ಮುಂಬರುವ ವರ್ಷಗಳಲ್ಲಿ ಬಾಲ್ಯದ ಕಾಯಿಲೆ ಆಗಲಿದೆಯೇ ಕೋವಿಡ್?
ಮಕ್ಕಳಿಗೆ ಬರುವ ಸಾಮಾನ್ಯ ಶೀತ-ಜ್ವರವಾಗಿ ಮಾರ್ಪಾಡು
Team Udayavani, Aug 12, 2021, 10:00 PM IST
ಸಾಂದರ್ಭಿಕ ಚಿತ್ರ..
ವಾಷಿಂಗ್ಟನ್/ನವದೆಹಲಿ: ವರ್ಷ ವರ್ಷವೂ ಕೋವಿಡ್ ಹೊಸ ಹೊಸ ಅಲೆಗಳು, ರೂಪಾಂತರಿಗಳು ಜನರನ್ನು ಆತಂಕಕ್ಕೆ ನೂಕಿರುವ ನಡು ವೆಯೇ ಅಮೆರಿಕ ಮತ್ತು ನಾರ್ವೆಯ ವಿಜ್ಞಾನಿಗಳ ತಂಡ ಹೊಸ ಸುದ್ದಿಯೊಂದನ್ನು ನೀಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕೋವಿಡ್ ಸೋಂಕು ಎನ್ನುವುದು ಬಾಲ್ಯದಲ್ಲಿ ಕಂಡು ಬರುವ ಸಾಮಾನ್ಯ ರೋಗವಾಗಿ ಮಾರ್ಪಾಡಾಗಲಿದೆ ಎಂದು ಈ ತಂಡ ಹೇಳಿದೆ.
ಸದ್ಯದಲ್ಲೇ ಲಸಿಕೆಯಿಂದಾಗಿ ಹಾಗೂ ವೈರಸ್ಗೆ ತೆರೆಯಲ್ಪಡುವುದರಿಂದ ವಯಸ್ಕರಲ್ಲಿ ಕೋವಿಡ್ ಪ್ರತಿಕಾಯ ಸೃಷ್ಟಿಯಾಗಲಿದೆ. ಹೀಗಾಗಿ, ವಯಸ್ಕರಿಗೆ ಕೋವಿಡ್ ಭೀತಿಯೂ ಕ್ರಮೇಣ ಕಡಿಮೆಯಾಗಲಿದೆ. ಆಗ ಮಕ್ಕಳು ಮಾತ್ರ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ಆದರೆ ಕೋವಿಡ್ ಸೋಂಕಿನ ಗಂಭೀರತೆಯು ಮಕ್ಕಳಲ್ಲಿ ಸಾಮಾನ್ಯವಾಗಿ ಕಡಿಮೆಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಇದು ಮಕ್ಕಳಿಗೆ ಬರುವ ಸಾಮಾನ್ಯ ಶೀತ-ಜ್ವರದಂತೆ ಆಗಲಿದೆ ಎಂದು ನಾರ್ವೆಯ ಓಸ್ಲೋ ವಿವಿಯ ಒಟ್ಟರ್ ಜಾರ್ನ್ ಸ್ಟಡ್ ಹೇಳಿದ್ದಾರೆ. ಈ ಹಿಂದೆಯೂ ಹಲವು ರೀತಿಯ ಸೋಂಕುಗಳು ಇದೇ ಮಾದರಿಯಲ್ಲಿ ಬದಲಾಗಿವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಮಗಳ ಎದುರೇ ತಂದೆ ಮೇಲೆ ಹಲ್ಲೆ: ಅಪ್ಪನ ರಕ್ಷಣೆಗೆ ಗೋಗರೆದ ಪುಟ್ಟ ಬಾಲಕಿ
ಸಕ್ರಿಯ ಸೋಂಕು ಹೆಚ್ಚಳ:
ದೇಶದಲ್ಲಿ ಬುಧವಾರದಿಂದ ಗುರುವಾರಕ್ಕೆ 41,195 ಮಂದಿಗೆ ಸೋಂಕು ದೃಢ ಪಟ್ಟು, 490 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿ ತರ ಸಂಖ್ಯೆ 3,87,987ಕ್ಕೇರಿಕೆಯಾಗಿದೆ. ಸತತ 5 ದಿನಗಳಿಂದಲೂ ಇದು ಇಳಿಮುಖವಾಗಿತ್ತು. ಇನ್ನು, ಕೇರಳದಲ್ಲಿ ಗುರುವಾರ 21,445 ಪ್ರಕ ರಣಗಳು ಪತ್ತೆಯಾಗಿ, 160 ಸಾವು ಸಂಭವಿಸಿವೆ.
ಬಂಗಾಳದಲ್ಲಿ ನಿರ್ಬಂಧ ಮುಂದುವರಿಕೆ:
ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸಂಬಂಧಿ ನಿರ್ಬಂಧವನ್ನು ಆ.30ರವರೆಗೆ ವಿಸ್ತರಣೆ ಮಾಡಲಾಗಿದೆ. 3ನೇ ಅಲೆಯ ಭೀತಿ ಇರುವ ಕಾರಣ ಸ್ಥಳೀಯ ರೈಲುಗಳ ಸಂಚಾರ ಆರಂಭಿಸಿಲ್ಲ. ರಾತ್ರಿ ಕರ್ಫ್ಯೂ ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ