Padubidri: ದತ್ತಾತ್ರೇಯ ಮಂದಿರಕ್ಕೆ ಕಳ್ಳರ ಲಗ್ಗೆ: ಲಕ್ಷ ರೂ. ಮೌಲ್ಯದ ಬೆಳ್ಳಿ ಸೊತ್ತು ಕಳವು
Team Udayavani, Feb 2, 2024, 12:45 AM IST
ಪಡುಬಿದ್ರಿ: ಇಲ್ಲಿನ ನಾಗರಾಜ ಎಸ್ಟೇಟ್ನಲ್ಲಿರುವ ದತ್ತಾತ್ರೇಯ ಮಂದಿರದ ಹಿಂಬದಿ ಬಾಗಿಲಿನಿಂದ ಒಳಬಂದು ದೇವರಕೋಣೆಯ ಬಾಗಿಲು ಮುರಿದ ಕಳ್ಳರು 1 ಲಕ್ಷ ರೂ. ಬೆಲೆಬಾಳುವ ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿರುವುದಾಗಿ ವಿಟ್ಠಲ ಶೆಟ್ಟಿ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಂದಿನಂತೆ ಅಲ್ಲಿನ ಅರ್ಚಕ ಚಂದ್ರಕಾಂತ್ ಆಚಾರ್ಯ ಪೂಜೆಗೆಂದು ಎದುರಿನ ಹೆಬ್ಟಾಗಿಲನ್ನು ತೆರೆದು ಒಳ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಬೆಳ್ಳಿ ಮುಚ್ಚಿದ ದತ್ತ ದೇವರ ಪಾದುಕೆಗಳು, ಬೆಳ್ಳಿ ಕಟ್ಟಿದ ದೊಡ್ಡ ಶಂಖ, ಬೆಳ್ಳಿಯ ನಾಗನ ಹೆಡೆ ಮತ್ತು ಬೆಳ್ಳಿಯ ಮುದ್ರಿಕೆಗಳು ಕಳವಾದ ಸೊತ್ತುಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ