ಶ್ರಾವಣ ಮಾಸದ ಜಾತ್ರಾ ಸಂಭ್ರಮ
Team Udayavani, Sep 2, 2018, 2:56 PM IST
ಬನಹಟ್ಟಿ: ಕುಲಹಳ್ಳಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಜಾತ್ರೆ ಶ್ರಾವಣ ಕೊನೆಯ ಸೋಮವಾರ ಸೆ.3ರಂದು ಜರುಗಲಿದೆ. ಈ ದೇವಸ್ಥಾನ ಎದುರಿಗೆ ಅಗ್ನಿಕುಂಡಕ್ಕಾಗಿ ದೊಡ್ಡದಾದ ಗವಿಯನ್ನು ನಿರ್ಮಿಸಲಾಗಿದ್ದು, ಇದು 13 ನೇ ಶತಮಾನದಿಂದಲೂ ಉರಿಯುತ್ತ ಬಂದಿದೆ ಎನ್ನುತ್ತಾರೆ ಇಲ್ಲಿಯ ಭಕ್ತರು. ಈ ದೇವಸ್ಥಾನ ಚಾಲುಕ್ಯರ ಕಾಲದಿಂದಲೂ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ದೇವಸ್ಥಾನ ಕುಲಹಳ್ಳಿ ಗ್ರಾಮಸ್ಥರಿಗೆ ಸುಪ್ರೀಂಕೋರ್ಟ್ ಇದ್ದಂತೆ. ಇಂತಹ ದೇವರು ಹಳ್ಳಿಯನ್ನು ಸದಾ ಬೆಳಗುತ್ತಿರುತ್ತಾರೆ ಎನ್ನುವ ಸಂಕೇತವಾಗಿ ಈ ಅಗ್ನಿಕುಂಡ ಸ್ಥಾಪನೆ ಮಾಡಲಾಗಿದೆ. ಸುಮಾರು 800ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯ ತನಕವೂ ಗ್ರಾಮಸ್ಥರ ಅಗ್ನಿಕುಂಡದಲ್ಲಿ ಬೆಂಕಿ ಆರದಂತೆ ಕಾಪಾಡಿಕೊಂಡು ಬಂದಿದ್ದಾರೆ. ಈಗಲೂ ಕೂಡಾ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಈ ಅಗ್ನಿಕುಂಡಕ್ಕೆ ಬನ್ನಿಮರದ ತುಂಡುಗಳನ್ನು ಬಳಸಲಾಗುತ್ತಿದೆ. ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಬೆಳೆದ ಬನ್ನಿ ಮರದ ದಿನ್ನೆಗಳನ್ನು ಅಗ್ನಿಕುಂಡಕ್ಕಾಗಿ ಉಚಿತವಾಗಿ ನೀಡುತ್ತಾರೆ. ಅಗ್ನಿ ಆರದಂತೆ ನೋಡಿಕೊಳ್ಳಲು ಹಗಲು-ರಾತ್ರಿಯಂತೆ ಸೇವಕರನ್ನು ನೇಮಿಸಲಾಗಿರುತ್ತದೆ. ಈ ಬೆಂಕಿ ಆರಿದ್ರೆ ಅಂದು ಕುಲಹಳ್ಳಿಗೆ ಕೇಡಾಗುತ್ತದೆ ಎಂದು ಗ್ರಾಮಸ್ಥರು ಬಲವಾಗಿ ನಂಬುತ್ತಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಜಾನನ ಬಡಿಗೇರ. ಅಗ್ನಿಕುಂಡದ ದರ್ಶನ ಪಡೆಯಲು ನಾನಾ ಭಾಗದಿಂದ ಜನರು ಆಗಮಿಸುತ್ತಾರೆ. ಗ್ರಾಮಸ್ಥರು ಅಗ್ನಿಕುಂಡದ ಪಾವಿತ್ರ್ಯ ಕಾಪಾಡಿಕೊಂಡು ಬರುತ್ತಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ