ಭೂಮಿಪುತ್ರ ಅತಂತ್ರ; ನಿರ್ದೇಶಕರು ರೆಡಿ, ನಿರ್ಮಾಪಕರು ನಾಟ್‌ ರೆಡಿ!


Team Udayavani, Jul 27, 2017, 2:53 PM IST

Bhumiputhra_(200).jpg

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯಲ್ಲಿ ನಡೆದ ವಿಷಯ ಇಟ್ಟುಕೊಂಡು “ಭೂಮಿಪುತ್ರ’ ಹೆಸರಿನ ಚಿತ್ರವೊಂದು ಶುರುವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಈ ಹಿಂದೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸೇರಿದ್ದ ಜನಜಂಗುಳಿ ನಡುವೆ ಮಾಜಿ ಪ್ರಧಾನಿ ದೇವೇಗೌಡರು ಆ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೂ ಉಂಟು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದ್ದೂ ಆಗಿತ್ತು. ಆದರೆ, ಆ ಚಿತ್ರ ಈಗ ಎಲ್ಲಿಯವರೆಗೆ ಬಂದಿದೆ ಎಂಬುದಕ್ಕೆ ಮಾತ್ರ
ಉತ್ತರವಿಲ್ಲ. ಅಂದರೆ, “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ ಹೊರತು, ಚಿತ್ರೀಕರಣ ಶುರುವಾಗಿಯೇ ಇಲ್ಲ. 
ಅಷ್ಟೇ ಯಾಕೆ, ಗಾಂಧಿನಗರದ ಗಲ್ಲಿಗಲ್ಲಿಯಿಂದಲೂ “ಭೂಮಿಪುತ್ರ’ ಶುರುವಾಗೋದು ಅನುಮಾನ ಎಂಬ
ಮಾತುಗಳೇ ಕೇಳಿಬರುತ್ತಿವೆ.

ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಅವರು, “ಭೂಮಿಪುತ್ರ’ನ ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡು, ಕಲಾವಿದರು, ತಂತ್ರಜ್ಞರೊಂದಿಗೆ ರೆಡಿಯಾಗಿದ್ದರೂ, ಗೋಧೂಳಿಯಲ್ಲಿ ಮುಹೂರ್ತ ನಡೆದದ್ದು ಬಿಟ್ಟರೆ, ಚಿತ್ರೀಕರಣ ಮಾತ್ರ ಶುರುವಾಗಿಲ್ಲ. 

ಭರ್ಜರಿ ಮುಹೂರ್ತ ನಡೆಸಿದ ನಿರ್ಮಾಪಕರು ಈಗ ಚಿತ್ರೀಕರಣ ಶುರುಮಾಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಮುಹೂರ್ತ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಹಣ ಬ್ಯಾಲೆನ್ಸ್‌ ಇದೆ, ಅದನ್ನೇ ಕ್ಲಿಯರ್‌ ಮಾಡಿಲ್ಲ, ಇನ್ನು ಸಿನಿಮಾ ಶುರುವಾಗುತ್ತದಾ ಎಂಬ ಮಾತುಗಳು ಸಹ ಗಾಂಧಿನಗರದಿಂದ ಕೇಳಿಬರುತ್ತಿವೆ. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ, “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ಕೊಟ್ಟು, ಈಗ ಯಾವುದೇ ಕೆಲಸಗಳು ಮುಂದುವರೆದಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನಿರ್ಮಾಪಕರ ಈ ನಡೆಯಿಂದ, ಚಿತ್ರತಂಡ ಕೂಡ ಮುಂದುವರೆಯಬೇಕಾ, ಕಾಯಬೇಕಾ ಅಥವಾ ಪ್ರಾಜೆಕ್ಟ್ ಬಿಡಬೇಕಾ ಎಂಬ ಗೊಂದಲದಲ್ಲಿದೆ.  “ಭೂಮಿಪುತ್ರ’ ಚಿತ್ರದ ಕೆಲಸ ಎಲ್ಲಿಯವರೆಗೆ ಬಂದಿದೆ ಎಂಬ ಪ್ರಶ್ನೆಗೆ, “ಉದಯವಾಣಿ’ ಜೊತೆಗೆ ಮಾತನಾಡಿದ ನಾರಾಯಣ್‌, “ಚಿತ್ರದ ಸ್ಕ್ರಿಪ್ಟ್ ರೆಡಿ ಇದೆ. ಹೀರೋ ಸೇರಿದಂತೆ ಕಲಾವಿದರು, ತಂತ್ರಜ್ಞರು ಕಾಯುತ್ತಿದ್ದಾರೆ. ಆದರೆ, ನಿರ್ಮಾಪಕರಿಂದ ಶೂಟಿಂಗ್‌ಗೆ ಹೋಗಲು ಇನ್ನೂ ಗ್ರೀನ್‌ಸಿಗ್ನಲ್‌
ಸಿಕ್ಕಿಲ್ಲ. ನಾವೆಲ್ಲ ರೆಡಿ ಇದ್ದೇವೆ. ಅವರು ಇದುವರೆಗೆ ಮಾತಿಗೆ ಸಿಕ್ಕಿದ್ದು ಕೇವಲ ಮೂರು ಬಾರಿಯಷ್ಟೇ.
ಚಿತ್ರೀಕರಣದ ಬಗ್ಗೆ ಸ್ಪಷ್ಟತೆ ಕೊಟ್ಟಿಲ್ಲ. ಅವರು ನಾಳೆ ಶೂಟಿಂಗ್‌ಗೆ ಹೋಗಿ ಅಂದರೂ, ನಾಡಿದ್ದೇ,
ಶೂಟಿಂಗ್‌ ಹೋಗೋಕೆ ನಾವು ರೆಡಿ ಇದ್ದೇವೆ. 

ಆದರೆ, ಅವರೇಕೆ ತಟಸ್ಥವಾಗಿದ್ದಾರೋ ಗೊತ್ತಿಲ್ಲ’ ಎನ್ನುತ್ತಾರೆ. ಅದೇನೆ ಇದ್ದರೂ, ಸ್ಟಾರ್‌ ನಟರು, ನುರಿತ ತಂತ್ರಜ್ಞರನ್ನು ಸೇರಿಸಿ ಸಿನಿಮಾ ಮಾಡೋಕೆ ಹೊರಟಿದ್ದ ನಾರಾಯಣ್‌, ಈ ಚಿತ್ರಕ್ಕಾಗಿ ಎರಡು ಸಿನಿಮಾ ಕೈ ಬಿಟ್ಟಿದ್ದಾರಂತೆ. “ನಿರ್ಮಾಪಕರಲ್ಲಿ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಯಾವುದಕ್ಕೂ ಅವರು ಉತ್ತರ ನೀಡುತ್ತಿಲ್ಲ. “ಭೂಮಿಪುತ್ರ’ ಸದ್ಯಕ್ಕೆ ತಟಸ್ಥವಾಗಿದೆ. ಮುಂದೇನೋ ಗೊತ್ತಿಲ್ಲ’ ಎಂಬುದು
ಅವರ ಮಾತು.

ಒಟ್ಟಿನಲ್ಲಿ, “ಭೂಮಿಪುತ್ರ’ ಸೆಟ್ಟೇರುತ್ತಾ? ಗೊತ್ತಿಲ್ಲ. ಆದರೆ, ನಿರ್ಮಾಪಕ ಪ್ರಭುಕುಮಾರ್‌ ಅವರು ದೊಡ್ಡದ್ದೊಂದು ಕಾರ್ಯಕ್ರಮ ಮಾಡಿ, ಪ್ರಚಾರ ಪಡೆದುಕೊಂಡಿದ್ದಷ್ಟೇ ಭಾಗ್ಯ. 

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.