ಹನುಮಗಿರಿ ಭೇಟಿಯನ್ನು ಟ್ವೀಟರ್ನಲ್ಲಿ ಹಂಚಿಕೊಂಡ ಶಾ; ಸಮೃದ್ಧಿಗಾಗಿ ಪ್ರಾರ್ಥನೆ
ಹನುಮಗಿರಿ ಪಂಚಮುಖಿ ಆಂಜನೇಯ ದೇವಾಲಯದ ಭೇಟಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.
Team Udayavani, Feb 14, 2023, 12:05 PM IST
ಪುತ್ತೂರು: ಈಶ್ವರಮಂಗಲದ ಅಮರಗಿರಿಯ ಶ್ರೀ ಭಾರತೀ ಅಮರಜ್ಯೋತಿ ಮಂದಿರಕ್ಕೆ ನೀಡಿದ ಭೇಟಿ ನೀಡಿದಾಗಿನ ಅನುಭವವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ದೇವಾಲಯವು ಮಾತೃ ಭೂಮಿಯ ಭದ್ರತೆ ಮತ್ತು ಸಮೃದ್ಧಿಗಾಗಿ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತರಿಗೆ ಸಮರ್ಪಿತವಾಗಿದೆ. ಇದು ಹೊಸ ಪೀಳಿಗೆಗೆ ದೇಶಕ್ಕಾಗಿ ಬದುಕಲು ಸ್ಫೂರ್ತಿ ನೀಡುತ್ತದೆ ಎಂದು ಅಮರಗಿರಿಯ ಬಗ್ಗೆ ಟ್ವೀಟ್ ಮಾಡಿರುವ ಅವರು ಹನುಮಗಿರಿ ಪಂಚಮುಖಿ ಆಂಜನೇಯ ದೇವಾಲಯದ ಭೇಟಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.
कर्नाटक के पुत्तूर स्थित ईश्वरमंगला के पंचमुखी अंजनेय मंदिर में पूजा-अर्चना कर देश की प्रगति व समृद्धि की प्रार्थना की।
ಕರ್ನಾಟಕದ ಪುತ್ತೂರಿನಲ್ಲಿರುವ ಈಶ್ವರಮಂಗಲದ ಪಂಚಮುಖಿ ಆಂಜನೇಯ ಮಂದಿರದಲ್ಲಿ ಪೂಜೆ-ಅರ್ಚನೆ ನೆರವೇರಿಸಿ ದೇಶವಾಸಿಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ. pic.twitter.com/xg0zvvzmm7
— Amit Shah (@AmitShah) February 11, 2023
ಪಂಚಮುಖಿ ಆಂಜನೇಯ ಮಂದಿರದಲ್ಲಿ ಪೂಜೆ, ಅರ್ಚನೆ ನೆರವೇರಿಸಿ ದೇಶವಾಸಿಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಪುತ್ತೂರಿನಲ್ಲಿನ CAMPCO ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದೆ.
50 ವರ್ಷಗಳ ಹಿಂದೆ ಬಹುರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೋ ಸ್ಥಾಪನೆಯಿಂದಾಗಿ ಸಣ್ಣ ರೈತರಲ್ಲಿ ಭರವಸೆಯ ಆಶಾಕಿರಣ ಮೂಡಿತು. ಇದು ಇಂದು ₹ 2778 ಕೋಟಿ ವಹಿವಾಟಿನ ಜೊತೆಗೆ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯಕ್ಕೆ ಆದರ್ಶಪ್ರಾಯವಾಗಿ ನಿಂತಿದೆ. pic.twitter.com/ELsTwchMaJ
— Amit Shah (@AmitShah) February 11, 2023
ಕ್ಯಾಂಪ್ಕೋ ಸಂಸ್ಥೆಯ ಬಗ್ಗೆ ಉಲ್ಲೇಖೀಸುತ್ತ, 50 ವರ್ಷಗಳ ಹಿಂದೆ ಬಹುರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೋ ಸ್ಥಾಪನೆಯಿಂದಾಗಿ ಸಣ್ಣ ರೈತರಲ್ಲಿ ಭರವಸೆಯ ಆಶಾಕಿರಣ ಮೂಡಿತು. ಇದು ಇಂದು 2778 ಕೋಟಿ ವಹಿವಾಟಿನ ಜತೆಗೆ “ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯಕ್ಕೆ ಆದರ್ಶಪ್ರಾಯವಾಗಿ ನಿಂತಿದೆ ಎಂದು ಪ್ರಶಂಸಿಸಿದ್ದಾರೆ.