ಪ್ರಶ್ನಿಸಿದಾಗ ಉತ್ತರ ಸಿಗಲು ಸಾಧ್ಯ


Team Udayavani, Jan 29, 2021, 8:24 PM IST

Isaac-Newton

ನಮ್ಮಲ್ಲಿನ ಹೊಸ ಆಲೋಚನೆಗಳು ನಮ್ಮನ್ನು ಹೊಸ ಜಗತ್ತಿಗೆ ಕರೆದುಕೊಂಡು ಹೋಗುತ್ತವೆ. ಎಲ್ಲರಂತೆ ವಿಭಿನ್ನರಾಗಿ ಕಾಣುವಂತೆ ಮಾಡುತ್ತವೆ. ಅಂತಹ ವಿಭಿನ್ನ ಅಲೋಚನೆಯಿಂದ ಜಗತ್ತಿನ ಗಮನಸೆಳೆದ ವಿಜ್ಞಾನಿ ಐಸಾಕ್‌ ನ್ಯೂಟನ್‌.

ನ್ಯೂಟನ್‌ ಜಗತ್ತು ಕಂಡ ಅಪ್ರತಿಮ ವಿಜ್ಞಾನಿ. ತಾಳ್ಮೆ, ಸಹನೆ ಮತ್ತು ವಿಭಿನ್ನ ಕಲಾತ್ಮಕ ದೃಷ್ಟಿಕೋನ ಅವರನ್ನು ಇಡೀ ಜಗತ್ತಿನ ಮುಂದೆ ಸಾಧಕನಾಗಿ ನಿಲ್ಲುವಂತೆ ಮಾಡಿತು. ನ್ಯೂಟನ್‌ ಅವರ ಜೀವನ ಮತ್ತು ಸಾಧನೆ ಸ್ಫೂರ್ತಿ ಮತ್ತು ಆದರ್ಶ. ಹೀಗಾಗಿ ಅವರು ತಮ್ಮ ಜೀವನದಲ್ಲಿ ಕಂಡ ಏಳು-ಬೀಳುಗಳನ್ನು ಮೆಟ್ಟಿನಿಂತು ಸಾಧಿಸಿದ ಮೈಲಿಗಲ್ಲುಗಳ ಬಗ್ಗೆ ತಿಳಿದುಕೊಳ್ಳೋಣ.

ಸರ್‌ ಐಸಾಕ್‌ ನ್ಯೂಟನ್‌ ಇಂಗ್ಲೆಂಡ್‌ನ‌ಲ್ಲಿ 1642ರಲ್ಲಿ ಜನಿಸಿದರು. ಹುಟ್ಟುವ ಮೂರು ತಿಂಗಳ ಮೊದಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ ಹಣೆಪಟ್ಟಿ ಅವರಿಗಿದೆ. ಹುಟ್ಟುತ್ತಲೇ ತಂದೆಯನ್ನು ಕಳೆದುಕೊಂಡ ನ್ಯೂಟನ್‌ನಿಗೆ ಅವರ ಅಜ್ಜಿ ಆ ಕೊರತೆಯನ್ನು ನೀಗಿಸುತ್ತಾಳೆ. ಚಿಕ್ಕಂದಿನಿಂದಲೂ ಅನ್ವೇಷಣೆ ಮತ್ತು ಪ್ರಶ್ನಿಸುವ ಮನೋಭಾವದವನಾಗಿದ್ದ ನ್ಯೂಟನ್‌ ಪ್ರತೀ ವಿಚಾರಕ್ಕೂ ಅಜ್ಜಿಯನ್ನು ಪ್ರಶ್ನಿಸಿಯೇ ಉತ್ತರ ಪಡೆದುಕೊಳ್ಳುತ್ತಿದ್ದ. ಇದೇ ಮುಂದೆ ಆತನನ್ನು ವಿಜ್ಞಾನಿಯಾಗಲು ಪ್ರೇರೇಪಿಸಿತು.

ಸೇಬಿನ ಮರದ ಕೆಳಗೆ…!
ಅದೊಂದು ದಿನ ನ್ಯೂಟನ್‌ ಸೇಬಿನ ಮರದ ಕೆಳಗೆ ತನ್ನದೇ ಲೋಕದಲ್ಲಿ ಆಟವಾಡುತ್ತ ಕುಳಿತ್ತಿದ್ದ. ಒಮ್ಮಿಂದೊಮ್ಮೆಲೇ ಮರದಿಂದ ಸೇಬು ಹಣ್ಣೊಂದು ಆತನ ತಲೆಯ ಮೇಲೆ ಬಿದ್ದಿತು. ಚಿಕ್ಕಂದಿನಿಂದಲೂ ಪ್ರಶ್ನಿಸುವ ಮನೋಭಾವದವನಾಗಿದ್ದ ಈತ ಮತ್ತೆ ಈ ಬಗ್ಗೆ ತನ್ನಲ್ಲಿ ತಾನೇ ಕೇಳಿಕೊಂಡ. ಈ ಸೇಬು ಹೇಗೆ ಬಿದ್ದಿತ್ತು. ಮೇಲೆ ಯಾರು ಇಲ್ಲದಿದ್ದರೂ ಹೇಗೆ ಬಿದ್ದಿತ್ತು.?ಹೀಗೆ ಪ್ರಶ್ನೆಯೇ ಮೇಲೆ ಪ್ರಶ್ನೆಯ ಕೇಳಿಕೊಂಡನು. ಕೊನೆಗೆ ಒಂದು ದಿನ ಫ‌ಲಿತಾಂಶ ಬಂದೇ ಬಿಟ್ಟಿತ್ತು. ಅದುವೇ ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂಬ ಸಂಶೋಧನೆ. ಇದು ಇಡೀ ಜಗತ್ತಿನ ಕಣ್ಣು ತೆರೆಸಿತ್ತು.

ವಿಜ್ಞಾನದ ಮೇಲೆ ಅಪರಿಮಿತ ಆಸಕ್ತಿ!
ನ್ಯೂಟನ್‌ ಚಿಕ್ಕಂದಿನಿಂದಲೂ ವಿಜ್ಞಾನದ ಮೇಲೆ ಕುತೂಹಲ ಕಣ್ಣು. ಪ್ರಶ್ನಿಸುವ ಮನೋಭಾವನಾಗಿದ್ದನು. ಈತನಿಗೆ ವಿಜ್ಞಾನ ಅಚ್ಚುಮೆಚ್ಚಿನ ವಿಷಯವಾಗಿತ್ತು. ಗೆಲಿಲಿಯೋ ಹಾಗೂ ಆತನ ಇನ್ನಿತರ ಸಂಶೋಧನೆಯ ಮೇಲೆ ತೀವ್ರ ಆಸಕ್ತಿ ಹೊಂದಿದ್ದನು. 1687ರಲ್ಲಿ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿ ಕಾರ್ಯನಿರ್ವಹಿಸುವ ಸಂದರ್ಭ ಪ್ರಿನ್ಸಿಪಿಯಾ ಎಂಬ ಪುಸ್ತಕ ಪ್ರಕಟಿಸುತ್ತಾರೆ. ಈ ಪುಸ್ತಕದಲ್ಲಿ ಗುರುತ್ವ ಸಿದ್ಧಾಂತ ಹಾಗೂ ವಸ್ತುಗಳು ಕೆಳಗೆ ಬೀಳಲು ಕಾರಣವೇನು ಹಾಗೂ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಪ್ರತಿಪಾದಿಸುವ ವಿವರಣೆ ನೀಡಿದರು.

ನ್ಯೂಟನ್‌ನ ಮೂರು ನಿಯಮಗಳು ಜನಪ್ರಿಯವಾಗಿವೆ. ನ್ಯೂಟನ್‌ ಲೆಕ್ಕಾಚಾರ ಜನರಿಗೆ ಖಗೋಳದ ಮೇಲಿರುವ ಅರ್ಥವನ್ನೇ ಬದಲಿಸುವಂತೆ ಮಾಡಿತು. ನ್ಯೂಟನ್‌ಗೂ ಮೊದಲು ಗ್ರಹಗಳು ತಮ್ಮದೇ ಆದ ಕಕ್ಷೆಯಲ್ಲಿ ಏಕೆ ಇವೆ ಎನ್ನುವ ವಿಷಯದ ಕುರಿತು ಯಾರಿಗೂ ವಿವರಣೆ ನೀಡಲು ಸಾಧ್ಯವಾಗಿರಲಿಲ್ಲ. ಶ್ರೇಷ್ಠ ವಿಜ್ಞಾನಿ ಐಸಾಕ್‌ ನ್ಯೂಟನ್‌ ಅನಾರೋಗ್ಯದಿಂದ ಮಾರ್ಚ್‌ 20, 1727 ರಂದು ನಿಧನರಾದರು.


 ಭರತ್‌ ಕುಮಾರ್‌, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು 

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.