ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳ ತಿರುಗಾಟಕ್ಕೆ ಸಿದ್ಧ
ಕ್ಷೇತ್ರದ ಮಹಾತ್ಮೆ ಸಾರುವ ಪ್ರಸಂಗ ಪ್ರದರ್ಶನ
Team Udayavani, Nov 17, 2023, 1:39 AM IST
ಕೋಟ: ಶಿರಿಯಾರ ಗ್ರಾಮದ ಮೆಕ್ಕೆಕಟ್ಟು ದೇವಸ್ಥಾನದ ಹೆಸರಿನಲ್ಲೇ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು- ಶಿರಿಯಾರ ಎನ್ನುವ ಬಡಗುತಿಟ್ಟಿನ ಹೊಸ ಮೇಳ ಆರಂಭಗೊಳ್ಳುತ್ತಿದ್ದು, ನ. 21ರಂದು ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆಯೊಂದಿಗೆ ಮೇಳದ ತಿರುಗಾಟ ಆರಂಭವಾಗಲಿದೆ.
ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ಅವರ ಯಜಮಾನತ್ವ ಹಾಗೂ ಬನ್ನಾಡಿ ಸಂತೋಷ ಕುಮಾರ್ ಶೆಟ್ಟಿ ಅವರ ಸಂಚಾಲಕತ್ವವಿದ್ದು, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೊಳ್ಳೆಬೈಲು ಕಿಶನ್ ಹೆಗ್ಡೆ ಮತ್ತು ಮೊಕ್ತೇಸರರು, ಕೊಳ್ಳೆಬೈಲು ಮೂರು ಮನೆಯವರು, ಆನುವಂಶಿಕ ಆರ್ಚಕರು, ಭಕ್ತರು ಸಹಕಾರ ನೀಡಿದ್ದಾರೆ.
ಡೇರೆ ಮೇಳದ ಗುಣಮಟ್ಟ ಬಡಗುತಿಟ್ಟಿನ ಪ್ರತಿಷ್ಠಿತ ಡೇರೆ ಮೇಳದ ಗುಣಮಟ್ಟವನ್ನು ಈ ಮೇಳ ಹೊಂದಿದ್ದು, ಬಹುತೇಕ ಡೇರೆಗಳ ಸ್ಟಾರ್ ಕಲಾವಿದರಿದ್ದಾರೆ. ಕಾಲಮಿತಿ ಹಾಗೂ ಇಡೀ ರಾತ್ರಿ ಎರಡೂ ರೀತಿಯ ಪ್ರದರ್ಶನಗಳಿಗೆ ಅವಕಾಶವಿದೆ.
ಕ್ಷೇತ್ರ ಮಹಾತ್ಮೆ ಬಿಡುಗಡೆ
ಕ್ಷೇತ್ರದ ಇತಿಹಾಸವನ್ನು ಸಾರುವ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ರಚಿಸಿದ್ದಾರೆ. ನಂದಿಯಾಗಿ ಹುಟ್ಟಿ ಅನಂತರ ವೃಷಭನಾಗಿ, ಶಿವನ ವಾಹನವಾಗುವ ನಂದಿಕೇಶ್ವರ ಸ್ವಾಮಿಯ ಚರಿತ್ರೆ ಮತ್ತು ಮೆಕ್ಕೆಕಟ್ಟುವಿನಲ್ಲಿ ಆತ ನೆಲೆಯಾಗುವುದು ಮತ್ತು ಜಂಬೂರು ಮಹಾಲಿಂಗೇಶ್ವರನ ಮಹಿಮೆಗಳು, ಚಂದಮ್ಮ ಶೆಡ್ತಿ ಎನ್ನುವ ದಿಟ್ಟ ಮಹಿಳೆ ಶಿರಿಯಾರ ಮೇಲ್ಮನೆಯಿಂದ ಪಾಲು ಹೊಂದಿ, ಕೊಳದಬೈಲು (ಕೊಳ್ಕೆಬೈಲಿನಲ್ಲಿ) ತನ್ನ ಸಂಸಾರವನ್ನು ಕಟ್ಟಿಕೊಳ್ಳಲು ಅನುಭವಿಸುವ ಯಾತನೆಯೊಂದಿಗೆ ಕಥೆ ಸಾಗುತ್ತದೆ. ಆಕೆ ಕೊಳ್ಕೆಬೈಲು ಮನೆತನದ ಮೂಲ ಯಜಮಾನಿಯಾಗಿ ದಿಟ್ಟ ನಿಲುವುಗಳು, ಸತ್ಯ ಸಂಧತೆಯಿಂದ ಬಾರ್ಕೂರು ಸಂಸ್ಥಾನದ ಮಾನ್ಯತೆಗೆ ಒಳಗಾಗಿ ಮೆಕ್ಕೆಕಟ್ಟಿನ ಪಾರುಪತ್ಯದ ಪೀಠ ಆಕೆಯ ಕೈ ಸೇರುವುದು ಮುಂತಾದ ಪೌರಾಣಿಕ ಹಾಗೂ ಚಾರಿತ್ರಿಕ ಕಥಾಹೂರಣ ಇದೆ.
ನ. 29ರಂದು ಶ್ರೀ ಕ್ಷೇತ್ರದಲ್ಲಿ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಎಡನೀರು ಮಠಾ ಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಬಿಡುಗಡೆಗೊಳಿಸಲಿದ್ದಾರೆ. ಪ್ರಸಂಗ ಕರ್ತ ದೇವದಾಸ್ ಈಶ್ವರಮಂಗಲ ಅವರ “ಸಾಗರ ಸಂಗಮ’ ಸಾಮಾಜಿಕ ಪ್ರಸಂಗ ಕೂಡ ತಿರುಗಾಟದಲ್ಲಿ ಪ್ರದರ್ಶನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ