತಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕರ ಅಗತ್ಯವಿದೆಯೇ?
Team Udayavani, Oct 9, 2019, 3:33 PM IST
ಮಣಿಪಾಲ: ಪ್ರಸ್ತುತ ರಾಜ್ಯ ರಾಜಕೀಯದ ಪರಿಸ್ಥಿತಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕರ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ‘ಉದಯವಾಣಿ’ ಓದುಗರಿಗೆ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಪ್ರಸನ್ನ ಪಂಡಿತ್ : ಬರೀ ರಾಜ್ಯಕ್ಕೆ ಮಾತ್ರ ಅಲ್ಲ ಕೇಂದ್ರಕ್ಕೂ ಬಲಿಷ್ಠವಾದ ವಿರೋಧ ಪಕ್ಷದ ನಾಯಕ ಅಲ್ಲ, ಪ್ರತಿ ಪಕ್ಷದ ನಾಯಕರ ಅಗತ್ಯ ಇದೆ.
ರವೀಂದ್ರ ಭಟ್: ಅಗತ್ಯವಿಲ್ಲ. ಮುಖ್ಯವಾಗಿ ಮೂರು ಮುಖ್ಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಮತ್ತೆ ವಿರೋಧ ಮಾಡುವ ಅಗತ್ಯವಿಲ್ಲ.
ಪ್ರಭು.ಆರ್.ಯು. ಬಸವನಕೋಟೆ: ಸಮರ್ಥ ನಾಯಕನ ಅವಶ್ಯಕತೆ ಇದೆ. ಪ್ರಜಾಪ್ರಭುತ್ವವನ್ನು ಕಾಯುವ ಎದೆಗಾರಿಕೆ ಇರುವ ನಾಯಕನ ಅವಶ್ಯಕತೆ ಇದೆ.
ಕುಮಾರ್ ಮಾತಾಡ್ : ಸರ್ಕಾರ ಒಳ್ಳೆ ಹಾದಿಯಲ್ಲಿ ನಡೆಯಬೇಕಾದ್ರೆ, ಒಂದು ಘಟ್ಟಿಯಾದ್, ಸಮರ್ಥ ವಿರೋಧ ಪಕ್ಷದ ನಾಯಕರು ಬೇಕೇ ಬೇಕು.
ರಾಜೇಶ್ ಅಂಚನ್ : ಖಂಡಿತಾ ಹೌದು. ವಿರೋಧಪಕ್ಷ ಅಂದ ಕೂಡಲೇ ಎಲ್ಲಾದಕ್ಕೂ ವಿರೋಧ ಮಾಡಿ ಸಭಾತ್ಯಾಗ ಮಾಡೋವಂತಹ ವಿರೋಧ ಪಕ್ಷ ಆಗಬಾರದು. ವಸ್ತುನಿಷ್ಠವಾಗಿ ಸರಕಾರವನ್ನು ಪ್ರಶ್ನೆ ಮಾಡುವಂತಹ ದಿಟ್ಟ ನಾಯಕನ ಅಗತ್ಯವಿದೆ. ಈ ನಿಟ್ಟಿನಲ್ಲಿ ವ್ಯಕ್ತಿಗತ ಟೀಕೆಗೆ ಇಳಿಯುವ ಸಿದ್ದರಾಮಯ್ಯ, ಕುಮಾರಸ್ವಾಮಿ ಅಂತಹವರು ಅನಗತ್ಯ. ನೈಜ ದೃಷ್ಟಿಕೋನ ದಿಂದ ವರ್ತಿಸುವ ಒಬ್ಬ ದಿಟ್ಟ ವಿರೋಧ ಪಕ್ಷದ ನಾಯಕನ ಅವಶ್ಯಕತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಉಭಯ ಪಕ್ಷಗಳಲ್ಲೂ ಅಂತಹ ನಾಯಕರ ಕೊರತೆ ಎದ್ದು ಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?