ಸ್ತ್ರೀತ್ವ ಎಂದರೆ ಅರಳುವುದು, ಕೊನರುವುದು, ಜೀವಿಸುವುದು


Team Udayavani, Dec 1, 2020, 5:30 AM IST

ಸ್ತ್ರೀತ್ವ ಎಂದರೆ ಅರಳುವುದು, ಕೊನರುವುದು, ಜೀವಿಸುವುದು

ಸಾಂದರ್ಭಿಕ ಚಿತ್ರ

ಮನುಷ್ಯ ಕುಲ ಬಹಳ ದೀರ್ಘ‌ ಕಾಲದ ವರೆಗೆ ಪುರುಷತ್ವಕ್ಕೆ ಪ್ರಾಧಾನ್ಯ ನೀಡುತ್ತ ಬಂದಿದೆ. ಅದು ಏಕೆ ಎಂದರೆ ಇಷ್ಟು ಸಮಯ ಬದುಕಿ ಉಳಿಯುವುದು ಬಹಳ ದೊಡ್ಡ ಸವಾಲಾಗಿತ್ತು. ಆದಿಮ ಮನುಷ್ಯ ನೆಲೆ ಯಿಲ್ಲದೆ ಅಲೆದಾಡುತ್ತಿದ್ದಾಗ, ಅರಣ್ಯವಾಸಿ ಯಾಗಿದ್ದಾಗ, ನಾಗರಿಕತೆ ಪೂರ್ಣವಾಗಿ ಅರಳದೆ ಇದ್ದಾಗ ಇಂತಹ ಸ್ಥಿತಿ ಇರುತ್ತದೆ. ಆ ಕಾಲಘಟ್ಟದಲ್ಲಿ ಬದುಕಿ ಉಳಿಯುವುದಕ್ಕೆ ಎಲ್ಲಕ್ಕಿಂತ ಹೆಚ್ಚು ಮಹತ್ವ.

ಸಮಾಜಗಳು, ಸಮುದಾಯಗಳು ಬದುಕಿ ಉಳಿಯುವ ಹೋರಾಟಕ್ಕಿಂತ ಒಂದು ಹೆಜ್ಜೆ ಮೇಲಕ್ಕೆ ತಲುಪಿ, ಒಂದು ನಿರ್ದಿಷ್ಟ ಮಟ್ಟದ ಸ್ಥಿರ ಸಂಸ್ಕೃತಿ, ನಾಗರಿಕತೆಯಾಗಿ ವಿಕಸನಗೊಂಡ ಬಳಿಕ ಅಲ್ಲಿ ಸ್ತ್ರೀತ್ವ ಅರಳಬೇಕು. ಇವತ್ತು ನಾವು ಅಂತಹ ಸ್ಥಿತಿಯನ್ನು ತಲುಪಿದ್ದೇವೆ. ದುರದೃಷ್ಟ ಎಂದರೆ ಆರ್ಥಿಕತೆಯು ಇಂದು ನಿರ್ಣಾಯಕ ಶಕ್ತಿಯಾಗಿ ಬಿಟ್ಟಿದೆ.

ಆರ್ಥಿಕತೆ, ಹಣ, ವಿತ್ತವು ನಿರ್ಣಾಯಕ ಶಕ್ತಿ ಎನಿಸಿಕೊಂಡಾಗ ಅದು ಮತ್ತೆ ಎಲ್ಲವನ್ನೂ ಬದುಕಿ ಉಳಿಯುವ ಹೋರಾಟದ ಹಂತಕ್ಕೆ ತಂದು ನಿಲ್ಲಿಸುತ್ತದೆ. ವೇಷ ಬದಲಿಸಿ ದಂತೆ ಕಾಣಿಸಬಹುದು, ಆದರೆ ನಿಜವಾಗಿಯೂ ಅದು ಬದುಕುಳಿಯುವ ತಿಣುಕಾಟವೇ. ಅಂದರೆ ಕಾಡಿನ ನ್ಯಾಯ – ಯಾರು ಬಲಶಾಲಿ ಆಗಿರುತ್ತಾ ನೆಯೋ ಅವನು ಬದುಕುತ್ತಾನೆ. ಆಗ ಮತ್ತೆ ಪುರುಷತ್ವವೇ ಮುನ್ನೆಲೆಯಲ್ಲಿ ನಿಲ್ಲುತ್ತದೆ.

ನಾಗರಿಕತೆ, ಸಂಸ್ಕೃತಿ, ಬದುಕು ಒಂದು ಬಗೆಯ ಸ್ಥಿರ, ವಿಶ್ರಾಂತಿಯ ಸ್ಥಿತಿಯಲ್ಲಿದ್ದಾಗ ಮಾತ್ರ ಸ್ತ್ರೀತ್ವ ಅರಳಲು ಸಾಧ್ಯ. ಸ್ತ್ರೀತ್ವ ಚಿಗುರೊಡೆದಿಲ್ಲ ಎಂದಾದರೆ ನಮ್ಮ ಬದುಕಿ ನಲ್ಲಿ ಎಲ್ಲವೂ ಇದ್ದು ಏನೂ ಇಲ್ಲದ ಸ್ಥಿತಿಗೆ ಸಮಾನ. ಸಮಾಜದಲ್ಲಿ ಸ್ತ್ರೀತ್ವವನ್ನು ಪ್ರಜ್ಞಾ ಪೂರ್ವಕವಾಗಿ ಪೋಷಿಸಬೇಕು, ಬೆಳೆಸ ಬೇಕು. ಇಲ್ಲವಾದರೆ ಮರ ಪೂರ್ತಿಯಾಗಿ ಬೆಳೆದರೂ ಹೂವು, ಹಣ್ಣು ಬಿಡದ ಸ್ಥಿತಿ. ಅದು ಅರ್ಧ ಬದುಕನ್ನು ಬದುಕಿದಂತೆ.

ಇಲ್ಲಿ ಪುರುಷತ್ವ – ಸ್ತ್ರೀತ್ವ ಎಂದರೆ ಹೆಣ್ಣು – ಗಂಡು ಎಂದು ಅರ್ಥವಲ್ಲ. ಸ್ತ್ರೀತ್ವ ಎಂಬುದು ಮಹಿಳೆಯಂತೆ ಪುರುಷನಲ್ಲೂ ಇರಬಹುದು. ಅದೊಂದು ನಿರ್ದಿಷ್ಟ ಗುಣಸ್ವಭಾವ. ಪುರುಷತ್ವ ಎಂಬುದೂ ಒಂದು ಗುಣಸ್ವಭಾವ. ಈ ಎರಡೂ ಸಮತೋಲಿತವಾಗಿ ಇದ್ದರೆ ಮಾತ್ರ ಪೂರ್ಣ ಜೀವನ ನಡೆಸಬಹುದು.

ವಿತ್ತವೇ ಚಾಲನ ಶಕ್ತಿಯಾಗಿರುವಾಗ ಮಹಿಳೆಯೂ ಸ್ತ್ರೀತ್ವವನ್ನು ತೊರೆಯಬೇಕಾದ ಸಂದರ್ಭ ಎದುರಾಗುವ ಅಪಾಯವಿದೆ. ಬದುಕುಳಿಯುವುದು ಈಗ ಬೇರೆ ಬೇರೆ ರೂಪ, ಆಯಾಮಗಳಲ್ಲಿ ಮುನ್ನೆಲೆಯಲ್ಲಿದೆ. ಇವತ್ತು ಈ “ಬದುಕುಳಿಯುವುದು’ ಎಂದರೆ ಮರ್ಸಿಡಿಸ್‌ ಕಾರು, ಕೆಜಿಗಟ್ಟಲೆ ಚಿನ್ನಾಭರಣ… ಇಂತಹ ರೂಪಗಳಲ್ಲಿದೆ. ಇದು ಮುಂದುವರಿದರೆ ಸ್ತ್ರೀತ್ವಕ್ಕೆ ಸಮಾಜದಲ್ಲಿ ನೆಲೆಯಿಲ್ಲದಾಗುತ್ತದೆ.

ಸ್ತ್ರೀತ್ವ ಮುಖ್ಯ ಗುಣಸ್ವಭಾವ, ನಮ್ಮಲ್ಲಿ ಬೆಳೆದುಬರಬೇಕು ಎಂಬುದನ್ನು ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಮೂಡಿಸಬೇಕಿದೆ. ಮಕ್ಕಳು ವಿಜ್ಞಾನ, ತಂತ್ರ ಜ್ಞಾನ, ಗಣಿತಗಳಂತೆ ಸಂಗೀತ, ಕಲೆ, ತಣ್ತೀಜ್ಞಾನ, ಸಾಹಿತ್ಯಗಳಲ್ಲೂ ಅಭಿರುಚಿ ಬೆಳೆಸಿಕೊಳ್ಳಬೇಕು. ಇದಾಗದಿದ್ದರೆ ದೈಹಿಕವಾಗಿ ನಾರಿಯರಾಗಿರಬಹುದು, ಆದರೆ ಸ್ತ್ರೀತ್ವ ಇರಲಾರದು.

ಪುರುಷತ್ವ ಬೇರು ಇದ್ದಂತೆ, ಸ್ತ್ರೀತ್ವ ಹೂವು- ಹಣ್ಣುಗಳಂತೆ. ಬೇರಿನ ಅಸ್ತಿತ್ವದ ಉದ್ದೇಶ ಮರದಲ್ಲಿ ಹೂವು-ಹಣ್ಣುಗಳನ್ನು ಅರಳಿಸು ವುದು. ಅದಾಗದಿದ್ದರೆ ಬೇರು ಇದ್ದೂ ವ್ಯರ್ಥ. ಸ್ತ್ರೀತ್ವ ಅರಳದ ಸಮಾಜದ ಸ್ಥಿತಿ ಹೀಗೆ.

ನಾವು ಗಂಡಾಗಿರಬಹುದು, ಹೆಣ್ಣಾಗಿರ ಬಹುದು; ಸ್ತ್ರೀತ್ವವು ಕೊನರದೆ ಇದ್ದರೆ ಬದುಕಿನ ಅನೇಕ ನವಿರು ಸೂಕ್ಷ್ಮಗಳು ನಮ್ಮ ಅನುಭವಕ್ಕೆ ಸಿಗಲಾರವು. ಬದುಕಿಡೀ ಬದುಕುಳಿಯುವ ಹೋರಾಟವಾದೀತು. ಪುರುಷತ್ವವು ಗೆಲ್ಲುವುದರ ಬಗ್ಗೆ ಚಿಂತಿಸುತ್ತದೆ. ಆದರೆ ಸ್ತ್ರೀತ್ವವು ಅರಳುವುದು, ವಿಶ್ರಮಿಸು ವುದು, ಲವಲವಿಕೆಯಿಂದಿರುವುದು ಮತ್ತು ಜೀವಿಸುವುದು. ಈ ಪರಿವರ್ತನೆ ಈಗಿಂದೀಗಲೇ ಆಗಬೇಕು.

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.