ಗ್ರಾಂ ಲೆಕ್ಕದಲ್ಲಿ ಹಂಚಿಕೆ, ತೂಕ ಮಾಡುವುದೇ ಸವಾಲು
ಮಕ್ಕಳು,ಗರ್ಭಿಣಿಯರ ಮನೆಗೇ ಪೌಷ್ಟಿಕ ಆಹಾರ ಪೂರೈಕೆ
Team Udayavani, Jun 15, 2020, 6:13 AM IST
ವಿಶೇಷ ವರದಿ–ಮಹಾನಗರ: ಕೋವಿಡ್-19ದಿಂದಾಗಿ ಅಂಗನವಾಡಿಗಳಲ್ಲಿ ಈಗ ಮಕ್ಕಳ ಕಲರವ ಇಲ್ಲ. ಮಕ್ಕಳು, ಗರ್ಭಿಣಿಯರಿಗೆ ಅಡುಗೆಯೂ ಸಿದ್ಧವಾಗುತ್ತಿಲ್ಲ. ಬದಲಾಗಿ ಅವರಿಗೆ ಗ್ರಾಂ ಲೆಕ್ಕದಲ್ಲಿ ಆಹಾರದ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ತಿಂಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ಹಂಚಿಕೆ ಮಾಡಲಾಗಿದ್ದು ಇದನ್ನು ತೂಕ ಮಾಡಿ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವುದು ಈಗ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸವಾಲಾಗಿದೆ. ಕೋವಿಡ್-19 ಕರ್ತವ್ಯದ ಜತೆ ಆಹಾರ ಸಾಮಗ್ರಿಗಳನ್ನು ಗ್ರಾಂ ಲೆಕ್ಕದಲ್ಲಿ ತೂಕ ಮಾಡುವ ಹೊಣೆಗಾರಿಕೆಯೂ ಕಾರ್ಯಕರ್ತೆಯರ ಮೇಲಿದೆ.
ಯಾರಿಗೆ ಎಷ್ಟು?
3ರಿಂದ 6 ವರ್ಷ ವಯಸ್ಸಿನ ಮಗುವಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.390 ಗ್ರಾಂ., ಸಕ್ಕರೆ 130 ಗ್ರಾಂ, ಅಕ್ಕಿ 1.560 ಕೆಜಿ, ತೊಗರಿಬೇಳೆ 0.153 ಗ್ರಾಂ, ಉಪ್ಪು 0.052 ಗ್ರಾಂ, ಮೆಣಸು 0.026, ಸಾಸಿವೆ 0.034 ಇತ್ಯಾದಿ ನೀಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ/ಬಾಣಂತಿಗೆ ತಿಂಗಳೊಂದಕ್ಕೆ ಹಾಲಿನ ಪುಡಿ 0.520 ಗ್ರಾಂ, ಅಕ್ಕಿ 3.900 ಕೆಜಿ, ಸಕ್ಕರೆ 0.130 ಗ್ರಾಂ, ಬೆಲ್ಲ 0.598 ಗ್ರಾಂ, ಮೆಣಸು 0.026 ಗ್ರಾಂ, ಸಾಸಿವೆ 0.017 ಗ್ರಾಂ, ಎಣ್ಣೆ 0.078 ಗ್ರಾಂ, ಉಪ್ಪು 0.078 ಗ್ರಾಂ ಇತ್ಯಾದಿಗಳನ್ನು ನೀಡಬೇಕಾಗಿದೆ.
ಪ್ಯಾಕೆಟ್ ಬದಲು ಚಿಲ್ಲರೆ
“ಮೇ ತಿಂಗಳಿನಲ್ಲಿ ಮಾತೃಪೂರ್ಣ ಯೋಜನೆಯಡಿ ಪ್ರತಿ ಫಲಾನುಭವಿಗೆ 8.5 ಕೆಜಿ ಅಕ್ಕಿ, ಅರ್ಧ ಕೆಜಿ ನೆಲಗಡಲೆ, ಅರ್ಧ ಕೇಜಿ ಬೇಳೆಯನ್ನೊಳಗೊಂಡ ಪ್ಯಾಕೆಟ್ ನೀಡಲಾಗಿತ್ತು. ಆದರೆ ಜೂನ್ನಲ್ಲಿ ಸಾಮಗ್ರಿಗಳನ್ನು ಬಿಡಿಬಿಡಿಯಾಗಿ ನೀಡಲಾಗಿದೆ. ಈ ರೀತಿ ಎಲ್ಲ ಸಾಮಗ್ರಿಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ನೀಡುವ ಬದಲು ಮುಖ್ಯವಾದ ಕೆಲವು ಸಾಮಗ್ರಿಗಳನ್ನು ಒಂದು ಪ್ಯಾಕೆಟ್ನಲ್ಲಿ ನೀಡಬಹುದು. ಉಳಿದ ಸಣ್ಣಪುಟ್ಟ ಸಾಮಗ್ರಿಗಳು ಸಾಮಾನ್ಯವಾಗಿ ಹೆಚ್ಚಿನವರ ಮನೆಗಳಲ್ಲಿ ಇರುವುದರಿಂದ ಅವುಗಳನ್ನೇ ಬಳಸಿಕೊಳ್ಳಬಹುದು. ಮುಂದಿನ ತಿಂಗಳಿನಿಂದ ಸರಕಾರ ಪ್ಯಾಕೆಟ್ನಲ್ಲಿಯೇ ಆಹಾರ ಸಾಮಗ್ರಿಗಳನ್ನು ನೀಡಿದರೆ ವಿತರಣೆಗೆ ಅನುಕೂಲ. ಗ್ರಾಂ ಲೆಕ್ಕದಲ್ಲಿ ತೂಕ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ’ ಎನ್ನುತ್ತಾರೆ ಕಾರ್ಯಕರ್ತೆಯರು.
ಕೋವಿಡ್-19 ಕರ್ತವ್ಯ
ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರಂತೆ ಕೋವಿಡ್-19 ನಿಯಂತ್ರಣ, ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಜತೆ ಕೈ ಜೋಡಿಸಿದ್ದಾರೆ. ವಿವಿಧ ರೀತಿಯ ಸಮೀಕ್ಷೆಗಳಲ್ಲೂ ಇದ್ದಾರೆ. ಇದರ ನಡುವೆ ಪ್ರತಿ ಮಗು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ತಲುಪಿಸುತ್ತಿದ್ದಾರೆ. ಮಕ್ಕಳಿಗೆ ಚುಚ್ಚುಮದ್ದು ಒದಗಿಸುವುದು, ಮಾತೃವಂದನಾ ಯೋಜನೆಗೆ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳುವುದು ಮೊದಲಾದ ಕೆಲಸಗಳೂ ಅವರದೇ. ಇದರ ನಡುವೆಯೂ ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ಆಹಾರ ತಲುಪಿಸಲಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಂದಾಳುಗಳು.
ಪ್ಯಾಕೆಟ್ನಲ್ಲಿಯೇ ನೀಡಿ
ಆಹಾರ ಸಾಮಗ್ರಿಗಳನ್ನು ಪ್ರತಿಯೊಬ್ಬರಿಗೂ ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಕೊಡುವುದು ಒಂದು ರೀತಿಯ ಸವಾಲು. ಪ್ಯಾಕೆಟ್ನಲ್ಲಿಯೇ ನೀಡಿದರೆ ಉತ್ತಮ. ಅಂಗನವಾಡಿ ಕಾರ್ಯರ್ತೆಯರಿಗೂ ವಿಶೇಷ ಪ್ಯಾಕೇಜ್ ನೀಡಲು, ಬಾಕಿ ಇರುವ ಗೌರವಧನ ಬಿಡುಗಡೆ ಮಾಡಲು ಸರಕಾರವನ್ನು ಒತ್ತಾಯಿಸಿದ್ದೇವೆ.
- ಜಯಲಕ್ಷ್ಮೀ ಬಿ.ಆರ್., ರಾಜ್ಯಾಧ್ಯಕ್ಷೆ,
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್