ಸಿನಿಮಾವಾಗಲಿದೆ ಪಾರುಲ್ ಕಥೆ
ಲಾಕ್ಡೌನ್ ಸಮಯ ಸದುಪಯೋಗ
Team Udayavani, Jun 22, 2020, 4:30 AM IST
ಬಹುತೇಕ ನಟಿಮಣಿಯರು ಲಾಕ್ಡೌನ್ನಲ್ಲಿ ಅಡುಗೆ ಸೇರಿದಂತೆ ಹಲವು ವಿಚಾರಗಳನ್ನು ಕಲಿತಿದ್ದಾರೆ. ಈ ಮೂಲಕ ತಮಗೆ ಗೊತ್ತಿಲ್ಲದ ವಿಷಯಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಅನೇಕರು ಕಥೆಗಾರ್ತಿಯಾಗಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಪಾರುಲ್ ಯಾದವ್. ಗೋವಿಂದಾಯ ನಮಃ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಪ್ಯಾರ್ಗೆ ಆಗ್ಬುಟ್ಟೈತೆ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡ ಪಾರುಲ್, ಆ ನಂತರ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದಿರುವ ಪಾರುಲ್, ಈ ಲಾಕ್ ಡೌನ್ ಸಮಯವನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅದು ಹೇಗೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಕಥೆ ಬರೆಯುವ ಮೂಲಕ. ಹೌದು, ಪಾರುಲ್ ಯಾದವ್ ಲಾಕ್ ಡೌನ್ನಲ್ಲಿ ಎರಡು ಕಥೆ ಬರೆದಿದ್ದಾರೆ. ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ ಈ ಕಥೆಗಳು ಸಿನಿಮಾವಾಗಲಿವೆಯಂತೆ. ಈ ಮೂಲಕ ಪಾರುಲ್ ಕಥೆಗಾರ್ತಿಯಾಗಲಿದ್ದಾರೆ.
ಆರಂಭದಲ್ಲಿ ತಮಗೆ ಹೊಳೆದ ಒನ್ಲೈನ್ ಅನ್ನು ಬೆಳೆಸುತ್ತಾ ಹೋದ ಪಾರುಲ್ಗೆ ಮುಂದೆ ಒಳ್ಳೆಯ ಅಂಶಗಳು ಸಿಗುವ ಮೂಲಕ ಚೆಂದದ ಕಥೆ ಸಿದ್ಧವಾಯಿತಂತೆ. ಲಾಕ್ ಡೌನ್ ಸಂಪೂರ್ಣವಾಗಿ ತೆರವಾದ ಬಳಿಕ ಸ್ವತಃ ಪಾರುಲ್ ಅವರೇ ಈ ಕಥೆಗಳಿಗೆ ಬಂಡವಾಳ ಹೂಡಲಿದ್ದಾರಂತೆ. ಇಷ್ಟಕ್ಕೆ ಪಾರುಲ್ ಕನಸು ನಿಲ್ಲೋದಿಲ್ಲ. ಮುಂದಿನ ದಿನಗಳಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಚನೆಯೂ ಇದೆಯಂತೆ.
ಈ ಮೂಲಕ ಮನರಂಜನಾ ಕ್ಷೇತ್ರದ ಮತ್ತೊಂದು ಮಗ್ಗುಲಿಗೂ ತೆರೆದುಕೊಳ್ಳಲಿದ್ದಾರೆ. ಸದ್ಯ ಪಾರುಲ್ ನಟಿಸಿರುವ ಬಟರ್ ಫ್ಲೈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ಪಾರುಲ್ ಲಾಕ್ ಡೌನ್ ಸಮಯವನ್ನು ವರ್ಕೌಟ್, ಡಯೆಟ್ ಮಾಡುತ್ತಾ ಖುಷಿಯಿಂದ ಕಳೆಯುತ್ತಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್