Eggs: ಅಂಗನವಾಡಿಗಳಿಗೆ ಮತ್ತೆ ಕೊಳೆತ ಮೊಟ್ಟೆ ಪೂರೈಕೆ
Team Udayavani, Aug 11, 2023, 12:28 AM IST
ಸುರತ್ಕಲ್: ಅಂಗನ ವಾಡಿಗೆ ಮತ್ತೆ ಹಾಳಾದ ಮೊಟ್ಟೆ ಪೂರೈಕೆ ಕಂಡುಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಿಂಗಳ ಹಿಂದೆ ಕೊಳೆತ ಮೊಟ್ಟೆ ಪೂರೈಕೆ ವಿವಾದಕ್ಕೆ ಕಾರಣವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿಗಳಿಗೆ ಮೊಟ್ಟೆ ಪೂರೈಸುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು. ಗುರುವಾರ ಕಾಟಿಪಳ್ಳ ಆಸುಪಾಸಿನ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ.
ಈ ಬಗ್ಗೆ ಶಾಸಕ ಡಾ| ಭರತ್ ಶೆಟ್ಟಿ ವೈ. ಪ್ರತಿಕ್ರಿಯಿಸಿ, ರಾಜ್ಯಾದ್ಯಂತ ಇಂತಹ ಪ್ರಕರಣ ಕಂಡು ಬಂದಿದೆ.ಹಾಳಾದ ಮೊಟ್ಟೆಯ ಬದಲು ನಗದು ನೀಡಿ, ಉತ್ತಮ ಮೊಟ್ಟೆ ತಂದು ಮನೆಯಲ್ಲಿಯೇ ಸೇವಿಸಲಿ ಎಂದರು.