Ration: 90ರ ಮೇಲ್ಪಟ್ಟ ವಯೋವೃದ್ಧರ ಮನೆಗೇ ಪಡಿತರ!
ಅನ್ನ ಸುವಿಧ ಪೈಲಟ್ ಯೋಜನೆ ಜಾರಿ
Team Udayavani, Nov 1, 2023, 1:25 AM IST
ಮಂಗಳೂರು: ನ್ಯಾಯಬೆಲೆ ಅಂಗಡಿಗಳಿಗೆ ತೆರಳಲಾರದ ವಯೋವೃದ್ಧರ ಮನೆಗಳಿಗೆ ತೆರಳಿ ಪಡಿತರ ವಿತರಿಸುವ ಅನ್ನ ಸುವಿಧ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯ ಸರಕಾರ ರಾಜ್ಯಾದ್ಯಂತ ಜಾರಿಗೊಳಿಸಿದೆ. ಕಾರ್ಡ್ನಲ್ಲಿ ಓರ್ವ ಸದಸ್ಯರಷ್ಟೇ ಇರುವವರಿಗೆ ಇದು ಅನ್ವಯ.
ಸರಕಾರ ಒದಗಿಸುವ ಪಡಿತರವನ್ನು ವೃದ್ಧಾಪ್ಯದ ಕಾರಣಕ್ಕೆ ಸರಿಯಾಗಿ ಪಡೆಯಲಾಗದೆ ಸಂಕಷ್ಟದಲ್ಲಿರುವ ಹಿರಿಯ ಚೇತನಗಳಿಗೆ ನೆರವಾಗುವ ಉದ್ದೇಶ ಈ ಯೋಜನೆಯಿದು.ರಾಜ್ಯದಲ್ಲಿ ಒಟ್ಟು 7 ಸಾವಿರ ಮಂದಿ ಇಂತಹ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ 800 ಮಂದಿಗೆ ಪಡಿತರ ವಿತರಿಸಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಪಡಿತರ ಅಂಗಡಿಯವರೇ ತಮ್ಮ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರ ಮನೆಗೆ ಹೋಗಿ ನೀಡಿ ಬರುತ್ತಿದ್ದಾರೆ.
ಈ ಹಿಂದೆ ಇಂತಹ ವೃದ್ಧರಿಗೆ ಒಟಿಪಿ ಸಹಿತ ರೇಷನ್ ಪಡೆಯುವುದಕ್ಕೆ ರಿಯಾ ಯಿತಿ ನೀಡುವುದಕ್ಕೆ ಅವಕಾಶವಿತ್ತು. ನೆರೆ ಮನೆಯವರೋ ಅಥವಾ ಅವರ ಯಾರೋ ಸಂಬಂಧಿಕರು ಬಂದು ಒಟಿಪಿ ರಹಿತವಾಗಿ ರೇಷನ್ ಪಡೆಯುತ್ತಿದ್ದರು. ಅನ್ನ ಸುವಿಧ ಯೋಜನೆ ಜಾರಿಯಾದ ಬಳಿಕ ನೇರವಾಗಿ ಪಡಿತರ ಅಂಗಡಿಯವರೇ ಮನೆಗೆ ತಲುಪಿ ಸುವುದರಿಂದ ಈ ರಿಯಾಯಿತಿ ತೆರವಾಗುವ ಸಾಧ್ಯತೆ ಇದೆ.
ಸರಳ ಆ್ಯಪ್
ಯೋಜನೆ ಕಾರ್ಯಗತ ಮಾಡುವುದಕ್ಕಾಗಿ ಅನ್ನ ಸುವಿಧ ಆ್ಯಪ್ ಸಿದ್ಧಪಡಿಸಿ ಆಹಾರ ನಿರೀಕ್ಷಕರು, ಪಡಿತರ ಅಂಗಡಿಯವರಿಗೆ ಲಾಗಿನ್ ಕೊಡಲಾಗಿದೆ. ಅಂಗಡಿಯವರು ತಮ್ಮ ಮೊಬೈಲ್ ನಂಬರ್ ಮೂಲಕ ಒಟಿಪಿಯೊಂದಿಗೆ ಲಾಗಿನ್ ಆಗುತ್ತಾರೆ.
ಆಗ ಅವರ ಆ್ಯಪ್ನಲ್ಲಿ ಅವರ ವ್ಯಾಪ್ತಿಯಲ್ಲಿರುವ 90 ಪ್ಲಸ್ ಹಿರಿಯ ನಾಗರಿಕರ ಪಟ್ಟಿ, ಪಡಿತರ ವಿವರಗಳು ಬರುತ್ತವೆ. ಅಲ್ಲಿಗೆ ತೆರಳಿ ಪಡಿತರ ವಿತರಿಸಬೇಕು. ಅದರ ಫೋಟೋವನ್ನೂ ತೆಗೆದು ಅಪ್ಲೋಡ್ ಮಾಡಬೇಕು, ಅದನ್ನು ಆಹಾರ ನಿರೀಕ್ಷಕರು ಲಾಗಿನ್ನಲ್ಲಿ ದೃಢ ಪಡಿಸಬೇಕು. ಇದೆಲ್ಲವೂ ಸರಳ ಪ್ರಕ್ರಿಯೆಗಳಾಗಿವೆ.
ಶೀಘ್ರ ಯೋಜನೆ ಜಾರಿ?
ಅನ್ನ ಸುವಿಧ ಸದ್ಯ ಪೈಲಟ್ ಯೋಜನೆಯಾಗಿದ್ದು, ಮನೆಗೆ ನ್ಯಾಯಬೆಲೆ ಅಂಗಡಿಯವರು ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಆದರೆ ಮುಂದೆ ಈ ಯೋಜನೆ ಖಾಯಂ ಆಗಿ ಜಾರಿಯಾಗುವಾಗ ಒಂದು ಬಟವಾಡೆಗೆ ಶುಲ್ಕವಾಗಿ 50 ರೂ. ನೀಡುವ ಪ್ರಸ್ತಾವನೆಯನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ಇದನ್ನು ಹಣಕಾಸು ಇಲಾಖೆ ಅನುಮೋದನೆ ನೀಡಿದ ಬಳಿಕ ಯೋಜನೆ ಅಧಿಕೃತವಾಗಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
~ ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು