ಗುರುವಿನ ಕೈಹಿಡಿದು ನಮ್ಮ ಮನೆಗೆ ಮರಳುವುದು


Team Udayavani, Dec 30, 2020, 5:42 AM IST

ಗುರುವಿನ ಕೈಹಿಡಿದು ನಮ್ಮ ಮನೆಗೆ ಮರಳುವುದು

ಸಾಂದರ್ಭಿಕ ಚಿತ್ರ

ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ. ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ.

ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿ ಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.

ಗುರು ನಮಗೆ ಏನನ್ನೂ ನೀಡುವುದಿಲ್ಲ. ನಮ್ಮಲ್ಲಿ ಇದ್ದರೂ “ಇಲ್ಲ’ ಎಂದು ನಾವು ತಿಳಿದುಕೊಳ್ಳುವ ಕೆಲವಂಶಗಳ ಬಗ್ಗೆ ಗುರು ನಮ್ಮನ್ನು ಜಾಗೃತಗೊಳಿಸುತ್ತಾನೆ. ಗುರುವಿನ ಕೆಲಸ ನಮ್ಮನ್ನು ಮರಳಿ ನಮ್ಮದೇ ಮನೆಗೆ ಪರಿಚಯಿಸುವುದು, ಕರೆತರುವುದು; ಅದೂ ನಾವು ಎಂದೂ ಬಿಟ್ಟುಹೋಗಿರದ ನಮ್ಮದೇ ಮನೆಗೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.