ಈರುಳ್ಳಿ ವಾಸನೆಗೆ ನಿಲ್ದಾಣಕ್ಕೆ ಹಿಂದಿರುಗಿದ ವಿಮಾನ !
Team Udayavani, Aug 4, 2023, 7:42 AM IST
ತಿರುವನಂತಪುರಂ: ಕೇರಳದ ಕೊಚ್ಚಿಯಿಂದ ಯುಎಇಯ ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಿಮಾನವೊಂದು ಈರುಳ್ಳಿಯ ದುರ್ವಾಸನೆಯಿಂದಾಗಿ ಮತ್ತೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿರುವ ಘಟನೆ ವರದಿಯಾಗಿದೆ! 175 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಸಮಯದೊಳಗೆ ಏನೋ ಸುಟ್ಟಿರುವಂಥ ಕೆಟ್ಟ ವಾಸನೆ ವರದಿಯಾಗಿದೆ.
ಇದರಿಂದ ಪ್ರಯಾಣಿಕರು ಗಾಬರಿಗೊಂಡ ಕಾರಣ ಪೈಲಟ್ ಕೊಚ್ಚಿಗೆ ವಾಪಸಾಗಿದ್ದಾರೆ. ಲ್ಯಾಂಡಿಂಗ್ ಬಳಿಕ ವಿಮಾನ ಪರಿಶೀಲಿಸಿದಾಗ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ, ಬದಲಾಗಿ ಸರಕು ಸರಂಜಾಮು ಭಾಗದಲ್ಲಿದ್ದ ಈರುಳ್ಳಿ, ತರಕಾರಿಗಳಿಂದ ಆ ರೀತಿಯ ವಾಸನೆ ಬಂದಿದೆ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು