ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್ ವಿದಾಯ ಸೂಚನೆಯೇ?
Team Udayavani, Oct 25, 2020, 2:45 PM IST
ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಧೋನಿ ಐಪಿಎಲ್ಗೂ ವಿದಾಯ ಹೇಳುವ ಸೂಚನೆಯೇ ಇದು ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಅ. 19ರಂದು 200ನೇ ಐಪಿಎಲ್ ಪಂದ್ಯವಾಡಿದ ಬಳಿಕ ಧೋನಿ ತಮ್ಮ ಜೆರ್ಸಿಯೊಂದನ್ನು ಜಾಸ್ ಬಟ್ಲರ್ಗೆ ನೀಡಿದ್ದರು. ಗುರುವಾರ ಮುಂಬೈ ವಿರುದ್ಧ 10 ವಿಕೆಟ್ ಸೋಲನುಭವಿಸಿದ ಬಳಿಕ ಪಾಂಡ್ಯ ಸೋದರರಿಗೂ ಜೆರ್ಸಿ ಕೊಟ್ಟಿದ್ದಾರೆ. ಹಾರ್ದಿಕ್ ಮತ್ತು ಕೃಣಾಲ್ ಈ ಜೆರ್ಸಿಯನ್ನು ಪ್ರದರ್ಶಿಸಿ ಸಂಭ್ರಮಿಸುತ್ತಿರುವ ಚಿತ್ರ ವೈರಲ್ ಆಗಿದೆ. ಚೆನ್ನೈ ಇನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಆಗಲೂ ಧೋನಿ ತಮ್ಮ ಜೆರ್ಸಿಯನ್ನು ಎದುರಾಳಿ ಆಟಗಾರರಿಗೆ ನೀಡಬಹುದು.
ಐಪಿಎಲ್ ವೈಫಲ್ಯ
ಆ. 15ರಂದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಧೋನಿ ವಿದಾಯ ಹೇಳಿದ್ದರು. ಈ ಕಾರಣಕ್ಕಾಗಿ ಐಪಿಎಲ್ನ ಕೇಂದ್ರಬಿಂದುವಾಗಿದ್ದರು. ಆದರೆ ಈ ಕೂಟದಲ್ಲಿ ಚೆನ್ನೈ ಹಿಂದೆಂದೂ ಕಂಡರಿಯದ ಆತಂಕಕ್ಕೆ ಸಿಲುಕಿದೆ. ಕೂಟದಿಂದ ನಿರ್ಗಮಿಸಲಿರುವ ಮೊದಲ ತಂಡವೆನಿಸುವ ಎಲ್ಲ ಸಾಧ್ಯತೆ ಇದೆ. ಧೋನಿ ನಾಯಕತ್ವ, ಬ್ಯಾಟಿಂಗ್, ತಂಡದ ಆಯ್ಕೆ. ಯಾವುದೂ ಕ್ಲಿಕ್ ಆಗಿಲ್ಲ. ಬಹುಶಃ ಐಪಿಎಲ್ ವಿದಾಯಕ್ಕೆ ಇದು ಸೂಕ್ತ ಸಮಯ ಎಂದು ಅವರು ಭಾವಿಸಿರಬಹುದು. ಇದಕ್ಕೆ “ಜೆರ್ಸಿ ವಿತರಣೆ’ ಕೂಡ ಪುಷ್ಟಿ ನೀಡುತ್ತಿದೆ.
ಇದನ್ನೂ ಓದಿ:ಪ್ಲೇ ಆಫ್ ಹೊಸ್ತಿಲಲ್ಲಿ ಕೊಹ್ಲಿ ಹುಡುಗರು, ನಿರ್ಗಮನದ ಬಾಗಿಲಲ್ಲಿ ಚೆನ್ನೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್