Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್
Team Udayavani, May 2, 2024, 11:18 PM IST
ರಾಯಚೂರು/ ಶಿವಮೊಗ್ಗ: ದೇಶದ ಜನಗಣತಿ ಮಾಡಿ ಆರ್ಥಿಕತೆಯಲ್ಲಿ ಯಾವ ಸಮುದಾ ಯದ ಪಾಲು ಎಷ್ಟು ಎಂದು ಬಯಲು ಮಾಡುತ್ತೇವೆ. ಈ ವಿಚಾರ ದೇಶದ ಎಲ್ಲ ನಾಗರಿಕರಿಗೂ ಗೊತ್ತಾದಾಗಲೇ ಅಸಲಿ ರಾಜಕೀಯ ಆರಂಭವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ರಾಯಚೂರು ಹಾಗೂ ಶಿವಮೊಗ್ಗದಲ್ಲಿ ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ “ಪ್ರಜಾಧ್ವನಿ ಯಾತ್ರೆ-2′ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಷ್ಟು ಬಡ ಕುಟುಂಬಗಳಿವೆ ಎಂಬ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ದೇಶದ ಶೇ.90 ಬಡಜನರ ತೆರಿಗೆ ಹಣ ಕೆಲವೇ ಕೆಲವು ಸಿರಿವಂತರ ಜೇಬು ಸೇರುತ್ತಿದೆ. ದೇಶದ 70 ಕೋಟಿ ಜನರ ಆಸ್ತಿ ಕೇವಲ 20 ಜನರ ಬಳಿಯಿದೆ. ಕೇಂದ್ರ ಸರಕಾರ ಕೇವಲ 20-25 ಜನರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ದೇಶದಲ್ಲಿ ಶೇ.15 ದಲಿತರು, ಶೇ.50 ಹಿಂದುಳಿದವರು, ಶೇ.8 ಆದಿವಾಸಿಗಳು, ಶೇ.15 ಅಲ್ಪಸಂಖ್ಯಾಕರು, ಶೇ.6 ಸಾಮಾನ್ಯ ವರ್ಗದ ಜನರಿದ್ದಾರೆ. ಈ ಸಮುದಾಯಗಳಿಗೆ ಪ್ರಧಾನಿ ಮೋದಿ ಏನೂ ಮಾಡಿಲ್ಲ. ದೇಶದ ಎಲ್ಲ ಮಾಧ್ಯಮಗಳ ಮಾಲಕರು ದಲಿತರು, ಹಿಂದುಳಿದವರಲ್ಲ ಎಂದರು.
ಅಷ್ಟೇ ಅಲ್ಲ, ಇಡೀ ದೇಶದ ಆರ್ಥಿಕತೆ ನಿರ್ವಹಿಸುತ್ತಿರುವುದು ಕೂಡ ಕೇವಲ 90 ಐಎಎಸ್ ಅ ಧಿಕಾರಿಗಳು. ಅದರಲ್ಲಿ ದಲಿತರು, ಹಿಂದುಳಿದ, ಅಲ್ಪಸಂಖ್ಯಾಕರ ಸಂಖ್ಯೆ ಕೇವಲ ಬೆರಳೆಣಿಕೆ ಮಾತ್ರ. ಅವರಿಗೂ ಸಣ್ಣಪುಟ್ಟ ಹುದ್ದೆ ನೀಡಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಹಿಂದುಳಿದವರಿಗೆ ಸ್ಥಾನ ಇಲ್ಲ. 100 ರೂಪಾಯಿಯಲ್ಲಿ ಕೇವಲ 6 ರೂ. ವೆಚ್ಚ ನಿರ್ಧರಿಸುವ ಹಕ್ಕು ಮಾತ್ರ ಹಿಂದುಳಿದವರಿಗಿದೆ. ಸಮಾನತೆ ಬಗ್ಗೆ ಮಾತನಾಡುವವರು ನಕ್ಸಲರು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳುತ್ತಾರೆ. ಇದು ಸಂವಿಧಾನದ ಮೇಲಿನ ಅತಿ ದೊಡ್ಡ ಆಕ್ರಮಣವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕೊಡಬೇಕು. ನಡ್ಡಾ ಹೇಳಿಕೆ ಸಂವಿಧಾನ ವಿರೋ ಧಿಯಾಗಿದ್ದು, ಅವರು ಕ್ಷಮೆಯಾಚನೆ ಜತೆಗೆ ಹುದ್ದೆ ತ್ಯಜಿಸಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ
Prajwal ಬಂಧನಕ್ಕೆ ರೆಡ್ ಕಾರ್ನರ್ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ
State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್ ಆರೋಪ
Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ
Govt ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಕಡ್ಡಾಯಕ್ಕೆ ಆದೇಶ
MUST WATCH
ಹೊಸ ಸೇರ್ಪಡೆ
Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ
IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ
OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್ಗಳ ಹೆಸರಲ್ಲಿ ಸಂದೇಶ
Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ