ಎರಡು ಪ್ರತ್ಯೇಕ ಘಟನೆ : ಹಳಿಯಾಳದಲ್ಲಿ 40 ಎಕರೆ ಕಬ್ಬು ಬೆಂಕಿಗಾಹುತಿ, ಅಪಾರ ನಷ್ಟ
Team Udayavani, Mar 3, 2022, 1:01 PM IST
ಹಳಿಯಾಳ: ಬುಧವಾರ ತಾಲೂಕಿನ ಎರಡು ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ 40 ಎಕರೆ ಪ್ರದೇಶದಲ್ಲಿನ ಕಬ್ಬು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ.
ತಾಲೂಕಿನ ಕೆಕೆ ಹಳ್ಳಿ ಗ್ರಾಮದಲ್ಲಿ ರೈತ ಗುರುನಾಥ ಕೆಲಕೆರಿ ಅವರ 1.5ಎಕರೆ ಮತ್ತು ಕೃಷ್ಣಾ ಪಾಟೀಲ್ ಅವರ 2.5 ಎಕರೆ ಒಟ್ಟೂ 4 ಎಕರೆ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಇನ್ನೊಂದು ಘಟನೆಯಲ್ಲಿ ದೊಡ್ಡಕೊಪ್ಪ ಗ್ರಾಮದ ಸುಳಗೇಕರ ಎಂಬ ಒಂದೇ ಕುಟುಂಬದ 8 ಜನ ರೈತರಿಗೆ ಸೇರಿದ 17 ಎಕರೆ ಹಾಗೂ ಇದೇ ಗ್ರಾಮದ ಮಾರುತಿ ಬಾವಕರ ಅವರ 5 ಎಕರೆ, ಫಕಿರ ತೊರ್ಲೆಕರ 4 ಎಕರೆ, ರಾವಳು ಬಾವಕರ 2 ಎಕರೆ, ದೇಮಣ್ಣಾ ಬಾವಕರ 2.5 ಎಕರೆ ಒಟ್ಟೂ 30 ಎಕರೆ ಪ್ರದೇಶದಲ್ಲಿನ ಕಬ್ಬು ಬೆಂಕಿ ಅವಘಡಕ್ಕೆ ಹಾನಿಗೊಳಗಾಗಿದೆ.
ಸ್ಥಳಕ್ಕೆ ಹಳಿಯಾಳ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎಸ್ ಎಸ್ ಲಕ್ಷ್ಮೇಶ್ವರ ಹಾಗೂ ಪಿಸಿ ಜಾರ್ಜ ಅವರು ಭೇಟಿ ನೀಡಿ ತಮ್ಮ ಸಿಬ್ಬಂದಿಗಳೊಂದಿಗೆ ಅಗ್ನಿ ನಂದಿಸುವ ಕಾರ್ಯ ಮಾಡಿದರು.
ಮೂರನೇ ಘಟನೆಯಲ್ಲಿ ತಾಲೂಕಿನ ಚಿಬ್ಬಲಗೇರಿ ಗ್ರಾಪಂ ವ್ಯಾಪ್ತಿಯ ತೆಗ್ನಳ್ಳಿ ಗ್ರಾಮದಲ್ಲಿ ಮುತ್ತಲ ಮರಕ್ಕೆ ಬೆಂಕಿ ತಾಗಿತ್ತು ಅಗ್ನಿ ಶಾಮಕದಳದವರು ಇಲ್ಲಿಯು ಬೆಂಕಿ ನಂದಿಸಿದರು.
ಇದನ್ನೂ ಓದಿ : ಕೆಜಿಎಫ್-2 ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಅಧಿಕೃತ ಘೋಷಣೆ ಮಾಡಿದ ಹೊಂಬಾಳೆ ಫಿಲಂಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್