ಮುಂಗಾರು ಮಳೆಗೆ ಕೊಂಕಣ ರೈಲ್ವೇ ಪೂರ್ಣ ಸಜ್ಜು
Team Udayavani, Jun 7, 2020, 5:00 AM IST
ಉಡುಪಿ: ಮುಂಗಾರು ಮಳೆಗೆ ಕೊಂಕಣ ರೈಲ್ವೇ ಸರ್ವ ಸನ್ನದ್ಧವಾಗಿದೆ. ಕೊಂಕಣ ರೈಲ್ವೇ ಕಾರ್ಪೊರೇಶನ್ ಎಲ್ಲ ಯೋಜಿತ ಸುರಕ್ಷತಾ ಕಾರ್ಯ ಪೂರ್ಣ ಗೊಳಿಸುವ ಮೂಲಕ ಕೊಲಾಡ್ನಿಂದ ಮಂಗಳೂರು ಸಮೀಪದ ತೋಕೂರು ನಿಲ್ದಾಣದ ನಡುವಿನ ಕರಾವಳಿ ಪ್ರದೇಶದಲ್ಲಿ ಮಳೆಗಾಲ ಎದುರಿಸಲು ಸಜ್ಜಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ. ವರ್ಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಸ್ತು, ವೇಗ ನಿಯಂತ್ರಣ
ಮಳೆಗಾಲದಲ್ಲಿ 974 ಸಿಬಂದಿ ಈ ಮಾರ್ಗದಲ್ಲಿ ಗಸ್ತು ತಿರುಗಲಿದ್ದಾರೆ. ಕೆಲವು ಸ್ಥಳಗಳಲ್ಲಿ 24 ಗಂಟೆಗಳ ಕಾಲವೂ ಕಾವಲುಗಾರರನ್ನು ನಿಯೋಜಿಸಲಾಗಿದೆ. ಭಾರೀ ಮಳೆ ಸಂದರ್ಭ ಚಾಲಕರಿಗೆ ದೂರದ ಚಿತ್ರಣ ಸ್ಪಷ್ಟವಾಗಿ ಗೋಚರಿಸದ ಹಿನ್ನೆಲೆಯಲ್ಲಿ ದುರ್ಬಲ ಭೂಭಾಗದಲ್ಲಿ ರೈಲಿನ ವೇಗದ ಮಿತಿಯನ್ನು 40 ಕಿ.ಮೀ. ಇಳಿಸಲಾಗಿದೆ. ಆಪರೇಷನ್ ಥಿಯೇಟರ್, ತುರ್ತು ವೈದ್ಯ ಕೀಯ ನೆರವು ನೀಡುವ ಸ್ವಯಂ ಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್, ಅಪಘಾತ ಪರಿಹಾರ ರೈಲು ರತ್ನಗಿರಿ ಮತ್ತು ವೆರ್ಣದಲ್ಲಿ ಸಿದ್ಧವಾಗಿವೆ.
ನಿಯಂತ್ರಣ ಕಚೇರಿ / ನಿಲ್ದಾಣವನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಸುರಕ್ಷಾ ವಿಭಾಗದ ಎಲ್ಲ ಸಿಬಂದಿಗೆ ಮೊಬೈಲ್ ಒದಗಿಸಲಾಗಿದೆ. ಲೋಕೊ ಪೈಲಟ್ಗಳು ಮತ್ತು ರೈಲುಗಳ ಕಾವಲುಗಾರರಿಗೆ ವಾಕಿಟಾಕಿ ಒದಗಿಸಲಾಗಿದೆ. ಬೇಲಾಪುರ, ರತ್ನಾಗಿರಿ ಮತ್ತು ಮಡಗಾಂವ್ನಲ್ಲಿರುವ ನಿಯಂತ್ರಣ ಕೊಠಡಿಗಳು ಮಳೆಗಾಲದಲ್ಲಿ 24×7 ಕೆಲಸ ಮಾಡುತ್ತಿವೆ ಎಂದರು.
ರೈಲು ಸಂಚಾರದ ಸ್ಥಿತಿಯನ್ನು www.konkanrailway.com ವೆಬ್ಸೈಟ್ ಮೂಲಕ ಅಥವಾ 139ಕ್ಕೆ ಕರೆ ಮಾಡುವ ಮೂಲಕ ಇಲ್ಲವೆ ಕೆಆರ್ಸಿಎಲ್ ಆ್ಯಪ್ ಮೂಲಕ ಪರಿಶೀಲಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್