ರಾಜಸ್ಥಾನ್‌ ರಾಯಲ್ಸ್‌ಗೆ ಪರಾಗ್‌ ಸ್ಪರ್ಶ!


Team Udayavani, Apr 28, 2022, 5:45 AM IST

thumb 1

ಪುಣೆ: ರಾಜಸ್ಥಾನ್‌ ಈ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ತಂಡ. ಬಟ್ಲರ್‌, ಸ್ಯಾಮ್ಸನ್‌, ಮಿಚೆಲ್‌, ಪಡಿಕ್ಕಲ್‌, ಜೈಸ್ವಾಲ್‌… ಹೀಗೆ ಸಾಗುತ್ತದೆ ಬ್ಯಾಟಿಂಗ್‌ ಲೈನ್‌ಅಪ್‌.

ಇವರಲ್ಲಿ ಜಾಸ್‌ ಬಟ್ಲರ್‌ ಅವರಂತೂ ಶತಕದ ಮೇಲೆ ಶತಕ ಬಾರಿಸುತ್ತ ಬಂದಿದ್ದಾರೆ. ಬಟ್ಲರ್‌ ಅವರನ್ನು ಬೇಗ ಔಟ್‌ ಮಾಡಿದರೆ ಅರ್ಧ ಪಂದ್ಯ ಗೆದ್ದಂತೆ ಎಂಬುದು ಎಲ್ಲ ಎದುರಾಳಿಗಳ ಲೆಕ್ಕಾಚಾರ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಕೂಡ ಇದೇ ಯೋಜನೆಯಲ್ಲಿತ್ತು. ಇದರಲ್ಲಿ ಯಸ್ವಿಯೂ ಆಯಿತು. ಬಟ್ಲರ್‌ ಎಂಟಕ್ಕೆ ಢಮಾರ್‌! ಪಡಿಕ್ಕಲ್‌ 7 ರನ್ನಿಗೆ ಔಟ್‌. ಸ್ಯಾಮ್ಸನ್‌ 27, ಮಿಚೆಲ್‌ 16, ಹೆಟ್‌ಮೈರ್‌ ಬರೀ 3 ರನ್‌… ಡೆತ್‌ ಓವರ್‌ ಆರಂಭಗೊಳ್ಳುವ ಹೊತ್ತಿಗೆ ರಾಜಸ್ಥಾನ್‌ 102 ರನ್ನಿಗೆ 6 ವಿಕೆಟ್‌ ಉರುಳಿಸಿಕೊಂಡು ತೀವ್ರ ಸಂಕಟದಲ್ಲಿತ್ತು. ಆರ್‌ಸಿಬಿಗೆ ಆಗಲೇ ಮೇಲುಗೈ ಸಾಧಿಸಿದ ಖುಷಿ!

ಆದರೆ ಈ ಹಂತದಲ್ಲಿ ರಿಯಾನ್‌ ಪರಾಗ್‌ ರಾಜಸ್ಥಾನ್‌ ರಾಯಲ್ಸ್‌ ಪಾಲಿನ ಆಪತಾºಂಧವರಾಗಿ ಅವತರಿಸಿದರು. ಎಲ್ಲರೂ ಕೈಕೊಟ್ಟು ಹೋದ ಸಂದರ್ಭದಲ್ಲಿ ಏಕಾಂಗಿಯಾಗಿ ಹೋರಾಡಿ ಅಜೇಯ 56 ರನ್‌ (31 ಎಸೆತ, 3 ಫೋರ್‌, 4 ಸಿಕ್ಸರ್‌) ಸಿಡಿಸಿ ಮೊತ್ತವನ್ನು 144ರ ತನಕ ಏರಿಸುವಲ್ಲಿ ಯಶಸ್ವಿಯಾದರು. ಇದು ಐಪಿಎಲ್‌ನಲ್ಲಿ ಪರಾಗ್‌ ದಾಖಲಿಸಿದ ಕೇವಲ 2ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

144 ರನ್‌ ದೊಡ್ಡ ಮೊತ್ತವೇನೂ ಆಗಿರಲಿಲ್ಲ. ಆದರೂ ಇದನ್ನು ಉಳಿಸಿಕೊಳ್ಳುವ ಮೂಲಕ ರಾಜಸ್ಥಾನ್‌ 6ನೇ ಜಯದೊಂದಿಗೆ ಅಗ್ರಸ್ಥಾನಕ್ಕೆ ನೆಗೆಯಿತು. ಆರ್‌ಸಿಬಿ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ ಅಗ್ರ ನಾಲ್ಕರಿಂದ ಹೊರಬಿತ್ತು.

ಫೀಲ್ಡಿಂಗ್‌ನಲ್ಲೂ ಮಿಂಚು
ಆರ್‌ಸಿಬಿ ಬ್ಯಾಟಿಂಗ್‌ ವೇಳೆಯೂ ರಿಯಾನ್‌ ಪರಾಗ್‌ ಮಿಂಚಿದರು. ಅಮೋಘ ಕ್ಷೇತ್ರರಕ್ಷಣೆ ನಡೆಸಿದ ಅವರು 4 ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಂದೇ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಜತೆಗೆ 4 ಕ್ಯಾಚ್‌ ಪಡೆದ 3ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.

2011ರಲ್ಲಿ ಕೆಕೆಆರ್‌ನ ಜಾಕ್‌ ಕ್ಯಾಲಿಸ್‌ ಡೆಕ್ಕನ್‌ ಚಾರ್ಜರ್ ವಿರುದ್ಧ ಇಂಥದೇ ಸಾಧನೆಗೈದಿದ್ದರು. 2012ರಲ್ಲಿ ಪಂಜಾಬ್‌ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ ಚೆನ್ನೈ ವಿರುದ್ಧ ಈ ಸಾಧನೆಯನ್ನು ಪುನರಾವರ್ತಿಸಿದರು. ಆದರೆ ಗಿಲ್‌ಕ್ರಿಸ್ಟ್‌ ಕೀಪಿಂಗ್‌ ಮೂಲಕ ಈ ಕ್ಯಾಚ್‌ಗಳನ್ನು ಪಡೆದಿದ್ದರು. ಇವರಿಬ್ಬರ ಸಾಲಿಗೆ ಈಗ ರಿಯಾನ್‌ ಪರಾಗ್‌ ಸೇರ್ಪಡೆಗೊಂಡಿದ್ದಾರೆ.

140 ರನ್‌ ಉತ್ತಮ ಮೊತ್ತ
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ರಿಯಾನ್‌ ಪರಾಗ್‌, “ರಾಜಸ್ಥಾನ್‌ ರಾಯಲ್ಸ್‌ ಕಳೆದ 3 ವರ್ಷಗಳಿಂದಲೂ ನನ್ನ ಮೇಲೆ ನಂಬಿಕೆ ಇರಿಸಿದೆ. ಸವಾಲು ಸ್ವೀಕರಿಸುವುದು, ಒತ್ತಡ ನಿಭಾಯಿಸುವುದೆಂದರೆ ನನಗೆ ಇಷ್ಟ. ಈ ಟ್ರ್ಯಾಕ್‌ನಲ್ಲಿ 140 ರನ್‌ ಗಳಿಸಿದರೂ ಅದೊಂದು ಉತ್ತಮ ಸ್ಕೋರ್‌ ಆಗಲಿದೆ ಎಂದು ಟೈಮ್‌ಔಟ್‌ ವೇಳೆ ಕೋಚ್‌ ಕುಮಾರ ಸಂಗಕ್ಕರ ಹೇಳಿದರು. ಡೆತ್‌ ಓವರ್‌ನಲ್ಲಿ ಈ ಗುರಿಯನ್ನ ತಲುಪುವ ನಿಟ್ಟಿನಲ್ಲಿ ಶ್ರಮ ವಹಿಸಿದೆ. ಇದರಲ್ಲಿ ಯಶಸ್ಸು ಕಂಡಿತು. ಜತೆಗೆ ಪಂದ್ಯವನ್ನೂ ಗೆದ್ದೆವು’ ಎಂದರು.

ಇದನ್ನು ಬೆನ್ನಟ್ಟಿದ ಆರ್‌ಸಿಬಿ 19.3 ಓವರ್‌ಗಳಲ್ಲಿ 115ಕ್ಕೆ ಆಲೌಟ್‌ ಆಯಿತು. ಕೊಹ್ಲಿ, ಶಬಾಜ್‌, ಪ್ರಭುದೇಸಾಯಿ ಹಾಗೂ ಹರ್ಷಲ್‌ ನೀಡಿದ ಕ್ಯಾಚ್‌ಗಳನ್ನೆಲ್ಲ ಪರಾಗ್‌ ಯಶಸ್ವಿಯಾಗಿ ತಮ್ಮ ಬೊಗಸೆಗೆ ಸೇರಿಸಿಕೊಂಡರು.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.