ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸೋತವರಿಗೂ ‘ಅಲ್ಟ್ರಾಜ್ ಕಾರು ಉಡುಗೊರೆ ಘೋಷಿಸಿದ ಟಾಟಾ
Team Udayavani, Aug 13, 2021, 3:46 PM IST
ನವದೆಹಲಿ : ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಕಳೆದುಕೊಂಡ ಭಾರತೀಯ ಟಾಪ್ ಆಟಗಾರರಿಗೆ ಟಾಟಾ ಕಂಪನಿ ಬಂಪರ್ ಉಡುಗೊರೆ ಘೋಷಿಸಿದೆ.
ಇತ್ತೀಚಿಗೆ ಜಪಾನ್ ನಲ್ಲಿ ನಡೆದ ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಭಾರತೀಯ ಆಟಗಾರರಿಗೆ ಸರ್ಕಾರ ಹಾಗೂ ಹಲವು ಸಂಸ್ಥಗಳು ಭರ್ಜರಿ ಉಡುಗೊರೆ ನೀಡಿದವು. ಜಾವೆಲಿನ್ ಥ್ರೋ ಪಟು ನೀರಜ್ ಜೋಪ್ರಾ ಅವರಿಗೆ ಮಹೀಂದ್ರಾ ಕಂಪನಿಯು ದುಬಾರಿ ಬೆಲೆಯ ಎಸ್ ಯುವಿ ಕಾರು ಗಿಫ್ಟ್ ಘೋಷಿಸಿತ್ತು. ಇದೀಗ ಟಾಟಾ ಕಂಪನಿಯೂ ಕೂಡ ಭಾರತೀಯ ಆಟಗಾರರಿಗೆ ಉಡುಗೊರೆ ನೀಡಲು ಮುಂದೆ ಬಂದಿದೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ತೋರಿ, ಕೊನೆಯ ಕ್ಷಣದಲ್ಲಿ ಕಂಚು ಪದಕ ಗೆಲ್ಲಲು ವಿಫಲಗೊಂಡ ಆಟಗಾರರಿಗೆ ಟಾಟಾ ‘ಅಲ್ಟ್ರಾಜ್; ಕಾರು ಉಡುಗೊರೆ ನೀಡುವುದಾಗಿ ಪ್ರಕಟಿಸಿದೆ.
As a gesture of gratitude, Tata Motors is happy to deliver ALTROZ – #TheGoldStandard to all the Indian athletes who narrowly missed the bronze at #TokyoOlympics. They may not have claimed a medal, but won millions of hearts and inspired billions to set #TheGoldStandard. pic.twitter.com/SlZazXG6HK
— Tata Motors Cars (@TataMotors_Cars) August 13, 2021
ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ನ ಅಧ್ಯಕ್ಷ ಶೈಲೇಶ್ ಚಂದ್ರ, ಈ ಒಲಿಂಪಿಕ್ ಭಾರತಕ್ಕೆ ಪದಕಗಳಿಗಿಂತ ಹೆಚ್ಚಿನದು ಆಗಿದೆ. ನಮ್ಮ ಆಟಗಾರರ ಶ್ರಮ ಹಾಗೂ ಚೈತನ್ಯ ನಾವು ಸಂಭ್ರಮಿಸಬೇಕು. ಒತ್ತಡದ ನಡುವೆಯೂ ಅದ್ಭುತವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ನಾವು ಮೆಚ್ಚಲೇಬೇಕು. ಈ ಆಟಗಾರರು ಪದಕ ಗೆಲ್ಲುವಲ್ಲಿ ಸೋತಿರಬಹುದು, ಆದರೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರ ತ್ಯಾಗ ಹಾಗೂ ಪರಿಶ್ರಮ ಭಾರತೀಯ ಉದಯೋನ್ಮುಖ ಯುವ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ಆಗಿದೆ. ಇವರನ್ನು ನಾವು ಗೌರವಿಸಿ ಅಭಿನಂದಿಸಬೇಕು. ಈ ನಿಟ್ಟಿನಲ್ಲಿ ಗೋಲ್ಡನ್ ಕಲರ್ ನ ‘ಅಲ್ಟ್ರಾಜ್’ ಕಾರು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ‘ಅಲ್ಟ್ರಾಜ್’ ಕಾರು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯವಾಗಿದೆ. ಈ ಕಾರು ಸೆಫ್ಟಿಯಲ್ಲಿ 5 ಸ್ಟಾರ್ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ