ಐಪಿಎಲ್‌ 12: ವಿವಾದಗಳ ನಡುವೆಯೂ ಸಂಭ್ರಮದ ತೆರೆ…


Team Udayavani, May 13, 2019, 6:00 AM IST

WARNER

ನೋವು ಮರೆತ ರಾಹುಲ್‌, ಹಾರ್ದಿಕ್‌
ಐಪಿಎಲ್‌ ಆರಂಭಕ್ಕೂ ಮುನ್ನ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌. ರಾಹುಲ್‌ ಭಾರೀ ಅವಮಾನಕ್ಕೆ ಸಿಲುಕಿದ್ದರು. ಟೀವಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ನಿಷೇಧಕ್ಕೊಳಗಾಗಿದ್ದರು. ಐಪಿಎಲ್‌ನಲ್ಲಿ ಇಬ್ಬರೂ ಆಡಿದ ರೀತಿ ಎಲ್ಲವನ್ನೂ ಮರೆಸಿತು. ಪಂಜಾಬ್‌ ಪರ ಆಡಿದ ರಾಹುಲ್‌ 14 ಪಂದ್ಯಗಳಲ್ಲಿ 593 ರನ್‌ ಗಳಿಸಿ ಮೆರೆದರು. ಮುಂಬೈ ಪರ ಆಡಿದ ಹಾರ್ದಿಕ್‌ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಅದ್ಭುತ ಸಾಧನೆ ಮಾಡಿದರು.

ನಿಷೇಧಮುಕ್ತ ವಾರ್ನರ್‌, ಸ್ಮಿತ್‌
ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಕಳೆದ ವರ್ಷ ಚೆಂಡು ವಿರೂಪಗೊಳಿಸಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಐಪಿಎಲ್‌ ಆಡುತ್ತಿರುವಾಗ ಅವರ ನಿಷೇಧವೂ ಮುಗಿಯಿತು. ಇಬ್ಬರೂ ಅದ್ಭುತವಾಗಿ ಆಡಿ ಮತ್ತೆ ಆಸ್ಟ್ರೇಲಿಯ ತಂಡಕ್ಕೆ ವಾಪಸಾದರು.

ಮಿಂಚಿದ
ಕರ್ನಾಟಕದ ತಾರೆಗಳು
ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಸ್ಥಾನ ಸಿಗಲಿಲ್ಲವಾದರೂ ರಾಜ್ಯದ ಕ್ರಿಕೆಟಿಗರ ಬೇರೆ ಬೇರೆ ತಂಡಗಳಲ್ಲಿ ಆಡಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಬಲ ಸಂದೇಶ ರವಾನಿಸಿದರು. ಪಂಜಾಬ್‌ ಪರ ಕೆ.ಎಲ್‌. ರಾಹುಲ್‌ 593, ಮಾಯಾಂಕ್‌ ಅಗರ್ವಾಲ್‌ 332 ರನ್‌ ಗಳಿಸಿದರು. ಮನೀಷ್‌ ಪಾಂಡೆ ಹೈದರಾಬಾದ್‌ ಪರ 344 , ರಾಬಿನ್‌ ಉತ್ತಪ್ಪ ಕೋಲ್ಕತಾ ಪರ 282 ರನ್‌ ಗಳಿಸಿದರು. ರಾಜಸ್ಥಾನ್‌ ಪರ ಬೌಲಿಂಗ್‌ ಮಾಡಿದ ಶ್ರೇಯಸ್‌ ಗೋಪಾಲ್‌ 20 ವಿಕೆಟ್‌ ಪಡೆದು ಐಪಿಎಲ್‌ನ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡರು.

ಐಪಿಎಲ್‌ ಸಂದಿಗ್ಧಗಳು
1 ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೇ ಸ್ಥಾನವಿಲ್ಲದ ಪರಿಸ್ಥಿತಿ. ದೇವದತ್‌ ಪಡಿಕ್ಕಲ್‌ ಎಂಬ ಏಕೈಕ ಆಟಗಾರನನ್ನು ಸೇರಿಸಿಕೊಂಡರೂ ಕೂಟದಲ್ಲಿ ಒಮ್ಮೆಯೂ ಅವರಿಗೆ ಅವಕಾಶ ಸಿಗಲಿಲ್ಲ. ಐಪಿಎಲ್‌ ನಿಯಮಗಳ ಪ್ರಕಾರ ಇದು ಸರಿ. ಆದರೆ ಕರ್ನಾಟಕದ ಜನತೆಯ ಭಾವನೆಗಳು ಇದನ್ನು ಸ್ವೀಕರಿಸಲಿಲ್ಲ.
2 ಈ ಬಾರಿಯಾದರೂ ಬೆಂಗಳೂರು ಕಿರೀಟ ಗೆಲ್ಲುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮತ್ತೆ ಕಳಪೆಯಾಟವಾಡಿ ಲೀಗ್‌ನಲ್ಲೇ ಹೊರಹೋಯಿತು. ತಂಡದಲ್ಲಿ ಬರೀ ದಿಗ್ಗಜರೇ ಇದ್ದರೂ ಯಾವ ಕಾರಣಕ್ಕೆ ಸೋಲುತ್ತಿದ್ದಾರೆ ಎಂಬುದೇ ಇನ್ನೂ ಅರ್ಥವಾಗಿಲ್ಲ.
3 ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ “ಡೆಲ್ಲಿ ಕ್ಯಾಪಿಟಲ್ಸ್‌’ ಎಂದು ಹೆಸರು ಬದಲಾಯಿಸಿಕೊಂಡ ಅನಂತರ ಅದರ ಪ್ರದರ್ಶನವೇನೋ ಬದಲಾಯಿತು. ಲೀಗ್‌ ಹಂತದಲ್ಲಿ ಅಮೋಘವಾಗಿ ಆಡಿ 9 ಪಂದ್ಯ ಗೆದ್ದು, ಚೆನ್ನೈ, ಮುಂಬೈ ಜತೆಗೆ ಸರಿಸಮನಾಯಿತು. ಆದರೆ ಪ್ಲೇ ಆಫ್ನಲ್ಲಿ ಹೀನಾಯವಾಗಿ ಆಡಿ ಮುಗ್ಗರಿಸಿತು.
4ಕೂಟ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ವಿದೇಶೀ ದಿಗ್ಗಜರು ಒಬ್ಬೊಬ್ಬರಾಗಿ ತವರಿಗೆ ಹಿಂದಿರುಗಿದರು. ಅಲ್ಲಿಯವರೆಗೆ ಪ್ರಬಲವಾಗಿದ್ದ ಹೈದರಾಬಾದ್‌, ಡೆಲ್ಲಿ ಇದ್ದಕ್ಕಿದ್ದಂತೆ ಕುಸಿದು ಹೋದವು. ಪ್ರಶಸ್ತಿ ಗೆಲ್ಲಬಲ್ಲ ತಂಡ ಹತಾಶವಾಗಿ ಕೈಚೆಲ್ಲುವುದನ್ನು ಅನಿವಾರ್ಯವಾಗಿ ಅಭಿಮಾನಿಗಳು ಒಪ್ಪಿಕೊಳ್ಳಬೇಕಾಯಿತು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.