ಸುಂದರ ಬದುಕು ಮತ್ತು ಮಧುರ ಕಂಪಿನ ಹೂಗಿಡ


Team Udayavani, Sep 16, 2020, 6:10 AM IST

ಸುಂದರ ಬದುಕು ಮತ್ತು ಮಧುರ ಕಂಪಿನ ಹೂಗಿಡ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೆಲವರು ಒಳ್ಳೆಯದಕ್ಕಾಗಿ ಅದೃಷ್ಟವನ್ನು ಕಾಯುತ್ತಿರುತ್ತಾರೆ. ಯಾವುದೋ ಒಂದು ದಿನ, ಒಂದು ಘಳಿಗೆ, ವಾರ, ವರ್ಷದ ಅನಂತರ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿರುತ್ತಾರೆ.

ಒಳ್ಳೆಯದನ್ನು ತರುತ್ತದೆ ಎಂದು ನಂಬಿ ಏನೇನನ್ನೋ ಧರಿಸುತ್ತಾರೆ, ಮನೆಯಲ್ಲಿ ತಂದಿಡುತ್ತಾರೆ. ಲಕ್ಕಿ ನಂಬರ್‌, ಲಕ್ಕಿ ಶರಟು, ಅದೃಷ್ಟದ ವಾಹನ… ಹೀಗೆ ನಂಬಿ ಅದೃಷ್ಟಕ್ಕಾಗಿ ಹುಡುಕಾಡುವ, ಕಾಯುವ ಪಟ್ಟಿ ಬೆಳೆಯುತ್ತದೆ.

ಅದೃಷ್ಟ ಉಂಟಾಗಲಿ ಎಂದು ಕಾಯುವ ಈ ಪ್ರಕ್ರಿಯೆಯಲ್ಲಿ ಮನುಷ್ಯ ತಾನಾಗಿ ಸೃಷ್ಟಿಸಬಹುದಾಗಿದ್ದ ಒಳ್ಳೆಯದು ಕಳೆದು ಹೋಗುವ ಸಾಧ್ಯತೆಯಿದೆ ಎನ್ನುತ್ತಾರೆ ಸದ್ಗುರು. ಅದೃಷ್ಟ ಸಂಭವಿಸುವುದಿಲ್ಲ, ನಮ್ಮ ಪ್ರಯತ್ನದಿಂದ ಒಳ್ಳೆಯ ಜೀವನವನ್ನು ನಾವೇ ಸಾಧಿಸಬಹುದು. ಸದ್ಗುರು ಜಗ್ಗಿಯವರ ಪ್ರತಿಪಾದನೆಯಂತೆ ಬದುಕಿನ ಎಲ್ಲ ಆಯಾಮಗಳಲ್ಲಿ, ಮಗ್ಗುಲುಗಳಲ್ಲಿ ಕೂಡ ಶ್ರೇಷ್ಠತೆಯನ್ನು ಉಂಟುಮಾಡುವುದು ನಮ್ಮ ಕೈಯಲ್ಲಿಯೇ ಇದೆ.

ಅಗೋಚರ ಶಕ್ತಿಯೊಂದು ಉನ್ನತವಾದ ದ್ದನ್ನು ರಚಿಸಿ ನಮ್ಮ ಕೈಯಲ್ಲಿಡುತ್ತದೆ ಎಂದು ಕಾಯುತ್ತ ಕುಳಿತರೆ ನಾವು ಇದ್ದಲ್ಲೇ ಇರಬಹುದು. ನಮ್ಮ ಶಾಂತಿ – ಅಶಾಂತಿ ನಮ್ಮ ಕೈಯಲ್ಲೇ ಇದೆ; ನಮ್ಮ ಸೌಖ್ಯ- ಅಸೌಖ್ಯ, ನಮ್ಮ ಸುಃಖ – ದುಃಖ, ನಮ್ಮ ಒಳಿತು- ಕೆಡುಕು ಇರುವುದು ನಮ್ಮ ಕೈಯಲ್ಲೇ.

ಅದೃಷ್ಟಕ್ಕಾಗಿ ಕಾಯುವುದು ಎಂದರೆ ನಮ್ಮ ಸಾಮರ್ಥ್ಯ, ನಮ್ಮ ಶಕ್ತಿ, ಸಂಪನ್ಮೂಲಗಳಲ್ಲಿ ನಾವು ವಿಶ್ವಾಸ ಹೊಂದಿಲ್ಲ ಎಂದೂ ಅರ್ಥವಾಗುತ್ತದೆ. ನಮ್ಮ ಶಕ್ತಿ ಸಾಮರ್ಥ್ಯ, ಶ್ರಮವನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಿದರೆ ನಮಗೆ ತಕ್ಕುದಾದ ಉತ್ತಮ ಪರಿಸರ, ಉತ್ತಮ ಬದುಕು, ಉದ್ಯೋಗ ಎಲ್ಲವನ್ನೂ ನಾವೇ ನಿರ್ಮಿಸಿಕೊಳ್ಳಬಲ್ಲೆವು. ಇದಕ್ಕೆ ತದ್ವಿರುದ್ಧವಾದದ್ದು ಅದೃಷ್ಟವನ್ನು ಅವಲಂಬಿಸುವುದು.

ಅತಿಶಯ ಎಂಬಂತಹ ಒಂದು ಕಥೆಯಿದೆ. ಬಸ್‌ ನಿಲ್ದಾಣದಲ್ಲಿ ಹ್ಯಾಪು ಮೋರೆ ಹಾಕಿಕೊಂಡಿದ್ದ ಒಬ್ಬನನ್ನು ಇನ್ನೊಬ್ಬ ಕೇಳಿದನಂತೆ, “ಏನಾಯಿತು?’ ಆತ ಹೇಳಿದ, “ನನ್ನ ಮೊದಲನೇ ಹೆಂಡತಿ ಸತ್ತುಹೋದಳು. ಎರಡನೇ ಪತ್ನಿ ಓಡಿಹೋಗಿದ್ದಾಳೆ. ಮಗು ಅಪರಾಧ ಮಾಡಿ ಜೈಲುಪಾಲಾಗಿದ್ದಾನೆ. ಮಗಳಿಗೆ ತೀವ್ರ ಅನಾರೋಗ್ಯವಿದೆ. ಆಸ್ತಿಪಾಸ್ತಿ ಪಾಲಾಗಿ ನನಗೇನೂ ಉಳಿದಿಲ್ಲ…’

ಇನ್ನೊಬ್ಟಾತ ಹೇಳಿದ, “ಅಯ್ಯೋ ಎಂಥ ದುರದೃಷ್ಟ! ಅಂದಹಾಗೆ ನಿನ್ನ ಉದ್ಯೋಗವೇನು?’ ಮೊದಲನೆಯಾತ ಹೇಳಿದ, ‘ಅದೃಷ್ಟದ ಹರಳುಗಳನ್ನು ಮಾರುವುದು…’

ಇವತ್ತಿನ ದಿನದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಏನೇನು ಅನುಭವಿಸುತ್ತೇವೆ ಅನ್ನುವುದು ಖಂಡಿತವಾಗಿಯೂ ನಮ್ಮದೇ. ನಮ್ಮ ಹೆಂಡತಿ, ಮಕ್ಕಳು, ಸುತ್ತಮುತ್ತಲಿನವರ ಜತೆಗೆ ಎಷ್ಟು ಘರ್ಷಣೆ ನಡೆಸುತ್ತೇವೆ, ಎಷ್ಟು ಪ್ರೀತಿ ವಾತ್ಸಲ್ಯಗಳಿಂದ ನಡೆದು ಕೊಳ್ಳುತ್ತೇವೆ ಎಂಬುದು ನಮ್ಮೊಳಗೆಯೇ ಇರು ವಂಥದ್ದು. ನಮ್ಮ ಪರಿಸರಕ್ಕೆ ನಾವು ಸ್ಪಂದಿಸುವ ಸೂಕ್ಷ್ಮತೆ, ವಿವೇಚನೆ, ಬುದ್ಧಿವಂತಿಕೆಗಳನ್ನು ಆಧರಿಸಿರುತ್ತದೆ. ಜಗಳವಾದರೆ ಅದು ದುರಾದೃಷ್ಟದಿಂದ ಆದದ್ದಲ್ಲ, ನಕ್ಕು ನಲಿದರೆ ಅದಕ್ಕೆ ಅದೃಷ್ಟ ಕಾರಣವಲ್ಲ.

ಒಂದೆಡೆ ಸುಮಧುರ ಕಂಪಿನ ಹೂವು ಗಳುಳ್ಳ ಗಿಡ, ಇನ್ನೊಂದೆಡೆ ಮುಳ್ಳುಗಿಡ ಇದೆ ಎಂದುಕೊಳ್ಳಿ. ಚಿಟ್ಟೆಗಳು, ದುಂಬಿಗಳು, ಕೊನೆಗೆ ನಾವು ಕೂಡ ಮುಖ ಮಾಡುವುದು ಸುವಾಸನೆಯ ಹೂಗಿಡದ ಕಡೆಗೆ ಅಲ್ಲವೆ? ನಮ್ಮ ಜೀವನ ಕೂಡ ಹಾಗೆಯೇ; ಕೆಲವು ಉತ್ಕೃಷ್ಟ ಗುಣಗಳು, ಅಂಶಗಳು ನಮ್ಮಲ್ಲಿದ್ದರೆ ಎಲ್ಲರೂ ನಮ್ಮತ್ತ ಆಕರ್ಷಿತರಾಗುತ್ತಾರೆ. ಬದುಕನ್ನು ಸುಮಧುರ ಹೂವುಗಳ ಗಿಡವಾಗಿಸುವ ಸಾಧ್ಯತೆಯತ್ತ ಮುಖ ಮಾಡೋಣ…

(ಸಂಗ್ರಹ)

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.