Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ
Team Udayavani, May 10, 2024, 10:18 PM IST
ಸುಳ್ಯ: ಕೆಂಪು ಕಲ್ಲು ಸಾಗಾಟ ನಡೆಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಸುಳ್ಯ ನಗರದ ಜಯನಗರದಲ್ಲಿ ಸಂಭವಿಸಿದೆ.
ಸುಳ್ಯದ ಜಯನಗರ ಶ್ರೀ ಗಜಾನನ ಭಜನ ಮಂದಿರದ ಬಳಿ ಮನೆಯೊಂದರ ನಿರ್ಮಾಣ ಕೆಲಸಕ್ಕೆ ಕೆಂಪು ಕಲ್ಲನ್ನು ತುಂಬಿಕೊಂಡು ಬಂದಿದ್ದು, ಲಾರಿ ಚಾಲಕ ಇಳಿಜಾರು ಪ್ರದೇಶದಲ್ಲಿ ಲಾರಿ ನಿಲ್ಲಿಸಿ ಲಾರಿಯ ಹಿಂಬದಿ ಚಕ್ರಕ್ಕೆ ಕಟ್ಟೆ ನೀಡಿದ್ದು, ಆದರೆ ಲಾರಿ ಹಿಂದಕ್ಕೆ ಚಲಿಸಿ ಪಕ್ಕದಲ್ಲಿನ ಭಜನ ಮಂದಿರದ ಆವರಣ ಗೋಡೆಗೆ ಬಡಿದು ಆವರಣದೊಳಗೆ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದು, ಲಾರಿ ಹಾಗೂ ಕಾಂಪೌಂಡ್ಗೆ ಹಾನಿಗೊಂಡಿದೆ.