ಸೀತಾರಾಮ್ ಎಂದು ಬರೆದ ಪುಸ್ತಕಗಳೇ ಠೇವಣಿ-ಮಂದಿರ ಲೋಕಾರ್ಪಣೆ ಬಳಿಕ ದುಪ್ಪಟ್ಟಾದ ಖಾತೆ ಸಂಖ್ಯೆ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್
Team Udayavani, Feb 12, 2024, 12:34 AM IST
ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ವಿಶಿಷ್ಟವಾದ ಬ್ಯಾಂಕ್ ಇದೆ. ಇಲ್ಲಿ ಹಣದ ವಹಿವಾಟಿಗೆ ಜಾಗವಿಲ್ಲ. ಶುದ್ಧ ಭಕ್ತಿ, ನಂಬಿಕೆ, ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಮಾತ್ರ ಅವಕಾಶ. ಅಂತಾರಾಷ್ಟ್ರೀಯ ಶ್ರೀ ಸೀತಾರಾಮ್ ಬ್ಯಾಂಕ್ನಲ್ಲಿ 35,000ಕ್ಕೂ ಹೆಚ್ಚು ಖಾತೆದಾರರು ಇದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾದ ಅನಂತರ ಈ ಬ್ಯಾಂಕ್ನಲ್ಲಿ ಖಾತೆದಾರರ ಸಂಖ್ಯೆ ದಿನೇದಿನೆ ಅಧಿಕವಾಗುತ್ತಿದೆ.
“ಸೀತಾರಾಮ್’ ಎಂದು ಬರೆದಿರುವ ಕಿರುಪುಸ್ತಕಗಳೇ ಇಲ್ಲಿರುವ ಠೇವಣಿಗಳು. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಕೆನಡಾ, ನೇಪಾಲ, ಫಿಜಿ, ಯುಎಇ ಮತ್ತು ಇತರ ದೇಶಗಳ ಭಕ್ತರು ಕೂಡ ಇಲ್ಲಿ ಖಾತೆಗಳನ್ನು ತೆರೆಯುತ್ತಿದ್ದಾರೆ. ಶ್ರೀರಾಮನ ಭಕ್ತರಿಂದ 20,000 ಕೋಟಿ “ಸೀತಾರಾಮ್’ ಕಿರುಪುಸ್ತಕಗಳು ಬ್ಯಾಂಕ್ನ ಸಂಗ್ರಹ ದಲ್ಲಿದೆ. ಮಂದಿರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲ್ ದಾಸ್ 1970ರಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಿ ದ್ದರು. ಭಕ್ತರು ಇಲ್ಲಿಯವರೆಗೂ ಒಟ್ಟು 1.37 ಕೋಟಿ ರಾಮ ನಾಮ ಬರೆದು ಸಮರ್ಪಿಸಿದ್ದಾರೆ. “ಬ್ಯಾಂಕ್ ವತಿಯಿಂ ದ ಉಚಿತವಾಗಿ ಕಿರುಪುಸ್ತಕಗಳು, ಪೆನ್ಗಳನ್ನು ಒದಗಿಸಲಾಗುತ್ತದೆ. ಖಾತೆ ತೆರೆಯಬೇಕಾದರೆ ಭಕ್ತರು ಕನಿಷ್ಠ 5 ಲಕ್ಷ ಬಾರಿ “ಸೀತಾರಾಮ್’ ಎಂದು ಬರೆಯಬೇಕು. ದೇಶ-ವಿದೇಶದಲ್ಲಿ ಬ್ಯಾಂಕ್ನ ಒಟ್ಟು 136 ಶಾಖೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು