“ಸಮಯ’ದ ಸದ್ಬಳಕೆ ಬಲ್ಲವನೇ ಜಾಣ


Team Udayavani, Jan 30, 2024, 6:00 AM IST

1-saddad

ಎಂದಿನಂತೆ ಕಚೇರಿ ಕೆಲಸಕ್ಕೆ ಹೋಗು ತ್ತಿದ್ದ ಸೋನಾಳಿಗೆ ಬೀದಿಯ ಕೊನೆಯ ಮನೆಯ ಮುಂದೆ ಸಾಕಷ್ಟು ಜನ ಸೇರಿದ್ದು ಕಂಡು ಗಾಬರಿಯಾಯಿತು. ಶ್ವೇತವರ್ಣದ ಸೀರೆಯನ್ನುಟ್ಟ ನಾರಿಯರ ಗುಂಪನ್ನು ಕಂಡ ತತ್‌ಕ್ಷಣ ಆ ಮನೆಯಲ್ಲಿ ಸಾವು ಸಂಭ ವಿಸಿದೆ ಎನ್ನುವುದು ಆಕೆಗೆ ಖಚಿತ ವಾಯಿತು. ಒಂದು ಕ್ಷಣ ಅಲ್ಲೇ ನಿಂತಳು. ಪಾಪ, ಇನ್ನೂ ನಲುವತ್ತರ ಹರೆಯ. ಇಷ್ಟು ಬೇಗ ದೇವರು ಕರೆಸಿ ಕೊಳ್ಳಬಾರದಿತ್ತು…. ನೆರೆದವರೊಬ್ಬರ ಮಾತು ಕೇಳಿ, ಅಯ್ಯೋ…! ಸುಮಂ ಗಲಿ ತೀರಿಕೊಂಡಳೇ…! ಸೋನಾ ಗರ ಬಡಿದವಳಂತೆ ಅಲ್ಲೇ ನಿಂತುಬಿಟ್ಟಳು. ಅನಾರೋಗ್ಯದಿಂದ ಬಳಲುತ್ತಿದ್ದ ಸುಮಂಗಲಿಯನ್ನು ನೋಡಿ, ಮಾತ ನಾಡಿಸಿ ಬರಬೇಕೆಂದು ಒಂದು ವಾರದಿಂದ ಯೋಚಿಸುತ್ತಲೇ ಇದ್ದ ಆಕೆಗೆ ಹೋಗಲು ಪುರುಸೊತ್ತೇ ಆಗಿ ರಲಿಲ್ಲ. ನಾಳೆ ಹೋದರಾಯಿತು.. ನಾಡಿದ್ದು ಹೋದರಾಯಿತು ಎಂದು ಕೊಳ್ಳುತ್ತಿರುವಾಗಲೇ ತಿರುಗಿ ಬಾರದ ಊರಿಗೆ ಸುಮಂಗಲಿ ಪಯಣ ಬೆಳೆಸಿ ಆಗಿತ್ತು. ಹೂ ಗಿಡಗಳಿಗೆ ನೀರುಣಿಸುತ್ತಾ ಹೂ ಚಟ್ಟಿಯಿಂದ ಕಳೆ ಕೀಳುತ್ತಾ ಕಾಲ ಕಳೆಯುತ್ತಿದ್ದ ಸುಮಂಗಲಿ ಕಳೇ ಬರವಾಗಿ ಮಲಗಿ¨ªಾಳೆ… ಛೇ, ತಾನು ನಿಧಾನ ಮಾಡಬಾರದಾಗಿತ್ತು.. ಪಶ್ಚಾ ತ್ತಾಪದಿಂದ ನಲುಗಿ ಹೋದಳು ಸೋನಾ!
ಮದುವೆ ಸಮಾರಂಭವೊಂದರಲ್ಲಿ ಓಡಿ ಆಡುತ್ತಿದ್ದ ಪುಟ್ಟ ಮಕ್ಕಳ ತುಂಟಾಟವನ್ನು ನೋಡುತ್ತಾ ಮಹಿಳೆಯರಿಬ್ಬರು ಮಾತನಾಡಿ ಕೊಳ್ಳುತ್ತಿದ್ದರು. ಮಕ್ಕಳ ಪುಂಡುತನ ನೋಡು ವುದೇ ಕಣ್ಣಿಗೊಂದು ಹಬ್ಬ. ಆದರೆ ನಮ್ಮ ಮಕ್ಕಳು ಈ ಹಂತದಲ್ಲಿ ಇದ್ದಾಗ ನಾವು ಅವರ ತುಂಟಾಟವನ್ನು ಕಂಡು ಆನಂದಿಸಿದ್ದೇ ಕಡಿಮೆ. ಓದಿಸುವ, ಬರೆಯಿಸುವ ಭರದಲ್ಲಿ ಅವರ ಬಾಲ್ಯ ಕಳೆದದ್ದೇ ಗೊತ್ತಾಗಲಿಲ್ಲ. ಮಕ್ಕ ಳಾಟ ನೋಡುತ್ತಾ ಕೂರಲು ಪುರುಸೊತ್ತೇ ಇರುತ್ತಿರಲಿಲ್ಲ.

ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹುಡುಗನ ತಾಯಿಯೊಬ್ಬಳು ಆತನನ್ನು ಮರು ಪರೀಕ್ಷೆಗೆ ಕೂರಿಸುವ ವಿಚಾರವಾಗಿ ಕಾಲೇಜಿನ ಕಚೇರಿಯಲ್ಲಿ ಮಾತನಾಡುತ್ತಾ, ಅವನ ಮಾರ್ಕ್ಸ್ ನೋಡಿ. ಕಾಲೇಜಿಗೆ ಬಂದು ನಮ್ಮ ಜತೆಗೆ ಸ್ವಲ್ಪ ಮಾತನಾಡಿ, ನಮ್ಮ ಜತೆಗೆ ಸಹಕರಿಸಿ.. ಎಂದು ಉಪನ್ಯಾಸಕರು ಪದೇ ಪದೆ ಫೋನ್‌ ಮಾಡಿದಾಗಲೂ ಬರಲು ಪುರುಸೊತ್ತೇ ಆಗಿರಲಿಲ್ಲ… ಈಗ ನೋಡಿದರೆ ಹೀಗೆ ಆಯಿತು. ಪಶ್ಚಾತ್ತಾಪದ ಕಣ್ಣ ಹನಿಗಳು.
“” “ಸಮಯ’ ಅನ್ನೋದು ಒಮ್ಮೆ ಕಳೆದರೆ ಹಿಂದಿರುಗಿ ಪಡೆಯಲಾಗದ ಒಂದು ಅಮೂಲ್ಯ ಆಸ್ತಿ” ಎನ್ನುವ ಆಂಗ್ಲವಾಣಿ ಇದನ್ನೇ ಹೇಳುತ್ತದೆ. ಬಿಟ್ಟ ಬಾಣ, ಆಡಿದ ಮಾತು, ಹರಿದು ಹೋದ ನೀರು, ಕಳೆದು ಹೋದ ಕಾಲ ಇವು ಎಂದಿಗೂ ತಿರುಗಿ ಬರಲಾರವು. ಸಮಯ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದು. ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಕಲೆಗಾರಿಕೆಯ ಮೇಲೆ ನಮ್ಮ ದೈನಂದಿನ ಕೆಲಸ -ಕಾರ್ಯಗಳ ಸಫ‌ಲತೆ-ವಿಫ‌ಲತೆ ನಿಂತಿದೆ.

ಆದ್ಯತೆಗೆ ಅನುಗುಣವಾಗಿ ಸಮಯವನ್ನು ಬಳಸುವ ಜಾಣ್ಮೆಯನ್ನು ಮೈಗೂಡಿಸಿ ಕೊಳ್ಳದಿದ್ದರೆ “ಪುರುಸೊತ್ತಿಲ್ಲ’ ಎನ್ನುವ ನುಡಿಗೇ ಮತ್ತೆ ಮತ್ತೆ ಮುಗಿ ಬೀಳಬೇಕಾ ಗುತ್ತದೆ. ಸಮಯವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ. ಆದರೆ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹೋದರೆ ನಮ್ಮ ಆಲೋಚಿತ ಕೆಲಸ ಕಾರ್ಯಗಳಿಗೆ ಪುರುಸೊತ್ತು ಸಿಕ್ಕೀತು. ಊಟ, ನಿದ್ದೆ, ಮನೋ ರಂಜನೆ ಇತ್ಯಾದಿಗಳಿಗೆ ಸಮಯ ಸಿಗುವ ಹಾಗೆ ಬಾಂಧವ್ಯಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಮಯ ಸಿಗಬೇಕಾದರೆ ದಿನ ದಲ್ಲಿ ಪೂರೈಸಬೇಕಾದ ಕೆಲಸ-ಕಾರ್ಯಗಳ ಬಗ್ಗೆ ನಿಖರವಾದ ನಿಲುವು ಮತ್ತು ಆ ಗುರಿ ತಲುಪಲೇಬೇಕು ಎನ್ನುವ ಛಲವೂ ಇರಬೇಕು. “ಇವತ್ತು ನೀನು ಮಾಡುವ ಕಾರ್ಯಗಳ ಮೇಲೆ ನಾಳಿನ ನಿನ್ನ ಭವಿಷ್ಯ ನಿರ್ಧರಿತವಾಗುತ್ತದೆ’ ಎನ್ನುವ ಮಾತೊಂದಿದೆ. ಶ್ರೇಷ್ಠ ವ್ಯಕ್ತಿಗಳು ಸಮಯದ ನಿರ್ವಹಣೆ ಯನ್ನು ಮಾಡಿದ್ದರಿಂದಲೇ ಶ್ರೇಷ್ಠ ಎನಿಸಲು ಸಾಧ್ಯವಾಯಿತು ಎಂದಿ¨ªಾನೆ ಅಲೆಕ್ಸಾಂಡರ್‌ ಗ್ರಹಾಂಬೆಲ…. ಹಿಡಿದ ಕೆಲಸವನ್ನು ಪೂರ್ಣ ಗೊಳಿಸದೆ ಇನ್ನೊಂದು ಕೆಲಸಕ್ಕೆ ತೊಡಗು ವುದು, ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಸ್ವಯಂ ಶಿಸ್ತಿನ ಅಭಾವ ಇವೆಲ್ಲ ಪುರುಸೊತ್ತಿಲ್ಲ ಎನ್ನುವ ಕಾರಣಕ್ಕೆ ಪೂರಕ ಅಂಶಗಳು. ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ, ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ ಎನ್ನುವ ಎಸ್‌.ವಿ. ಪರಮೇಶ್ವರ ಭಟ್ಟರ ಮಾತಿನಂತೆ ಹಿಡಿದ ಕಾರ್ಯವನ್ನು ನಿಷ್ಠೆ ಮತ್ತು ಬದ್ಧತೆಯಿಂದ ಮಾಡಿ ಮುಗಿ ಸುವ ಏಕಾಗ್ರತೆ ಉಳ್ಳವನಿಗೆ ಇನ್ನೊಂದು ಕೆಲಸಕ್ಕೆ ಸಮಯ ಕೂಡಿ ಬರುತ್ತದೆ. ಯಾವುದು ಮೊದಲು? ಯಾವುದು ಅನಂತರ? ಎನ್ನುವ ನಿಯೋಜಿತ ಸಂಕಲ್ಪ ಹೊಂದಿದವನಿಗೆ ಇಂದಿನ ಕೆಲಸವನ್ನು ನಾಳೆಗೆ ಮುಂದೂಡುವ ಸಂದಿಗ್ಧತೆ ಎದುರಾಗುವುದಿಲ್ಲ. ಯಾವ ಕ್ರಮದಲ್ಲಿ ತನ್ನ ಇಂದಿನ ಕೆಲಸ-ಕಾರ್ಯಗಳು ಸಾಗ ಬೇಕು ಎನ್ನುವ ಯೋಜನೆಯನ್ನು ಹಾಕಿ ಕೊಂಡು ಅದರಂತೆ ನಡೆಯುವವನಿಗೆ ಸಮಯವನ್ನು ಸರಿದೂಗಿಸಿಕೊಂಡು ಹೋಗಲು ಕಷ್ಟ ಎನಿಸುವುದಿಲ್ಲ.

“ಪುರುಸೊತ್ತಿಲ್ಲ’ ಎನ್ನುವ ಪದ ಸೋಮಾರಿಗಳ ಮೊದಲ ಲಕ್ಷಣ. ನಾವಾಗಿ ಬಿಡುವು ಮಾಡಿಕೊಳ್ಳದ ಹೊರತು ನಮಗೆ ಸಮಯ ಸಿಗುವುದಿಲ್ಲ. ಕೆಲವರು ಸಮಯ ಹಂಚಿಕೆಯಲ್ಲಿ ಸಿದ್ಧಹಸ್ತರು. ಅಂಥ ವ್ಯಕ್ತಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಒಂದು ಸೀಮಾರೇಖೆಯನ್ನು ಹಾಕಿ ಕೊಂಡಿರುತ್ತಾರೆ. ಅಪೇಕ್ಷಿತ, ಅನಗತ್ಯ ಎನಿಸುವ ಆಹ್ವಾನ ಇರ ಬಹುದು, ಕೆಲಸ ಕಾರ್ಯಗಳಿರಬಹುದು “ಇಲ್ಲ… ಆಗಲ್ಲ…’ ಎನ್ನುವುದನ್ನು ಅವರು ಕಲಿತಿರುತ್ತಾರೆ. ಡಾ| ಶಿವರಾಮ ಕಾರಂತರು ಕೆಲವೊಂದು ಆಹ್ವಾನಗಳಿಗೆ ಈ ರೀತಿ ಉತ್ತರಿ ಸುತ್ತಿದ್ದರಂತೆ, ನಾನು ಸದಾ ನಡೆದಾಡುವ ವ್ಯಕ್ತಿ. ನನಗೆ ಬರಲು ಬಿಡುವಿಲ್ಲ! ಎಲ್ಲವನ್ನೂ ಎಳೆದು ಹಾಕಿ ಕೊಂಡು ಕೊನೆಗೆ ಮಾಡ ಲೇಬೇಕಾದ ಕಾರ್ಯವನ್ನು ಮಾಡದೆ ಕೊನೆಗೆ ಪಶ್ಚಾತ್ತಾಪ ಪಡುವುದಕ್ಕಿಂತ ಕೆಲವೊಮ್ಮೆ “ನೋ’ ಅನ್ನುವುದನ್ನು ರೂಢಿಸಿಕೊಳ್ಳಬೇಕು.

ಒಟ್ಟಿನಲ್ಲಿ ಸಮಯದ ಸದ್ಬಳಕೆ ಮಾಡಬಲ್ಲವನಿಗೆ “ಪುರುಸೊತ್ತಿಲ್ಲ’ ಎನ್ನುವ ಸಮಸ್ಯೆ ಕಾಡುವುದಿಲ್ಲ. ಆತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯಬೇಕಾದ ಪರಿಸ್ಥಿತಿ ಬಂದೊದಗುವುದಿಲ್ಲ. ಮಾನಸಿಕ ಒತ್ತಡ ದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿ ವಾರ್ಯತೆಯೂ ಅವನಿಗೆ ಎದುರಾ ಗುವುದಿಲ್ಲ.

ಶ್ರೇಷ್ಠ ವ್ಯಕ್ತಿಗಳು ಸಮಯದ ನಿರ್ವಹಣೆಯನ್ನು ಮಾಡಿದ್ದರಿಂದಲೇ ಶ್ರೇಷ್ಠ ಎನಿಸಲು ಸಾಧ್ಯವಾಯಿತು. ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಇನ್ನೊಂದು ಕೆಲಸಕ್ಕೆ ತೊಡಗುವುದು, ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಸ್ವಯಂ ಶಿಸ್ತಿನ ಅಭಾವ ಇವೆಲ್ಲ ಸಮಯದ ನಿರ್ವಹಣೆಯಲ್ಲಿ ಸೋಲಲು ಕಾರಣಗಳು. ಆಡಿದ ಮಾತನ್ನು ಹೇಗೆ ಹಿಂದೆಗೆದುಕೊಳ್ಳಲು ಆಗುವುದಿಲ್ಲವೋ ಹಾಗೇ ಕಳೆದು ಹೋದ ಸಮಯವೂ ಮರಳಿ ಬರಲಾರದು. ಸಮಯದ ಸದ್ಬಳಕೆ ಮಾಡಬಲ್ಲವನಿಗೆ ಮಾನಸಿಕ ಒತ್ತಡದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ, ಆತ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯಬೇಕಾದ
ಪರಿಸ್ಥಿತಿಯೂ ಬಂದೊದಗುವುದಿಲ್ಲ.

ಜಯಲಕ್ಷ್ಮೀ ಕೆ., ಮಡಿಕೇರಿ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.