ಕೆಎಸ್ಆರ್ಟಿಸಿ ಬಸ್- ಸ್ಕೂಟಿ ಢಿಕ್ಕಿ; ಸವಾರ ಸಾವು
Team Udayavani, May 6, 2022, 6:40 PM IST
ಕಾರ್ಕಳ: ಕಾರ್ಕಳ ಜಾರ್ಕಳ ಜಂಕ್ಷನ್ನಲ್ಲಿ ಸ್ಕೂಟಿ ಹಾಗೂ ಸರಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಮಹಾಲಿಂಗ ಅವರು ಮೃತಪಟ್ಟಿದ್ದಾರೆ. ಹಿಂಬದಿ ಸವಾರೆ ಶಾರದಾ ಗಾಯಗೊಂಡಿದ್ದಾರೆ.
ಮೇ 5ರಂದು ಮಹಾಲಿಂಗ ಅವರು ಶಾರದಾ ಅವರನ್ನು ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ಯರ್ಲಪ್ಪಾಡಿ ಯಿಂದ ಜಾರ್ಕಳ ರಸ್ತೆ ಕಡೆಗೆ ತೆರಳುತ್ತಿದ್ದ ವೇಳೆ ಜಾರ್ಕಳ ಜಂಕ್ಷನ್ ತಲುಪುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಬಂದ ಕೆಎಸ್ಆರ್ಟಿಸಿ ಢಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟಿ ಸವಾರ, ಸಹಸವಾರೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳಿಬ್ಬರನ್ನು ಮಹಾಲಿಂಗ ಅವರ ಸಂಬಂಧಿ ಸಂತೋಷ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮಹಾಲಿಂಗ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಾಯಗೊಂಡ ಶಾರದಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.