Pollution: ಮಳೆ ದೆಹಲಿಯನ್ನು ಕಾಪಾಡಿತು!- ತಂಪೆರೆದ ವರುಣ: ತಗ್ಗಿದ ವಾಯು ಮಾಲಿನ್ಯ
Team Udayavani, Nov 10, 2023, 10:57 PM IST
ನವದೆಹಲಿ: ತೀವ್ರ ವಾಯು ಮಾಲಿನ್ಯದಿಂದ ಪರಿತಪಿಸುತ್ತಿದ್ದ ದೆಹಲಿ ಜನರಿಗೆ ವರುಣ ಕೃಪೆ ತೋರಿದ್ದಾನೆ. ದೆಹಲಿ ಮತ್ತು ಗಾಜಿಯಾಬಾದ್ನಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದೆ. ಜೋರಾದ ಗಾಳಿ ಮತ್ತು ಮಳೆಯು ಭೂಮಿಯನ್ನು ತಂಪಾಗಿಸಿದೆ. ಇದರಿಂದ ಸಹಜವಾಗಿ ವಾಯು ಗುಣಮಟ್ಟ ತುಸು ಸುಧಾರಣೆ ಕಂಡಿದೆ.
ಇನ್ನೊಂದೆಡೆ, ಮಾಲಿನ್ಯದ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕಳೆ ಸುಡುವುದನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ, ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಸೂಚಿಸಿದೆ. “ಜನರ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಂಡಿದ್ದಾನೆ. ಮಳೆ ಸುರಿದು, ಗಾಳಿ ಬೀಸಿದಕ್ಕಾಗಿ ಸರ್ಕಾರಕ್ಕೆ ಅಲ್ಲ, ಬದಲಾಗಿ ಭಗವಂತನಿಗೆ ಧನ್ಯವಾದಗಳು’ ಎಂದು ನ್ಯಾಯಪೀಠ ಹೇಳಿದೆ.
“ಕಳೆ ಸುಡುವಿಕೆ ನಿಲ್ಲಬೇಕು. ನೀನೇನು ಕ್ರಮ ಕೈಗೊಳ್ಳುತ್ತಿರೋ ಅದು ನಿಮ್ಮ ಆಯ್ಕೆ. ಆದರೆ ದೀಪಾವಳಿ ವೇಳೆಗೆ ವಾಯು ಗುಣಮಟ್ಟ ಉತ್ತಮವಾಗಬೇಕಿದೆ’ ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಇದೇ ವೇಳೆ, ದೆಹಲಿಯಲ್ಲಿ ಮಳೆ, ಗಾಳಿಯಿಂದಾಗಿ ಹವಾಮಾನ ಬದಲಾವಣೆಯಾಗಿದ್ದು, ವಾಯು ಮಾಲಿನ್ಯ ತುಸು ತಗ್ಗಿದೆ. ಹೀಗಾಗಿ ನ.13ರಿಂದ ಆರಂಭವಾಗಬೇಕಿದ್ದ ಸಮ-ಬೆಸ ಯೋಜನೆಯನ್ನು ದೆಹಲಿ ಸರ್ಕಾರ ಮುಂದೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ