ನಾನಾ ವಿಧಾನ, ಸತ್ಯ ದರ್ಶನ


Team Udayavani, Feb 4, 2021, 6:05 AM IST

Nana Method, Truth Darshan

ಭಾರತದಂತೆ ಅಧ್ಯಾತ್ಮವು ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಇನ್ನೊಂದು ನಾಡು ಇಲ್ಲ. ನಮ್ಮ ನಿಮ್ಮ ಹಾಗೆ ಇಲ್ಲಿನ ಪ್ರತಿಯೊಬ್ಬನೂ ತನ್ನದೇ ಆದ ಆಧ್ಯಾತ್ಮಿಕ ಒಳನೋಟ, ಚಿಂತನೆ ಗಳನ್ನು ಹೊಂದಿದವನೇ ಆಗಿರುತ್ತಾನೆ. ಇಲ್ಲಿನ ಯೋಗ – ಅಧ್ಯಾತ್ಮ ಸಾಧಕರ ಪರಂಪರೆ ಎಂಬುದು ಕೋಟ್ಯಂತರ ನಕ್ಷತ್ರಗಳು ಬೆಳಗುವ ತಾರಾಪಥ ಇದ್ದ ಹಾಗೆ. ಈ ಸಾಧಕರು, ಗುರುಗಳು ತಮ್ಮ ಶಿಷ್ಯರನ್ನು ಜ್ಞಾನೋದಯದ ಮುನ್ನಡೆ ಸುವ ನವೀನ ಮಾರ್ಗಗಳನ್ನು ಅನು ಸರಿಸುತ್ತಾರೆ. ಪ್ರತಿ ಯೊಬ್ಬರ ವಿಧಾನವೂ ವಿಶಿಷ್ಟ, ವಿನೂತನ.

ವಾಸ್ತವದಲ್ಲಿ ಅಧ್ಯಾತ್ಮ, ಯೌಗಿಕ ಪ್ರಕ್ರಿಯೆ ಎನ್ನು ವುದು ತಾನು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು. ಇದನ್ನು ಹೊಳೆಯಿಸು ವುದಕ್ಕೆ ಪ್ರತೀ ಗುರುವೂ ಅನುಸರಿಸಿದ ಮಾರ್ಗ ವಿಭಿನ್ನ, ಅನೂಹ್ಯ. ಸಾವಿರಾರು ವರ್ಷಗಳ ಹಿಂದೆ ರಿಭು ಎಂಬೊಬ್ಬ ಮಹರ್ಷಿ ಇದ್ದರು. ಅವರಲ್ಲಿ ಅನೇಕ ಶಿಷ್ಯರು ವಿದ್ಯಾಭ್ಯಾಸ ಮಾಡು ತ್ತಿದ್ದರೂ ನಿಧಗ ಎಂಬೊಬ್ಬ ಶಿಷ್ಯನ ಮೇಲೆ ಅವರಿಗೆ ಅಪರಿಮಿತ ಪ್ರೀತಿ, ಶ್ರದ್ಧೆ ಇತ್ತು. ನಿಧಗ ಉಳಿದ ಶಿಷ್ಯರಷ್ಟು ಬುದ್ಧಿವಂತನೂ ಅಲ್ಲ, ವಿದ್ಯೆಯ ಕಡೆಗೆ ಆಸಕ್ತನೂ ಆಗಿರಲಿಲ್ಲ. ನಿಜ ಹೇಳಬೇಕೆಂದರೆ, ಗುರುಕುಲದಿಂದ ಯಾವತ್ತು ಪಾರಾ ದೇನು ಎಂದು ಕನಸು ಕಟ್ಟುತ್ತಿದ್ದವ ಆತ. ಆದರೂ ರಿಭು ಮಹರ್ಷಿಗಳಿಗೆ ಆತ ನೆಂದರೆ ವಿಶೇಷ ಒಲುಮೆ. ಇದರಿಂದ ಇತರ ಜ್ಞಾನಾರ್ಥಿಗಳಿಗೆ ನಿಧಗನ ಬಗ್ಗೆ ಅಸೂಯೆ ಉಂಟಾಗಿತ್ತು. ಅದು ಸಹಜ. “ಈತನ ಬಗ್ಗೆ ಗುರುಗಳಿಗೇಕೆ ಇಷ್ಟು ಆಸ್ಥೆ’ ಎಂಬುದು ಉಳಿದ ಶಿಷ್ಯರ ಪ್ರಶ್ನೆ.

ಸಾಮಾನ್ಯವಾಗಿ ರಿಭುವಿನಂತಹ ಮಹರ್ಷಿಗಳು, ಸಾಧಕರು ತಮ್ಮ ಶಿಷ್ಯರು ಇಂದು ಹೇಗಿದ್ದಾರೆ ಎಂಬುದರ ಆಧಾರ ದಲ್ಲಿ ಅವರನ್ನು ಪರಿಗ್ರಹಿಸುವುದಿಲ್ಲ. ಅವರ ಭವಿಷ್ಯದ ಸಾಮರ್ಥ್ಯವೇನು, ನಾಳೆ ಅವರು ಏನಾಗಬಲ್ಲವರು ಎಂಬುದನ್ನು ಮುಂಗಂಡು ಅವರನ್ನು ಮುನ್ನಡೆಸುತ್ತಾರೆ.

ಒಂದು ದಿನ ಇದ್ದಕ್ಕಿದ್ದಂತೆ ನಿಧಗ ಗುರುಕುಲದಿಂದ ಮಾಯವಾದ. ವಿದ್ಯೆಯ ಸಹವಾಸ ಸಾಕು ಎನ್ನುವುದು ಅವನ ನಿಲುವಾಗಿತ್ತು. ಆದರೆ ರಿಭು ಮಹರ್ಷಿಗಳು ಅವನನ್ನು ಬಿಡಲೊಲ್ಲರು. ಅವನು ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿದರು. ಆ ಬಳಿಕ ಮಾರು ವೇಷದಲ್ಲಿ ಅವನನ್ನು ಸಂಧಿಸಿ ಉಪಾಯ ವಾಗಿ ಹೇಳಿಕೊಡತೊಡಗಿದರು.
ಒಂದು ದಿನ ರಿಭು ಮಹರ್ಷಿ ವೃದ್ಧ ಹಳ್ಳಿಗನ ವೇಷದಲ್ಲಿ ನಿಧಗನನ್ನು ಸಂಧಿಸಿ ದರು. ಆ ಹೊತ್ತಿಗೆ ರಾಜನ ಮೆರವಣಿಗೆ ಆ ದಾರಿಯಾಗಿ ಸಾಗುತ್ತಿತ್ತು. ನಿಧಗ ತದೇಕ ಚಿತ್ತದಿಂದ ಅದನ್ನು ನೋಡುತ್ತಿದ್ದ.

“ನೀನು ನೋಡು ತ್ತಿರುವುದು ಏನನ್ನು?’ ಎಂದು ಮಾರು ವೇಷಧಾರಿ ರಿಭು ಪ್ರಶ್ನಿಸಿದರು. ನಿಧಗನಿಗೆ ಕೊಂಚ ಕಿರಿಕಿರಿ ಯಾಯಿತು. ನೂರಾರು ಮಂದಿ ಮೆರವಣಿಗೆಯನ್ನು ನೋಡು ತ್ತಿದ್ದಾರೆ, ಈತನಿಗೆ ಅಷ್ಟೂ ತಿಳಿಯುವು ದಿಲ್ಲವೇ ಎಂದುಕೊಂಡು, “ದೊರೆಯ ಮೆರವಣಿಗೆಯನ್ನು’ ಎಂದ.

“ದೊರೆ ಎಲ್ಲಿದ್ದಾನೆ?’ ರಿಭುವಿನ ಮರುಪ್ರಶ್ನೆ. ನಿಧಗ ಉತ್ತರಿಸಿದ, “ಕಾಣು ವುದಿಲ್ಲವೇ, ಆನೆಯ ಮೇಲೆ ಕುಳಿತಿ ರುವುದು ಅರಸ, ಕೆಳಗಿರುವುದು ಆನೆ.’
“ಓಹ್‌, ಆದರೆ ಈ ಮೇಲೆ ಮತ್ತು ಕೆಳಗೆ ಅಂದರೆ ಏನು?’ ರಿಭುವಿನ ಮತ್ತೂಂದು ಪ್ರಶ್ನೆ. ನಿಧಗನಿಗೆ ತಡೆಯ ಲಾಗದಷ್ಟು ಸಿಟ್ಟು ಬಂತು. ಆತ ಮಾರು ವೇಷದಲ್ಲಿದ್ದ ರಿಭುವನ್ನು ಬಗ್ಗಿಸಿ ಅವನ ಬೆನ್ನಿನ ಮೇಲೆ ಹಾರಿ ಕುಳಿತುಕೊಂಡ ಮತ್ತು “ಮೇಲಿರುವುದು ನಾನು, ಕೆಳಗಿರುವುದು ನೀನು’ ಎಂದ.

“ಈಗಲೂ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಮನುಷ್ಯ ಮತ್ತು ಆನೆ, ಮೇಲೆ, ಕೆಳಗೆ ಇದೆಲ್ಲ ತಿಳಿಯಿತು. ಆದರೆ ನಾನು ಮತ್ತು ನೀನು ಎಂದರೆ ಏನು?’ ಎಂದು ರಿಭು ಮರಳಿ ಪ್ರಶ್ನಿಸಿದ. ಇದನ್ನು ಕೇಳಿದ ಒಡನೆಯೇ ನಿಧಗನಿಗೆ ಕೋಲ್ಮಿಂಚು ತಾಕಿದಂತಾ ಯಿತು. “ನಾನು’ ಎಂದರೆ ಏನು ಎಂಬ ಪ್ರಶ್ನೆ ಮನಸ್ಸಿನಲ್ಲಿ ನಾಟಿತು. ಹಳ್ಳಿಗ ವೃದ್ಧ ಮಾರುವೇಷಧಾರಿ ಗುರು ರಿಭು ಮಹರ್ಷಿ ಎಂಬುದೂ ಅರಿವಾಯಿತು. ಅವರ ಬೆನ್ನ ಮೇಲಿಂದ ಹಾರಿ ಇಳಿದ ನಿಧಗ ಅವರ ಪದತಲದಲ್ಲಿ ತಲೆಯಿರಿಸಿದ. ಆ ಕ್ಷಣದಲ್ಲಿ ಅವನಿಗೆ ಜ್ಞಾನದರ್ಶನವೂ ಆಯಿತು.

ಟಾಪ್ ನ್ಯೂಸ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.