ಫಲಿಸಿದ ಹರಕೆ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪತ್ರಕರ್ತನ ಪತ್ನಿಗೆ ಗೆಲುವು
Team Udayavani, Dec 31, 2020, 3:39 PM IST
ಮುದ್ದೇಬಿಹಾಳ: ಕುಂಟೋಜಿ ಗ್ರಾಮ ಪಂಚಾಯತ್ ನ ಕುಂಟೋಜಿಯ 3ನೇ ವಾರ್ಡ್ ಹಿಂದುಳಿದ ಅ ವರ್ಗದ ಮಹಿಳೆ ಸ್ಥಾನಕ್ಕೆ ಸ್ಪರ್ಧಿಸಿದ್ದ ಪತ್ರಕರ್ತ ಬಸವರಾಜ ಹುಲಗಣ್ಣಿಯವರ ಪತ್ನಿ ಮಂಜುಳಾ ಹುಲಗಣ್ಣಿ 227 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಈ ಸ್ಥಾನಕ್ಕೆ ಕುಂಟೋಜಿ ಗ್ರಾಪಂನ ನಿಕಟಪೂರ್ವ ಉಪಾಧ್ಯಕ್ಷೆ ಗೌರಮ್ಮ ಆರೇಶಂಕರ, ಮಾಜಿ ಅಧ್ಯಕ್ಷೆ ಲಕ್ಕಮ್ಮ ಅಂದೇಲಿಯವರ ಸೊಸೆ ರೇಣುಕಾ, ನಿಕಟಪೂರ್ವ ಸದಸ್ಯೆ ಮಹಾದೇವಿ ಯರಝರಿ ಪ್ರತಿಸ್ಪರ್ಧಿಗಳಾಗಿದ್ದರು. ಇಂಥ ಘಟಾನುಘಟಿಗಳ ಪೈಪೋಟಿ ಮಧ್ಯೆಯೂ ಮಂಜುಳಾಗೆ ವಿಜಯಲಕ್ಷ್ಮೀ ಒಲಿದಿರುವುದು ಆ ವಾರ್ಡ್ ಬಹುತೇಕರ ಹರ್ಷಕ್ಕೆ
ಕಾರಣವಾಗಿದೆ. ಇದೇ ವಾರ್ಡ್ನಲ್ಲೇ ಎಣಿಕೆ ಸಂದರ್ಭ ಒಂದು ಮತ ಮಿಸ್ ಆಗಿ ಗೊಂದಲ ಸೃಷ್ಟಿಸಿತ್ತು.
ಇದನ್ನೂ ಓದಿ:ಶಹಾಪುರ: ಮತ ಎಣಿಕೆ ಕೇಂದ್ರಕ್ಕೆ ಪಂಚ್- ಚಾಕು ತಂದ ಅಭ್ಯರ್ಥಿ ಮಗ
ಹರಕೆ ಹೊತ್ತಿದ್ದ ಪತಿ: ತನ್ನ ಪತ್ನಿಗೆ ಗೆಲುವಾಗಲಿ ಎಂದು ಬಸವರಾಜ ಅವರು ಮನೆದೇವರು ನಿಡಗುಂದಿ ತಾಲೂಕಿನ ಕೃಷ್ಣಾ ನದಿ ತಟಲ್ಲಿರುವ ಯಲ್ಲಮ್ಮನ ಬೂದಿಹಾಳದ ಯಲ್ಲಮ್ಮದೇವಿಗೆ ಹರಕೆ ಹೊತ್ತು ಕೊಂಡಿದ್ದರು. ಮತದಾನದ ಮುನ್ನಾದಿನ
ಮಂಗಳವಾರ ಕಾಲ್ನಡಿಗೆಯಲ್ಲೇ ಕುಂಟೋಜಿಯಿಂದ ಯಲ್ಲಮ್ಮನ ಬೂದಿಹಾಳಕ್ಕೆ ತೆರಳಿ, ಕೃಷ್ಣೆಯಲ್ಲಿ ಮಿಂದು, ದೇವಿಯ ದರ್ಶನ ಪಡೆದುಕೊಂಡಿದ್ದರು. ನನ್ನ ಹರಕೆ ಫಲಿಸಿದೆ. ದೇವಿ ನಮ್ಮನ್ನು ಆಶೀರ್ವದಿಸಿದ್ದಾಳೆ. ದೇವಿ ಮಹಿಳೆ ದೊಡ್ಡದು ಎಂದು ಬಸವರಾಜ ಸುದ್ದಿಗಾರರಿಗೆ ಹೇಳಿಕೊಂಡು ಸಂಭ್ರಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…