ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತ ! ಸದ್ಯಕ್ಕೆ ಬಾರದ ರೈಲುಗಳಿಗೆ ಕಾಯುತ್ತಿರುವವರು!


Team Udayavani, Apr 18, 2020, 6:55 PM IST

ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತ ! ಸದ್ಯಕ್ಕೆ ಬಾರದ ರೈಲುಗಳಿಗೆ ಕಾಯುತ್ತಿರುವವರು!

ಎಷ್ಟೋ ದೂರದ ಪ್ರದೇಶಗಳಿಂದ ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದವರೆಲ್ಲರ ಸದ್ಯದ ಆಸೆ ಒಂದೇ. ಅದು ಊರಿಗೆ ಹೋಗಬೇಕೆಂಬುದು. ಇವರ ನಿತ್ಯಕಾಯುವಿಕೆಗೆ ನಿಲಾªಣಕ್ಕೂ ಬೇಸರ ಮೂಡಿರಬಹುದು…

ನವದೆಹಲಿ: ವಾರಣಾಸಿಯ ಪ್ರಮುಖ ರೈಲು ನಿಲ್ದಾಣ ಬಹು ವಿಸ್ತಾರವಾದ ಕಟ್ಟಡ. ಐದು ಶತಮಾನದಿಂದ ಹಲವಾರು ಬಾರಿ ಇಲ್ಲಿ ರೈಲುಗಳಿಗಾಗಿ ಜನರು ಕಾದಿದ್ದಾರೆ. ಕೆಲವೊಮ್ಮೆ ಬಹಳ ತಾಸುಗಳು, ಇನ್ನು ಕೆಲವೊಮ್ಮೆ ಕೆಲವೇ ನಿಮಿಷಗಳು. ಆದರೆ, ಇಷ್ಟು ದಿನ ಕಾದದ್ದು ಇಲ್ಲವೇ ಇಲ್ಲ. ವಿಪರ್ಯಾಸವೆಂದರೆ ಬಾರದ ರೈಲುಗಳಿಗೆ ಕಾಯಲಾಗುತ್ತಿದೆ.

ಎತ್ತರದ ಛಾವಣಿಯ ಕೋಣೆಯೊಳಗೆ ನೂರಾರು ಮಂದಿ ಪ್ರಯಾಣಿಕರು ಮೂರು ವಾರಗಳಿಂದ ಕಾಯುತ್ತಿದ್ದಾರೆ ಇನ್ನೂ ಬಾರದ ರೈಲುಗಳ ನಿರೀಕ್ಷೆಯಲ್ಲಿ. ಕಟ್ಟಡ ಕಾರ್ಮಿಕರು, ಮಕ್ಕಳೊಂದಿಗೆ ಪೋಷಕರು, ಯಾತ್ರಿಕರು, ವಿದ್ಯಾರ್ಥಿಗಳು-ಹೀಗೆ ಎಲ್ಲ ವರ್ಗದವರೂ ಇಲ್ಲಿದ್ದಾರೆ. ಎಲ್ಲರ ಸಂಕಷ್ಟ ಮತ್ತು ಆಸೆ ಒಂದೇ-ತಮ್ಮ ಊರುಗಳಿಗೆ ಹೇಗಾದರೂ ಮಾಡಿ ತೆರಳಬೇಕಿದೆ.

ಕೋವಿಡ್‌-19 ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಘೋಷಿಸಲಾಯಿತು. ಇದ್ದಕ್ಕಿದ್ದಂತೆ ರೈಲು ಸೇರಿದಂತೆ ಸಾಮೂಹಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಾಗ ರೈಲು ನಿಲ್ದಾಣದಲ್ಲಿದ್ದ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾಯಿತು. ನೂರಾರು ಮೈಲಿ ದೂರದಿಂದ ನಗರಕ್ಕೆ ಬಂದಿದ್ದ ವಲಸಿಗರೂ ಸೇರಿದಂತೆ ಇನ್ನೂ ಯಾವ್ಯಾವುದೋ ಕಾರಣಕ್ಕೆ ಬಂದವರೆಲ್ಲಾ ರೈಲ್ವೆ ನಿಲ್ದಾಣದಲ್ಲೇ ಬಂಧಿಯಾದರು.

ಲಕ್ಷಾಂತರ ಮಂದಿ ಪ್ರಯಾಣಿಕರನ್ನು ನಿಭಾಯಿಸಲು ಒಗ್ಗಿಕೊಂಡಿರುವ ನಿಲ್ದಾಣದ ಸಿಬಂದಿ, ಉಳಿದಿರುವ 50 ಕ್ಕಿಂತ ಕಡಿಮೆ ಪ್ರಯಾಣಿಕರನ್ನು ನೋಡಿಕೊಳ್ಳುವಲ್ಲಿ ನಿರತರಾಗಿ¨ªಾರೆ. ಮೂರು ಹೊತ್ತಿನ ಊಟ, ಬಿಸಿ ಚಹಾ, ಬೆಳಗ್ಗೆ ಯೋಗ ಅಧಿವೇಶನ ಮತ್ತು ಹಿಂದೂ ಮಹಾಕಾವ್ಯಗಳ ರಾತ್ರಿಯ ಪ್ರದರ್ಶನಗಳನ್ನು ಮಾಡಲಾಗುತ್ತದೆ. ಲಾಕ್‌ಡೌನ್‌ ಮಾರ್ಚ್‌ 25 ರಿಂದ ಪ್ರಾರಂಭವಾಗಿ ಮೇ 3 ರವರೆಗೆ ವಿಸ್ತರಿಸಲ್ಪಟ್ಟಿದೆ. ಉದ್ಯೋಗವಿಲ್ಲದೇ ಬದುಕುವ ಅವಕಾಶದ ಕೊರತೆಯ ಭಯದಿಂದ ಕಾರ್ಮಿಕರು ಕಾಲ್ನಡಿಗೆಯಲ್ಲಿ ನಗರಗಳಿಂದ ಹೊರಬಂದಿ¨ªಾರೆ. 1.3 ಬಿಲಿಯನ್‌ ಜನಸಂಖ್ಯೆ ಹೊಂದಿರುವ ಈ ರಾಷ್ಟ್ರದಲ್ಲಿ ಆರ್ಥಿಕತೆ ಸ್ಥಗಿತಗೊಂಡಾಗ ಅನೇಕರು ಹಸಿವಿನಿಂದ ಬಳಲುತ್ತಿರುವುದು ನಿಜ.

ವಾರಣಾಸಿಯ ಮುಖ್ಯ ರೈಲ್ವೇ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರು ದೂರದರ್ಶನದಲ್ಲಿ ಮಹಾಭಾರತ-ರಾಮಾಯಣ ವೀಕ್ಷಿಸುತ್ತಾ ಸಮಯ ನೂಕುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಿಲುಕಿರುವವರಿಗೆ ಸ್ಥಳೀಯ ಅಧಿಕಾರಿಯೊಬ್ಬರು ಸಹಾಯದ ಮುಂದಾಳತ್ವ ವಹಿಸಿದ್ದಾರೆ. ಆದರೆ ಇಲ್ಲಿ ಹಲವು ಕಥೆಗಳಿವೆ.

ಮಹಾರಾಷ್ಟ್ರದ ಕಾರ್ಮಿಕ ರಘು ಉತ್ತಮ್‌ ಶಿಂಧೆ (25) ನಾಲ್ಕು ಮಕ್ಕಳು ಸೇರಿದಂತೆ ಅವರ ಕುಟುಂಬದ 10 ಸದಸ್ಯರೊಂದಿಗೆ ಬಿಹಾರ ರಾಜ್ಯದಲ್ಲಿ ಕೇಬಲ್‌ ಹಾಕಲು ಗ್ರಾಹಕರ ಮನೆಗಳಿಗೆ ತೆರಳುತ್ತಿದ್ದರು. ಅವರ ರೈಲು ಮಧ್ಯರಾತ್ರಿಯಲ್ಲಿ ವಾರಣಾಸಿಯ ಹೊರಗಿನ ನಿಲ್ದಾಣದಲ್ಲಿ ನಿಂತು, ಎಲ್ಲರಿಗೂ ಇಳಿಯುವಂತೆ ಆದೇಶಿಸಲಾಯಿತು. ನಗರದ ರೈಲು ನಿಲ್ದಾಣವನ್ನು ತಲುಪಲು ಶಿಂಧೆ ಮತ್ತು ಅವರ ಕುಟುಂಬ ನಾಲ್ಕು ಗಂಟೆಗಳ ಕಾಲ ನಡೆದು ಮತ್ತೂಂದು ರೈಲು ಹಿಡಿಯುವ ಆಶಯದೊಂದಿಗೆ ಇದ್ದರು.
ಸರಕಾರಿ ವಕೀಲ ನರೇಂದ್ರ ಸಿಂಗ್‌ ಕೆಲಸದ ಪ್ರವಾಸದಿಂದ ಹಿಂದಿರುಗುವಾಗ ವಾರಣಾಸಿಯಲ್ಲಿ ಒಂದು ದಿನ ಸ್ಥಳ ವೀಕ್ಷಣೆಗೆಂದು ನಿಂತರು.

ಪ್ರತಿದಿನ ಬೆಳಗ್ಗೆ, ರೈಲ್ವೆ ಸಿಬಂದಿಯೊಬ್ಬರು ಸಿಕ್ಕಿಬಿದ್ದ ಪ್ರಯಾಣಿಕರಿಗಾಗಿ ಯೋಗ ಅಧಿವೇಶನ ನಡೆಸುತ್ತಾರೆ. ಪ್ರಯಾಣಿಕರು ಯೋಗ, ಅನಂತರ ಬೇಯಿಸಿದ ತರಕಾರಿಗಳು ಮತ್ತು ಕರಿದ ಬ್ರೆಡ್‌ನ‌ ಸರಳ ಉಪಹಾರ, ಸಂಜೆ ಊಟ ಮುಗಿಸುತ್ತಾರೆ. ಲೋಹದ ಬೆಂಚುಗಳ ಮೇಲೆ ಅಥವಾ ನೆಲದ ಮೇಲೆ ತೆಳುವಾದ ರಗ್ಗುಗಳನ್ನು ಹಾಸಿಕೊಂಡು ಮಲಗುತ್ತಾರೆ. ಪ್ರತಿಯೊಬ್ಬರೂ ಸರಿ ಸುಮಾರು ಒಂದೇ ಸಮಯಕ್ಕೆ ಮಲಗುತ್ತಾರೆ, ಏಳೂವುದು ಸಹ. ಸಣ್ಣ ಶಬ್ದಗಳೂ ಪ್ರತಿಧ್ವನಿಸುವ ಗುಹೆಯಲ್ಲಿ ಮೌನವಾಗಿರಲು ಪ್ರಯತ್ನಿಸುತ್ತವೆ.

ಇದು ಒಂದು ರೈಲು ನಿಲ್ದಾಣಗಳ ಕಥೆಯಲ್ಲ; ಹಲವು ಊರುಗಳ ಕಥೆ. ಬಹುತೇಕ ನಗರಗಳಲ್ಲಿ ಇಂಥದ್ದೇ ಕಥೆಗಿಳಿವೆ. ಇನ್ನೇನು ಹೊರಟು ಬಿಡಬೇಕು ಎಂದುಕೊಂಡವರೆಲ್ಲಾ ಈಗ ಸುಮ್ಮನೆ ಕುಳಿತಿದ್ದಾರೆ. ಏನೂ ಮಾಡುವಂತಿಲ್ಲ; ಅಸಹಾಯಕತೆಯನ್ನೇ ಹೊದ್ದುಕೊಂಡು ಮಲಗಬೇಕು.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.